ನವದೆಹಲಿ: ಜಮೀರ್ ಅಹ್ಮದ್ ಖಾನ್ (Zameer Ahmed) ಹೃದಯವಂತ ಸಚಿವ, ದಿಲ್ ದಾರ್.. ಶ್ಹಾನ್ ದಾರ್ ಮನುಷ್ಯ.. ಉತ್ಸಾಹದಲ್ಲಿ ಅಲ್ಪಸಂಖ್ಯಾತರ ಪರ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಜಮೀರ್ ಶ್ರೀಮಂತ, ಚಿಲ್ಲರೆ ದುಡ್ಡು ಅವರಿಗೆ ಯಾಕ್ ಬೇಕರ್ರೀ.. ಅವರು ರಾಜೀನಾಮೆ ನೀಡುವ ಅಗತ್ಯ ಇಲ್ಲ. ಅವರು ಮುಂದುವರಿಬೇಕು ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ (Basavaraj Rayareddy) ತಿಳಿಸಿದರು.
ದೆಹಲಿಯಲ್ಲಿ ಮಾತನಾಡಿದ ಅವರು, ನಾನು ಹಿರಿಯ ನಾಯಕ, ಶಾಸಕ.. ಶಾಸಕರ ಕಷ್ಟ ನನಗೆ ಅರ್ಥ ಆಗುತ್ತೆ. ಶಾಸಕರಿಗೆ ಸಮಾಧಾನ ಇಲ್ಲದೇ ಇರಬಹುದು. ಆದರೆ, ಇದು ಅಸಮಾಧಾನ ಅಲ್ಲ. ಅಸಮಾಧಾನ ಅಂದರೆ ತೀವ್ರ ಆಕ್ರೋಶ ವ್ಯಕ್ತಪಡಿಸುವುದು. ಜಮೀರ್ ವಿಚಾರದಲ್ಲಿ ಯಾರೂ ನೇರ ಆರೋಪ ಮಾಡಿಲ್ಲ ಎನ್ನುವುದು ಗಮನಿಸಬೇಕು ಎಂದರು. ಇದನ್ನೂ ಓದಿ: ರಾಷ್ಟ್ರಪತಿ ಭೇಟಿ ವೇಳೆ ಸಿದ್ದರಾಮಯ್ಯ, ಆಮೀರ್ ಖಾನ್ ಮುಖಾಮುಖಿ
ಬಿ.ಆರ್ ಪಾಟೀಲ್ ಅವರ ಹೇಳಿಕೆ ಗಮನಿಸಿ, ಮಂತ್ರಿಗಳ ಮೇಲೆ ಅವರು ಆರೋಪ ಮಾಡಿಲ್ಲ. ಅವರು ಹೇಳಿದ್ದು ಶಾಸಕರ ಪತ್ರಕ್ಕೆ ಕೆಲಸ ಆಗುತ್ತಿಲ್ಲ. ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಆಗಿದೆ ಎಂದಿದೆ. ಆದರೆ, ಶಾಸಕರಿಗೆ ಮನೆ ಕೊಡುವ ಅಧಿಕಾರ ಇಲ್ಲ ಎಂದು ಗೊತ್ತಿದಿಯೋ ಇಲ್ವೊ ಗೊತ್ತಿಲ್ಲ ಎಂದು ಹೇಳಿದರು.
ಇದು ಹೊಸದಲ್ಲ. ಈ ರೀತಿ ಘಟನೆಗಳು ನಡೆಯುತ್ತಿರುತ್ತೆ. ಹಣ ಕೊಟ್ಟು ಕೆಲಸ ಮಾಡಿಸಿಕೊಂಡಿದ್ದರೆ ಅವರ ಮೇಲೆ ನಿರ್ದಿಷ್ಟವಾಗಿ ದೂರು ನೀಡಬಹುದು. ಭ್ರಷ್ಟಾಚಾರ ಆಡಳಿತದಲ್ಲಿ ಸೇರಿ ಹೋಗಿದೆ. ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ತಡೆಯಲು ಕೆಲವು ಇಲಾಖೆಯಲ್ಲಿ ಮಂತ್ರಿಗಳ ಹಸ್ತಕ್ಷೇಪ ತೆಗೆದಿದ್ದೇವೆ. ರಾಜು ಕಾಗೆ ಅವರಿಗೆ ವೇಗವಾಗಿ ಕೆಲಸ ಆಗುತ್ತಿಲ್ಲ ಎನ್ನುವುದು ಆರೋಪ. ಈ ಹಿಂದೆ ಸರ್ಕಾರಕ್ಕೆ ಹಣಕಾಸಿನ ತೊಂದರೆ ಇತ್ತು. ಗ್ಯಾರಂಟಿಯಿಂದ ಮಾತ್ರ ಅಲ್ಲ, ಬಿಜೆಪಿ ಅವಧಿಯ ಬಾಕಿ ಹಣ ನೀಡಬೇಕಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ಡಿಕೆ ಶಿವಕುಮಾರ್, ಡಿಕೆ ಸುರೇಶ್ ಆಶೀರ್ವಾದ ಇರೋದಕ್ಕೆ ನನಗೆ ಅನುದಾನ ಸಿಗ್ತಿದೆ: ಹೆಚ್ಸಿ ಬಾಲಕೃಷ್ಣ
ಈಗ ವಿರೋಧ ಪಕ್ಷದ ಶಾಸಕರೂ ಸೇರಿ ಪ್ರತಿ ಶಾಸಕರಿಗೆ ಐವತ್ತು ಕೋಟಿ ವಿಶೇಷ ಅನುದಾನ ಕೊಡುವ ಭರವಸೆ ಸಿಎಂ ನೀಡಿದ್ದಾರೆ. ಮುಂದಿನ ಮೂರು ವರ್ಷ ಒಳ್ಳೆ ಆಡಳಿತ ಕೊಡಿ ಎಂದು ನಾನು ಸಿಎಂಗೆ ಮನವಿ ಮಾಡಿದ್ದೇನೆ. ಸಿದ್ದರಾಮಯ್ಯ ಮೂರು ವರ್ಷ ಸಿಎಂ ಇರ್ತಾರೆ. ಸಿಎಂ ಬದಲಾವಣೆ ಕೆಲವರ ಮಾನಸಿಕ ನೆಮ್ಮದಿಗೆ ಹೇಳುವ ಹೇಳಿಕೆ. ಯಾರು ಹೀಗೆ ಹೇಳಿಕೊಂಡು ಓಡಾಡುತ್ತಿದ್ದಾರೆ ಅವರು ನೆಮ್ಮದಿಗಾಗಿ ಹೇಳುತ್ತಿದ್ದಾರೆ. ಬಹುತೇಕ ಶಾಸಕರ ಬೆಂಬಲ ಸಿದ್ದರಾಮಯ್ಯ ಅವರಿಗಿದೆ. ಜುಲೈನಲ್ಲಿ ಸಿದ್ದರಾಮಯ್ಯ ಅವರು ಇನ್ನೂ ಉತ್ತಮ ಆಡಳಿತ ನೀಡಲಿದ್ದಾರೆ ಎಂದರು.