ಆನೇಕಲ್‍ನಲ್ಲಿ ಜೆಡಿಎಸ್ ಮುಖಂಡನ ಜೊತೆ ಮಹಿಳೆ ಬರ್ಬರ ಹತ್ಯೆ

Public TV
1 Min Read
ANEKAL MURDER

ಬೆಂಗಳೂರು: ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸೇರಿದಂತೆ ಮತ್ತೊಬ್ಬ ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರ ಗ್ರಾಮದಲ್ಲಿ ನಡೆದಿದೆ.

ANE DOUBLE MURDER

ಚಂದಾಪುರ ಗ್ರಾಮದ ರಾಮಯ್ಯ ಲೇಔಟ್‍ನಲ್ಲಿ ಘಟನೆ ನಡೆದಿದ್ದು, ಕೊಲೆಯಾದವರು ಚಿಕ್ಕ ಹಾಗಡೆ ಗ್ರಾಮದ ನಾರಾಯಣ ಸ್ವಾಮಿ ಹಾಗೂ ಚಿಕ್ಕ ಹಾಗಡೆ ಗ್ರಾಮದ ಕಾವ್ಯ ಎಂದು ಗುರುತಿಸಲಾಗಿದೆ. ಇಂದು ಸಂಜೆ ವೇಳೆಯಲ್ಲಿ ಘಟನೆ ನಡೆದಿದ್ದು ನಾರಾಯಣ ಸ್ವಾಮಿ ಹಾಗೂ ಕಾವ್ಯ ಪರಿಚಯಸ್ಥರು ಇಂದು ಸಂಜೆ ವೇಳೆಗೆ ನಾರಾಯಣ ಸ್ವಾಮಿ ಕಾವ್ಯ ಅವರ ಮನೆಗೆ ಬಂದಿದ್ದು ಕಾವ್ಯ ತಾಯಿ ಅಂಗಡಿಗೆಂದು ಹೊರಹೋಗಿದ್ದಾರೆ. ಇದೇ ಸಮಯದಲ್ಲಿ ಆಟೋದಲ್ಲಿ ಬಂದಂತಹ 3 ಮಂದಿ ದುಷ್ಕರ್ಮಿಗಳು ನಾರಾಯಣ ಸ್ವಾಮಿ ಹಾಗೂ ಕಾವ್ಯರನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಪತಿಗೆ ಡೈವೋರ್ಸ್ ಕೊಡು, ಮುಸ್ಲಿಂ ಯುವಕನ ಜೊತೆ ಮದುವೆ ಮಾಡಿಸ್ತೀನಿ – ನೂರ್ ಜಹಾನ್ ಅರೆಸ್ಟ್

ANE DOUBLE MURDER 1

ನಂತರ ಸ್ಥಳಕ್ಕೆ ಬಂದ ಕಾವ್ಯ ತಾಯಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸೂರ್ಯಸಿಟಿ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಸ್ಥಳಕ್ಕೆ ಎಡಿಎಸ್‍ಪಿ ಲಕ್ಷ್ಮೀ ಗಣೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

Share This Article
Leave a Comment

Leave a Reply

Your email address will not be published. Required fields are marked *