ಬೆಳಗಾವಿ ಬಿಜೆಪಿಯಲ್ಲಿ ಬಣ ಸಂಘರ್ಷ – ಕಚ್ಚಾಟಕ್ಕೆ ತೆರೆ ಎಳೆಯಲು ಅಮಿತ್ ಶಾ ಸೂತ್ರ

Public TV
2 Min Read
AMITSHAH 3

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬೆಳಗಾವಿ ರಾಜಕಾರಣಕ್ಕೆ ಅದರದ್ದೇ ಆದ ವಿಶೇಷ ಸ್ಥಾನ‌ ಇದೆ. ಎರಡೂ ರಾಷ್ಟ್ರೀಯ ಪಕ್ಷಗಳಿಗೂ ಬೆಳಗಾವಿ (Belagavi) ಪ್ರತ್ಯೇಕ ಅಧ್ಯಾಯದಂತೆ. ಇಂತಹ ಬೆಳಗಾವಿ ರಾಜಕಾರಣದಲ್ಲಿ ಸದಾ ಸಂಘರ್ಷ, ಕಚ್ಚಾಟ, ಪ್ರತಿಷ್ಠೆ, ಮೇಲಾಟಗಳದ್ದೇ ಆರ್ಭಟ ಇರುತ್ತೆ. ಇದೀಗ ಬಿಜೆಪಿ (BJP) ನಾಯಕರಿಗೆ ಬೆಳಗಾವಿ ಬಣ ರಾಜಕಾರಣ ದೊಡ್ಡ ತಲೆಬಿಸಿಯಾಗಿ ಪರಿಣಮಿಸಿದೆ.

18 ವಿಧಾನಸಭೆ ಕ್ಷೇತ್ರಗಳಿರುವ ಕುಂದಾ ನಗರಿಯಲ್ಲಿ ಈ ಬಾರಿ ಒಗ್ಗಟ್ಟೇ ಬಲ ತಂದುಕೊಡುವ ರಾಜಮಾರ್ಗವಾಗಿದೆ.‌ ಆದರೆ ಬೆಳಗಾವಿ ನೆಲದಲ್ಲಿ ಒಗ್ಗಟ್ಟು ಅಂದ್ರೆ ಒಂದು ರೀತಿಯಲ್ಲಿ ವರ್ಜ್ಯ. ಹೀಗಾಗಿ ಒಟ್ಟಾಗಿ ಹೋಗದೇ ಇದ್ದರೆ ಚುನಾವಣೆಯಲ್ಲಿ ಹಿನ್ನಡೆ ಆಗುವ ಭೀತಿ ಕಮಲ ಪಡೆಗೆ ಕಾಡುತ್ತಿದೆ.

BJP FLAG

ಬೆಳಗಾವಿ ಬಿಜೆಪಿಯಲ್ಲಿ ಒಗ್ಗಟ್ಟು ತರುವ, ಬಣ ರಾಜಕೀಯ ಕೊನೆಗಾಣಿಸುವ ರಾಜ್ಯ ನಾಯಕರ ಇದುವರಿಗಿನ ಪ್ರಯತ್ನಗಳು ಕೈಗೂಡಿಲ್ಲ. ಹೀಗಾಗಿ ಇದೀಗ ಬೆಳಗಾವಿ ಭಿನ್ನಮತ ಶಮನಕ್ಕೆ ಹೈಕಮಾಂಡ್ ಮಧ್ಯಪ್ರವೇಶಿಸಿದೆ. ಬೆಳಗಾವಿ ಬ್ಯಾಟಲ್ ಟ್ಯಾಕಲ್ ಮಾಡುವುದಕ್ಕೆ ಖುದ್ದು ಬಿಜೆಪಿಯ ಚಾಣಕ್ಯ ಅಮಿತ್ ಶಾ (amit shah) ಎಂಟ್ರಿ ಕೊಡುತ್ತಿದ್ದಾರೆ. ಇದೇ ತಿಂಗಳ 27, 28ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ.

28 ರಂದು ಬೆಳಗಾವಿಗೆ ಭೇಟಿ ಕೊಟ್ಟು ನಾಯಕರ ಜತೆ ಮಹತ್ವದ ಸಭೆಯನ್ನು ಅಮಿತ್ ಶಾ ನಡೆಸಲಿದ್ದಾರೆ. ಜಿಲ್ಲೆಯಲ್ಲಿ ಉಂಟಾಗಿರುವ ಬಣ ರಾಜಕಾರಣಕ್ಕೆ ತೆರೆ ಎಳೆಯಲು ಅಮಿತ್ ಶಾ ನಿರ್ಧರಿಸಿದ್ದಾರೆ. ಈಗಾಗಲೇ ಬೆಳಗಾವಿ ಬಣ ಸಂಘರ್ಷದ ಬಗ್ಗೆ ರಾಜ್ಯ ಬಿಜೆಪಿ ಘಟಕವು ವರಿಷ್ಠರ ಗಮನಕ್ಕೆ ತಂದಿದೆ. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಪಕ್ಕಾ ಪ್ಲಾನ್ ಜತೆಯೇ ಬರುತ್ತಿದ್ದಾರೆ ಎನ್ನಲಾಗಿದೆ.

ramesh jarakiholi

ಕಳೆದ ವರ್ಷ ನಡೆದ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಡಬಲ್ ಸೋಲು ಎದುರಾಯ್ತು. ಪಕ್ಷದ ಅರುಣ್ ಷಹಾಪೂರ, ಮಹಾಂತೇಶ್ ಕವಟಗಿಮಠ ಇಬ್ಬರು ಪರಿಷತ್ ಚುನಾವಣೆಯಲ್ಲಿ ಸೋಲು ಕಾಣಬೇಕಾಯಿತು. ಈ ಡಬಲ್ ಸೋಲಿಗೆ ಬಣ ಕಚ್ಚಾಟವೇ ಮೇನ್ ರೀಸನ್ ಅಂತ ವಿಮರ್ಶಿಸಲಾಗಿದೆ. ಈ ಎರಡು ಸೋಲುಗಳಿಂದ ಇದೀಗ ಎಚ್ಚೆತ್ತ ಬಿಜೆಪಿಯು ವಿಧಾನಸಭೆ ಚುನಾವಣೆಗೂ ಮುನ್ನವೇ ಸಮಸ್ಯೆ ಸರಿಪಡಿಸಲು ಮುಂದಾಗಿದೆ. ಇದನ್ನೂ ಓದಿ: ಶಕ್ತಿ ಪ್ರದರ್ಶನಕ್ಕೆ ಮುಂದಾದ ಕ್ಷತ್ರಿಯರು – ಜ.29ಕ್ಕೆ ಬೆಂಗಳೂರಿನಲ್ಲಿ ಬೃಹತ್‌ ಸಮಾವೇಶ

laxman savadi

ಬೆಳಗಾವಿ ಬಿಜೆಪಿ ನಾಯಕರ ಮಧ್ಯೆ ಪ್ರತಿಷ್ಠೆ ಸಮರ ಮೊದಲಿಂದಲೂ ಇದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarakiholi) ಬ್ರದರ್ಸ್ ಮತ್ತು ಲಕ್ಷ್ಮಣ ಸವದಿ (Laxman Savadi), ಸಚಿವೆ ಜೊಲ್ಲೆ, ರಮೇಶ್ ಕತ್ತಿ ಟೀಮ್ ನಡುವೆ ಸಂಘರ್ಷ ಮನೆ ಮಾಡಿದೆ. ಇದುವರೆಗೂ ಜಿಲ್ಲೆಯಲ್ಲಿ ಬಿಜೆಪಿ ನಾಯಕರು ಯಾವ ಸಂದರ್ಭದಲ್ಲೂ ಒಟ್ಟಾಗಿ ಹೋಗಿಲ್ಲ. ಕಳೆದ ವರ್ಷ ಮಾಜಿ ಸಿಎಂ ಯಡಿಯೂರಪ್ಪ (BS Yediyurappa)  ಮತ್ತು‌ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಎರಡೂ ಬಣಗಳ ಜತೆ ನಡೆಸಿದ ಸಂಧಾನ ಸಭೆ ವಿಫಲವಾಗಿತ್ತು. ಇದೀಗ ಬೆಳಗಾವಿ ಬ್ಯಾಟಲ್‌ಗೆ ಅಮಿತ್ ಶಾ ಪರಿಹಾರ ಸೂತ್ರ ಏನು ಅನ್ನುವ ಕುತೂಹಲ ಕೆರಳಿದೆ. ಅಮಿತ್ ಶಾ ಬಳಿ ಇರೋದು ಸಂಧಾನ ಸೂತ್ರವೋ, ಅಥವಾ ವಾರ್ನಿಂಗ್ ಸೂತ್ರವೋ ಅಥವಾ ತಾತ್ಕಾಲಿಕ ಮುಲಾಮು ಹಚ್ಚಿ ಹೋಗುವ ಕಸರತ್ತೋ ಅನ್ನೋದು ಅವರು ಬಂದ ಮೇಲಷ್ಟೇ ಸ್ಪಷ್ಟವಾಗಲಿದೆ. ಇದನ್ನೂ ಓದಿ: 3,455 ಕೋಟಿ ರೂ. ಬಂಡವಾಳ ಹೂಡಿಕೆಗೆ ಅನುಮೋದನೆ – 18,567 ಜನರಿಗೆ ಉದ್ಯೋಗ ಸೃಷ್ಟಿ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *