ಬೆಂಗಳೂರು: ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಇಂದು ಬೃಹತ್ ಪ್ರತಿಭಟನಾ ಸಭೆಗೆ ಗೋರಿಪಾಳ್ಯ ಸಜ್ಜಾಗುತ್ತಿದೆ.
ಸುಮಾರು 20 ಸಾವಿರ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗಿಯಾಗಿ ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರೋ ಸಿಎಎ, ಎನ್ಸಿಆರ್ ಹಾಗೂ ಎನ್ಪಿಆರ್ ವಿರುದ್ಧ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲು ಮುಂದಾಗಿದ್ದಾರೆ.
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಜಮೀರ್ ಅಹಮ್ಮದ್ ಖಾನ್ ನೇತೃತ್ವದಲ್ಲಿ ಪ್ರತಿಭಟನಾ ಸಭೆಯನ್ನ ಆಯೋಜನೆ ಮಾಡಲಾಗಿದೆ.
ಕೇಂದ್ರ ಸರ್ಕಾರದ ಪೌರತ್ವ ನಿಷೇಧ ಕಾಯ್ದೆಯನ್ನ ವಿರೋಧಿಸಿ ನಡೆಯುತ್ತಿರೋ ಬೃಹತ್ ಮಹಿಳಾ ಪ್ರತಿಭಟನೆ ಇದಾಗಿದ್ದು ಅನೇಕ ಮುಸ್ಲಿಂ ಧರ್ಮ ಗುರುಗಳು ಸಾಮಾಜಿಕ ಚಿಂತಕರು ಭಾಗಿಯಾಗಲಿದ್ದಾರೆ.