ಅಂಗನವಾಡಿಯಲ್ಲಿ ಅನ್ನದ ಬಿಸಿಗಂಜಿ ಬಿದ್ದು ಆಸ್ಪತ್ರೆಗೆ ಸೇರಿದ ಮಕ್ಕಳು

Public TV
1 Min Read
Anganwadi Raichur

ರಾಯಚೂರು: ಮಂಗಳವಾರಪೇಟೆ ಅಂಗನವಾಡಿ ಕೇಂದ್ರದಲ್ಲಿ ಸಿಬ್ಬಂದಿ ಯಡವಟ್ಟಿನಿಂದ ಅನ್ನದ ಗಂಜಿ ಬಿದ್ದು ಮಕ್ಕಳು ಹಾಗೂ ಆಯಾ ಆಸ್ಪತ್ರೆಗೆ ಸೇರಿದ್ದಾರೆ.

ಅನ್ನ ಬಸಿಯಲು ಪಾತ್ರೆ ತೆಗೆದುಕೊಂಡು ಹೋಗುವಾಗ ಅನ್ನದ ಗಂಜಿ ಕೇಳಗೆ ಬಿದ್ದಿದೆ. ಈ ವೇಳೆ ಅಲ್ಲೇ ಇದ್ದ ನಾಲ್ಕು ಮಕ್ಕಳು ಹಾಗೂ ಆಯಾಗೆ ಸುಟ್ಟಗಾಯಗಳಾಗಿವೆ.

Anganwadi Raichur 1

ಆರಾನ್, ಹೀಬಾ, ಮೋಹಮದ್, ಶೇಕ್ ಅದ್ನಾನ್, ಶೇಕ್ ಮಾರಿಯಮ್ ಮಕ್ಕಳಿಗೆ ಗಾಯವಾಗಿದೆ. ಆಯಾ ಲಕ್ಷ್ಮಿಗೂ ಸುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ದೊಡ್ಡ ಪ್ರಕರಣವಲ್ಲ, ಕಿರುಕುಳ ನೀಡಲು ವಿಚಾರಣೆ ನಡೆಸುತ್ತಿದ್ದಾರೆ: ಡಿಕೆಶಿ 

ಚಿಕ್ಕ ಬಾಡಿಗೆ ಕೋಣೆಯಲ್ಲಿ ಅಂಗನವಾಡಿ ಕೇಂದ್ರ ನಡೆಸಲಾಗುತ್ತಿದ್ದು, ಅಡುಗೆ ಮಾಡುವ ಸ್ಥಳದ ಪಕ್ಕದಲ್ಲೇ ಮಕ್ಕಳು ಕುಳಿತುಕೊಂಡಿದ್ದಾರೆ. ಸಿಬ್ಬಂದಿ ನಿರ್ಲಕ್ಷ್ಯದಿಂದ ಪಾತ್ರೆ ಬಿದ್ದು, ಘಟನೆ ನಡೆದಿದೆ. ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ಮುಂದುವರೆದಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *