– ರಾಜಕಾರಣ ಬೇಡ ಅಂತಿದ್ದೆ, ಯೂ ಟರ್ನ್ ಮಾಡಿ ಬರ್ತಿದ್ದೇನೆ
ಕಾರವಾರ: ನಾನು ರಾಜಕಾರಣಿಯಾಗಿ ಹುಟ್ಟಿಲ್ಲ, ರಾಜಕಾರಣಿಯಾಗಿ ಸಾಯುವುದಿಲ್ಲ. ಭಗವಂತ ಅವಕಾಶ ಕೊಟ್ಟಿದ್ದರಿಂದ ಅಲ್ಪಸ್ವಲ್ಪ ಕೆಲಸ ಮಾಡಿದ್ದೇನೆ. ಚುನಾವಣೆಗೆ ನಾನು ನಿಲ್ಲುವುದಿಲ್ಲ ಎಂದರೂ ನಿಲ್ಲಿಸುತ್ತಿದ್ದಾರೆ ಎಂದು ಸಂಸದ ಅನಂತ್ಕುಮಾರ್ ಹೆಗಡೆ (Anantkumar Hegde) ಹೇಳಿದ್ದಾರೆ.
ಉತ್ತರ ಕನ್ನಡದ (Uttara Kannada) ಮುಂಡಗೋಡಿನ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಳೆದೆರಡು ಚುನಾವಣೆಯಲ್ಲೇ ಹೇಳಿದ್ದೆ, ರಾಜಕಾರಣ ಬೇಡ, ನಮ್ಮನ್ನು ಬಿಟ್ಟುಬಿಡಿ ಎಂದಿದ್ದೆ. ಸಂಘಟನೆಯವರು ಬಿಡದೇ ಮತ್ತೆ ಮತ್ತೆ ಚುನಾವಣೆಗೆ ನಿಲ್ಲಿಸುತ್ತಿದ್ದಾರೆ. ಮಂದಿ ಮುಂದೆ ಹೋದರೆ ನಿಮಗೆ ಬೇರೆ ಅಭ್ಯರ್ಥಿ ಸಿಗುವುದಿಲ್ಲ ಮತ್ತೆ ನನಗೇ ಕೊಡುತ್ತೀರಾ. ಹಾಗಾಗಿ ಮಂದಿ ಮುಂದೆ ನಾನು ಹೋಗುವುದಿಲ್ಲ ಎಂದಿದ್ದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಪ್ರತಿಭಟಿಸ್ತಿರೋರು ರೈತರಲ್ಲ, ದೇಶದ್ರೋಹಿಗಳು: ಅನಂತ್ ಕುಮಾರ್ ಹೆಗಡೆ
ಇದೆಲ್ಲದರ ನಡುವೆ ಕೊರೊನಾ ಸಹ ಬಂತು. ನನ್ನ ಆರೋಗ್ಯ ಕೂಡ ತಪ್ಪಿತು. ರೋಗಿ ಬಯಸಿದ್ದು ಹಾಲು, ವೈದ್ಯ ಕೊಟ್ಟಿದ್ದು ಹಾಲು ಎನ್ನುವಂತಾಯಿತು. ರಾಜಕಾರಣ ಬೇಡ ಎಂದು ಗಟ್ಟಿ ಮನಸ್ಸು ಮಾಡಿ ಕುಳಿತಿದ್ದೆ. ಅದೇನೋ ಗೊತ್ತಿಲ್ಲ ವಾಪಸ್ ಯೂ ಟರ್ನ್ ಮಾಡಿ ಬರುತಿದ್ದೇನೆ ಎಂದು ಈ ಬಾರಿ ಲೋಕಸಭೆಗೆ (Lok Sabha Elections 2024) ಸ್ಪರ್ಧಿಸುವ ಆಕಾಂಕ್ಷೆಯನ್ನು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸಿದ್ದರಾಮುಲ್ಲ ಖಾನ್ ಎನ್ನುತ್ತಾ ಸರ್ಕಾರದ ವಿರುದ್ಧ ರೊಚ್ಚಿಗೆದ್ದ ಸಂಸದ ಅನಂತ್ ಕುಮಾರ್ ಹೆಗಡೆ