ಬೆಂಗಳೂರು: ಇಲ್ಲಿನ ಸಿದ್ದಾಪುರದಲ್ಲಿ ಅಪಹರಣವಾಗಿದ್ದ ಹೆಣ್ಣು ಮಗು ಕೊನೆಗೂ ಹೆತ್ತವರ ಕೈಸೇರಿದೆ. ಮೂರು ದಿನಗಳ ಹಿಂದೆ ಗುಟ್ಟೆಪಾಳ್ಯ ನಿವಾಸಿ ಶಬನಮ್ ಹಾಗೂ ಸೈಯದ್ ದಂಪತಿಯ ಮೂರು ವರ್ಷದ ಮಗು ಕತೀಜಾರನ್ನು ಯಾರೋ ದುಷ್ಕರ್ಮಿಗಳು ಕಿಡ್ನ್ಯಾಪ್ ಮಾಡಿದ್ರು.
ಮನೆಯ ಪಕ್ಕದ ಅಂಗಡಿಗೆ ಐಸ್ ತರಲು ಹೋದ ಮಗುವನ್ನು ಎತ್ತಿಕೊಂಡೋಗಿದ್ರು. ಸಿಸಿಟಿವಿಯಲ್ಲಿ ಆ ದೃಶ್ಯ ಸೆರೆಯಾಗಿತ್ತು. ಸಿದ್ದಾಪುರ ಪೊಲೀಸರು ಮಗುಗಾಗಿ ಹುಡುಕಾಟ ನಡೆಸ್ತಿದ್ರು. ಆದ್ರೆ ಸೋಮವಾರ ಮಧ್ಯಾಹ್ನ ಮಡಿವಾಳದ ದರ್ಗಾ ಬಳಿ ಬಂದ ಮಹಿಳೆಯೊಬ್ಬಳು ಮಗುವನ್ನು ಬಿಟ್ಟು ಎಸ್ಕೇಪ್ ಆಗಿದ್ದಾಳೆ.
ಇತ್ತ ಮಾಧ್ಯಮಗಳಲ್ಲಿ ಮಗು ನಾಪತ್ತೆ ಸುದ್ದಿ ನೋಡಿದ್ದ ವ್ಯಕ್ತಿ ಪೊಲೀಸ್ರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಬಂದ ಮಡಿವಾಳ ಪೊಲೀಸ್ರು ಮಗುವನ್ನು ಹೆತ್ತವರಿಗೆ ಹಸ್ತಾಂತರ ಮಾಡಿದ್ದಾರೆ. ಇನ್ನೂ, ಆರೋಪಿಗಳು ಮಗುವನ್ನು ಕಿಡ್ನಾಪ್ ಮಾಡಿ ಬಸ್ಸಿನಲ್ಲಿ ಬೇರೆ ಕಡೆಗೆ ಕರೆದೊಯ್ದಿದ್ದರಂತೆ. ಒರ್ವ ಮಹಿಳೆಯ ಜತೆ ಮನೆಯೊಂದರಲ್ಲಿ ಬಚ್ಚಿಡಲಾಗಿತ್ತಂತೆ. ಆದ್ರೆ ಮಾಧ್ಯಮಗಳಲ್ಲಿ ಸಿಸಿಟಿವಿಯಲ್ಲಿ ಕೃತ್ಯ ಸೆರೆಯಾಗಿರುವುದು ನೋಡಿದ ಅರೋಪಿಗಳು ಮಗು ಬಿಟ್ಟು ಪರಾರಿಯಾಗಿರಬಹುದು ಎನ್ನಲಾಗುತ್ತಿದೆ.
ಸದ್ಯ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.