Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Belgaum

ದಾಯಾದಿ ಕಲಹ- ತಾವೇ ಕಟ್ಟಿದ ಸಾಮ್ರಾಜ್ಯ ಕೆಡವಲು ಮುಂದಾಗಿದ್ದೇಕೆ ಜಾರಕಿಹೊಳಿ ಬ್ರದರ್ಸ್?

Public TV
Last updated: September 14, 2019 11:31 am
Public TV
Share
3 Min Read
Jarkiholi Fight.jpeg
SHARE

-ಹೊಸ ತಿರುವು ಪಡೆದ ಜಾರಕಿಹೊಳಿ ಬ್ರದರ್ಸ್ ಫೈಟ್!

ಬೆಳಗಾವಿ: ಕಳೆದ ಮೂವತ್ತು ವರ್ಷದಿಂದ ಅಣ್ಣ ತಮ್ಮಂದಿರೆಲ್ಲರೂ ಸೇರಿಕೊಂಡು ಕಟ್ಟಿದ್ದ ಕೋಟೆಯದು. ಜನರ ಒಳಿತಿಗಾಗಿ ಸಮಾಜದ ಸೇವೆಗಾಗಿ ಕಟ್ಟಿದ ಸಾಮ್ರಾಜ್ಯ ಆರಂಭದಲ್ಲಿ ಒಳೆಯ ಕೆಲಸ ಮಾಡಿತು. ಆದರೆ ಅಣ್ಣ-ತಮ್ಮಂದಿರ ರಾಜಕೀಯ ಕಿತ್ತಾಟದಿಂದ ಇಂದು ಆ ಕೋಟೆಯನ್ನ ಕಟ್ಟಿ ಬೆಳೆಸಿದ ಸಹೋದರನೇ ಕೆಡವಲು ಹೊರಟಿದ್ದಾರೆ.

ಗೋಕಾಕ್ ಅಂದ್ರೆ ಜಾರಕಿಹೊಳಿ, ಜಾರಕಿಹೊಳಿ ಅಂದ್ರೆ ಗೋಕಾಕ್ ಅನ್ನುವಷ್ಟರ ಮಟ್ಟಿಗೆ ರಾಜ್ಯದಲ್ಲಿ ಪ್ರಸಿದ್ಧಿಯಾಗಿತ್ತು. ಈ ಜಾರಕಿಹೊಳಿ ಸಾಮ್ರಾಜ್ಯ, ಅಣ್ಣ-ತಮ್ಮಂದಿರು ಒಂದಾಗಿದ್ದರೆ ಏನೆಲ್ಲಾ ಮಾಡಬಹುದು ಅನ್ನೋದಕ್ಕೆ ಉದಾಹರಣೆ ಆಗಿತ್ತು. ಆದರೆ ಎಷ್ಟೇ ಆದರೂ ಅಣ್ಣ-ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಅನ್ನುವ ಗಾದೆ ಎಂದಿಗೂ ಸುಳ್ಳಾಗಲ್ಲ ಎಂಬುದು ಮತ್ತೊಮ್ಮೆ ನಿಜ ಆಗಿದೆ.

BLG RAMESH JARKIHOLI

ಗೋಕಾಕ್ ಸಾಹುಕಾರರಾದ ಜಾರಕಿಹೊಳಿ ಬ್ರದರ್ಸ್ ನಡುವೆ ಸದ್ಯ ರಾಜಕೀಯ ಪೈಟ್ ಆರಂಭವಾಗಿದೆ. ಒಂದು ಕಡೆ ಅನರ್ಹ ಶಾಸಕ ರಮೇಶ್ ಮತ್ತು ಬಿಜೆಪಿ ಶಾಸಕ ಬಾಲಚಂದ್ರ ಇದ್ದರೆ ಇನ್ನೊಂದು ಕಡೆ ಮಾಜಿ ಸಚಿವ ಸತೀಶ್ ಮತ್ತು ಕಾಂಗ್ರೆಸ್ ಮುಖಂಡ ಲಖನ್ ಇದ್ದಾರೆ. ಈ ಅಣ್ಣ-ತಮ್ಮಂದಿರ ಜಗಳದಿಂದ ಮೂವತ್ತು ವರ್ಷದ ಹಿಂದೆ ಕಟ್ಟಿಕೊಂಡಿದ್ದ ಜಾರಕಿಹೊಳಿ ಸಾಮ್ರಾಜ್ಯವನ್ನ ಕಟ್ಟಿ ಬೆಳೆಸಿದ್ದ ಸತೀಶ್ ಕೆಡವಲು ಮುಂದಾಗಿದ್ದಾರೆ. ಕಳೆದ ಐದು ಬಾರಿ ಗೋಕಾಕ್ ನಲ್ಲಿ ಶಾಸಕನಾಗಿ ಆಡಳಿತ ನಡೆಸಿರುವ ರಮೇಶ್ ಇತ್ತಿಚೀನ ದಿನಗಳಲ್ಲಿ ಯಾವುದೇ ಕೆಲಸ ಮಾಡದೇ ಬರೀ ಬ್ಲ್ಯಾಕ್ ಮೇಲ್ ರಾಜಕಾರಣ ಮಾಡಿಕೊಂಡು ಬರುತ್ತಿದ್ದಾರೆ ಎನ್ನಲಾಗುತ್ತಿದ್ದು, ಖುದ್ದು ಸಹೋದರ ಸತೀಶ್ ಜಾರಕಿಹೊಳಿ ಅಣ್ಣನ ವಿರುದ್ಧ ಇಂತಹದ್ದೊಂದು ಆರೋಪ ಮಾಡಿದ್ದಾರೆ.

Balachandra Jarkiholi

ಗೋಕಾಕ್ ನಲ್ಲಿ ಸದ್ಯ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ನೂರಕ್ಕೂ ಅಧಿಕ ಕೇಸ್ ದಾಖಲಾಗಿದ್ದು, ಕಾರಣವಿಲ್ಲದೇ ಈ ರೀತಿ ಪೊಲೀಸರು ಕೇಸ್ ಮಾಡುತ್ತಿದ್ದಾರೆ ಎಂದು ಖದ್ದು ಸತೀಶ್ ಜಾರಕಿಹೊಳಿ ಎಸ್.ಪಿ ಲಕ್ಷ್ಮಣ್ ಅವರಿಗೆ ಪತ್ರ ಬರೆದಿದ್ದಾರೆ. ಇದರಿಂದ ಸದ್ಯ ಗೋಕಾಕ್ ನಲ್ಲಿ ಬೇರೊಂದು ರೀತಿಯಲ್ಲಿ ರಾಜಕೀಯ ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.

ಕಳೆದ ಒಂದು ವಾರದ ಹಿಂದಷ್ಟೇ ರಮೇಶ್ ಜಾರಕಿಹೊಳಿ ಸಾವಿರಾರು ಜನರನ್ನ ಸೇರಿಸಿ ಸಂಕಲ್ಪ ಸಮಾವೇಶ ಮಾಡಿ ವೋಟ್ ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳುವ ಕೆಲಸ ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ಸದ್ಯ ಸತೀಶ್ ಕೂಡ ಬೇರೊಂದು ರೀತಿಯ ಗೇಮ್ ಆಡುತ್ತಿದ್ದು, ತಮ್ಮತ್ತ ಗೋಕಾಕ್ ಜನರನ್ನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಎಲ್ಲ ಬೆಳವಣಿಗೆ ನಡುವೆ ಕಳೆದ ನಾಲ್ಕು ದಿನಗಳ ಹಿಂದೆ ರಮೇಶ್ ಜಾರಕಿಹೊಳಿ ಗೋಕಾಕ್ ಅಧಿಕಾರಿಗಳ ಸಭೆ ಕರೆದು ಅಳಿಯ ಅಂಬಿರಾವ್ ಪಾಟೀಲ್ ಹೇಳಿದಂತೆ ಕೆಲಸ ಮಾಡಿ ಎಂದು ಸೂಚನೆ ಕೂಡ ನೀಡಿದ್ದಾರೆ ಎನ್ನಲಾಗಿದೆ.

Satish balachandra Ramesh Jarkiholi

ಇದು ಸತೀಶ್ ಗೆ ನಿದ್ದೆಗೆಡಸಿದ್ದು ಈ ಕಾರಣಕ್ಕೆ ಅಳಿಯ ಅಂಬಿರಾವ್ ವಿರುದ್ಧ ಶುಕ್ರವಾರ ಹರಿಹಾಯ್ದಿದ್ದಾರೆ. ಅಷ್ಟೇ ಅಲ್ಲದೆ ಅಂಬಿರಾವ್ ಗೆ ನಮ್ಮ ಬಗ್ಗೆ ಭಯವಿಲ್ಲ. ಗೋಕಾಕ್ ನಲ್ಲಿ ಜನರ ಮೇಲೆ ಗುಲಾಮಗಿರಿ ನಡೆಸುತ್ತಿದ್ದು, ಈ ಕಾರಣಕ್ಕೆ ಜನರಿಗೆ ಸ್ವಾತಂತ್ರ್ಯ ಕೊಡಿಸಲು ಹೋರಾಟ ಮಾಡುತ್ತಿದ್ದೇನೆ. ಗೋಕಾಕ್ ಜನರಿಗೆ ಅಂಬಿರಾವ್ ಪಾಟೀಲ್ ನಿಂದ ಸ್ವಾತಂತ್ರ್ಯಗೊಳ್ಳಬೇಕಿದೆ. ಅಷ್ಟೇ ಅಲ್ಲದೆ ಮೂವತ್ತು ವರ್ಷಗಳ ಹಿಂದೆ ಜಾರಕಿಹೊಳಿ ಕೋಟೆಯನ್ನ ಸಮಾಜ ಸೇವೆ ಮಾಡಲು ಕಟ್ಟಿದ್ದೆವು. ಈಗ ಜಾರಕಿಹೊಳಿ ಶಕ್ತಿ ಒಳ್ಳೆಯದಕ್ಕೆ ಬಳಕೆ ಆಗುತ್ತಿಲ್ಲ. ಈ ಕಾರಣಕ್ಕೆ ಅದನ್ನ ಕೆಡುವ ಚಿಂತನೆಗೆ ಬಂದಿದ್ದೇವೆ. ಹೀಗೆ ಜಾರಕಿಹೊಳಿ ಕಟ್ಟಿ ಬೆಳೆಸಿದ ಸತೀಶ್ ಜಾರಕಿಹೊಳಿ ಸಹೋದರನ ವಿರುದ್ಧ ಫೈಟ್ ಗಿಳಿದಿದ್ದು ಅಷ್ಟೇ ಅಲ್ಲದೆ ತಾವೇ ಕಟ್ಟಿ ಬೆಳೆಸಿ ಕೋಟೆಯನ್ನ ಇಂದು ಕೆಡವಲು ಮುಂದಾಗಿದ್ದಾರೆ. ಇದು ಉಪಚುನಾವಣೆಯಲ್ಲಿ ಜಾರಕಿಹೊಳಿ ವಿರೋಧಿ ಬಣವನ್ನ ಸೆಳೆಯುವ ತಂತ್ರ ಕೂಡ ಅಂತಾ ಕೆಲವು ಬಿಂಬಿಸುತ್ತಿದ್ದಾರೆ.

lakhan jarkiholi

ಒಟ್ಟಿನಲ್ಲಿ ಅಣ್ಣ-ತಮ್ಮಂದಿರ ಜಗಳ ಕಳೆದ ಆರು ತಿಂಗಳಿನಿಂದಲೂ ಆರಂಭವಾಗಿದ್ದು, ಈಗ ಬೇರೆ ರೀತಿಯ ತಿರುವು ಪಡೆದುಕೊಂಡಿದೆ ಈ ಬ್ರದರ್ಸ್ ಫೈಟ್ ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಅನ್ನೋ ಹಾಗೆ ಇಬ್ಬರು ಅಣ್ತಮ್ಮಂದಿರ ನಡುವೆ ಸದ್ಯ ಗೋಕಾಕ್ ನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಅಧಿಕಾರಿಗಳು ತಮ್ಮ ಕೆಲಸ ಮಾಡಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿ ಎನನ್ನೂ ಮಾಡದ ಸ್ಥಿತಿಯಲ್ಲಿದ್ದಾರೆ. ಇತ್ತ ಆಯಾ ಬೆಂಬಲಿಗರ ಮೇಲೆ ಕೇಸ್ ಕೂಡ ಆಗುತ್ತಿದ್ದು, ಈ ಎಲ್ಲ ಕಾರಣಕ್ಕೆ ಸದ್ಯ ಗೋಕಾಕ್ ನ ಜನರು ಸಿಕ್ಕು ನಲಗುವಂತಾಗಿದೆ.

TAGGED:balachandra jarakiholibjpcongressGokakLakhan JarakiholipoliticsPublic TVRamesh jarakiholiSatish Jarakiholiಕಾಂಗ್ರೆಸ್ಗೋಕಾಕ್ಪಬ್ಲಿಕ್ ಟಿವಿಬಾಲಚಂದ್ರ ಜಾರಕಿಹೊಳಿಬಿಜೆಪಿರಮೇಶ್ ಜಾರಕಿಹೊಳಿರಾಜಕೀಯಲಖನ್ ಜಾರಕಿಹೊಳಿಸತೀಶ್ ಜಾರಕಿಹೊಳಿ
Share This Article
Facebook Whatsapp Whatsapp Telegram

Cinema Updates

Kamal Haasan
ಮೊದಲು ಕ್ಷಮೆ ಕೇಳಿ, ಜನರ ಭಾವನೆಗೆ ಧಕ್ಕೆ ತರಬೇಡಿ: ಕಮಲ್‌ಗೆ ಹೈಕೋರ್ಟ್‌ ಚಾಟಿ
2 hours ago
Thug Life 2
ಕಮಲ್ ಹಾಸನ್‌ಗೆ ಇಂದು ನಿರ್ಣಾಯಕ ದಿನ – ಹೈಕೋರ್ಟ್‌ನಲ್ಲಿ ‘ಥಗ್‌ಲೈಫ್’ ಬಿಡುಗಡೆ ನಿರ್ಧಾರ
5 hours ago
Ananth Nag MODI
ಹೈ ಟೀ ಸಮಾರಂಭದಲ್ಲಿ ಮೋದಿ ಭೇಟಿಯಾದ ಅನಂತ್‌ನಾಗ್‌
16 hours ago
Vikram Sugumaran
ನಿರ್ಮಾಪಕರಿಗೆ ಕತೆ ಹೇಳಿ ವಾಪಸ್ ಆಗುತ್ತಿದ್ದಾಗ ಹೃದಯಾಘಾತ – ತಮಿಳು ನಿರ್ದೇಶಕ ವಿಕ್ರಂ ಸುಗುಮಾರನ್ ನಿಧನ
18 hours ago

You Might Also Like

Harangi Dam Kodagu
Districts

ಹಾರಂಗಿ ಬಹುತೇಕ ಭರ್ತಿ – ಇತಿಹಾಸದಲ್ಲೇ ಮೊದಲ ಬಾರಿಗೆ ಮೇ ತಿಂಗಳಾಂತ್ಯದಲ್ಲಿ ಹೆಚ್ಚು ಪ್ರಮಾಣದ ನೀರು ಸಂಗ್ರಹ

Public TV
By Public TV
21 minutes ago
bengaluru police commissioner b dayanand
Bengaluru City

IPL Final | ಸಂಭ್ರಮಾಚರಣೆ ವೇಳೆ ಸಾರ್ವಜನಿಕರಿಗೆ ತೊಂದರೆ ಕೊಟ್ರೆ ಕ್ರಮ – ಬಿ.ದಯಾನಂದ್

Public TV
By Public TV
42 minutes ago
Narendra Modi Stadium 2
Cricket

IPL 2025 Final – ಪಂದ್ಯಕ್ಕೂ ಮುನ್ನವೇ ಮೋದಿ ಸ್ಟೇಡಿಯಂ ಹೊರಗೆ ಸಿಲಿಂಡರ್ ಬ್ಲಾಸ್ಟ್

Public TV
By Public TV
55 minutes ago
Chamarajanagar Mariyala School
Chamarajanagar

Chamarajanagar | ಶಿಕ್ಷಕರ ಒಳಜಗಳ ಆರೋಪ – ಮರಿಯಾಲ ಸರ್ಕಾರಿ ಶಾಲೆಯಲ್ಲಿ ಝೀರೋ ಅಡ್ಮಿಷನ್

Public TV
By Public TV
1 hour ago
Mysuru Road Accident
Bengaluru City

ಬೆಂಗಳೂರು| ಓವರ್‌ಟೇಕ್ ಮಾಡಲು ಹೋಗಿ ಪರಸ್ಪರ ಬೈಕ್ ಡಿಕ್ಕಿ – ಇಬ್ಬರು ಸಾವು

Public TV
By Public TV
2 hours ago
Narendra Modi
Latest

ಅಸ್ಸಾಂನಲ್ಲಿ ಭೀಕರ ಪ್ರವಾಹ – ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾಗೆ ಮೋದಿ ಕರೆ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?