ಬೆಂಗಳೂರು: ಹೊಡೆದರೆ ಆನೆಯನ್ನೇ ಹೊಡೆಯಬೇಕು ಅಂದುಕೊಂಡು ಕೋಟಿ ಕೊಳ್ಳೆ ಹೊಡೆಯಲು ಸ್ಕೆಚ್ ಹಾಕಿದ್ದವನೊಬ್ಬ ಕೊನೆಗೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಸ್ಟೀಲ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಚಿನ್ನದ ಅಂಗಡಿ ಮಾಲೀಕನನ್ನು ಅಪಹರಣ ಮಾಡಲು ಸ್ಕೆಚ್ ಹಾಕಿದ್ದ. ಆದರೆ ಕಿಡ್ನಾಪ್ ಮಾಡೋ ಹಿಂದಿನ ದಿನ ಕುಡಿದು ಸಿಕ್ಕಿಬಿದ್ದಿದ್ದಾನೆ.
ಬೆಂಗಳೂರಿನ ನಗರ್ತಪೇಟೆಯ ಜೆಕೆಎಸ್ ಜ್ಯುವೆಲ್ಲರಿ ಶಾಪ್ ಮಾಲೀಕ ಜೈ ಕಿಶನ್ ಪ್ರಸಾದ್ ಅವರನ್ನು ಸುಲಿಗೆ ಮಾಡೋ ತಯಾರಿ ನಡೆಸಿದ್ದ ಸ್ಟೀಲ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ವಿಕ್ರಂ, ಚೆನ್ನಾಗಿಯೇ ಕಿಡ್ನಾಪ್ ಸ್ಕೆಚ್ ರೂಪಿಸಿದ್ದ. ಜೈ ಕಿಶನ್ನ ಅಪಹರಣ ಮಾಡ್ಬೇಕು ಎಂದರೆ ಅವನ ಚಲನವಲದ ಮೇಲೆ ಕಣ್ಣಿಡಬೇಕು ಇಲ್ಲವಾದರೆ ಅವನ ಕಿಡ್ನ್ಯಾಪ್ ಮಾಡೋದಕ್ಕೆ ಸಾಧ್ಯ ಇಲ್ಲ ಎಂದು ಅವನ ಹಿಂಬದಿಯಲ್ಲಿಯೇ ಇದ್ದು ಸ್ಕೆಚ್ ಹಾಕಿಕೊಂಡಿದ್ದ. ಆದರೆ ಎಣ್ಣೆ ಏಟು ಅವನ ಪ್ಲಾನ್ ಎಲ್ಲವನ್ನೂ ಉಲ್ಟಾ ಮಾಡಿದೆ.
ಸರಿಸುಮಾರು ಎರಡು ತಿಂಗಳುಗಳ ಕಾಲ ಸ್ಕೆಚ್ ಹಾಕಿದ್ದ ವಿಕ್ರಂಗೆ ದಿನ ರಾತ್ರಿ ಆಯ್ತು ಅಂದ್ರೆ ಕುಡಿಯೋ ಅಭ್ಯಾಸ ಇತ್ತು. ನಾಳೆ ಕಿಡ್ನ್ಯಾಪ್ ಮಾಡ್ಬೇಕು ಅಂದುಕೊಂಡಿದ್ದಾಗ ಕುಡಿಯೋಕೆ ಕುಳಿತ್ತಿದ್ದಾನೆ. ಬಾರ್ನಲ್ಲಿ ಕುಳಿತು ಕುಡಿಯೋವಾಗ ತನ್ನ ಸ್ನೇಹಿತನ ಬಳಿ ನಾನು ಕಿಶನ್ನನ್ನು ಅಪಹರಣ ಮಾಡೋದಕ್ಕೆ ಸ್ಕೆಚ್ ಹಾಕಿದ್ದೀನಿ ಎಂದು ಹೇಳಿಕೊಂಡಿದ್ದಾನೆ. ಈ ವಿಚಾರವನ್ನು ವಿಕ್ರಂ ಸ್ನೇಹಿತ ಪೊಲೀಸರಿಗೆ ತಿಳಿಸಿದ್ದು, ವಿಕ್ರಂ ನನ್ನು ಎಸ್.ಜೆ ಪಾರ್ಕ್ ಪೊಲೀಸ್ರು ಬಂಧಿಸಿದ್ದಾರೆ.