ಸ್ಯಾಂಡಲ್ವುಡ್ನ (Sandalwood) ಹಿರಿಯ ನಟಿ ತಾರಾ ಅನುರಾಧ (Tara Anuradha) ಇದೀಗ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ(Kateel Durgaparameshwari) ಭೇಟಿ ನೀಡಿದ್ದಾರೆ. ತಮ್ಮ ಎಲ್ಲಾ ಕೆಲಸಕ್ಕೆ ಬ್ರೇಕ್ ಹಾಕಿ, ದೇವರ ಸನ್ನಿಧಾನಕ್ಕೆ ನಟಿ ತೆರಳಿದ್ದಾರೆ.
ಸಿನಿಮಾ ಮತ್ತು ರಾಜಕೀಯ ಎರಡು ಕ್ಷೇತ್ರಗಳಲ್ಲಿ ನಟಿ ತಾರಾ ಅನುರಾಧ ಆಕ್ಟೀವ್ ಆಗಿದ್ದಾರೆ. ಈ ಮಧ್ಯೆ ಡಿಸೆಂಬರ್ 2ರಂದು ತಾರಾ ಕಟೀಲಿನ ಪುಣ್ಯ ಕ್ಷೇತ್ರ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ದರ್ಶನ ಪಡೆದು ಪ್ರಸಾದ ಸ್ವೀಕರಿಸಿದ್ದಾರೆ. ಇದನ್ನೂ ಓದಿ: ಶಿವನ ಮುಡಿಗೆ ಸಿದ್ಧಶ್ರೀ ಪ್ರಶಸ್ತಿಯ ಗರಿ – ಪಂರ್ಜುಲಿ ದೈವಕ್ಕೆ ಅರ್ಪಿಸಿದ ರಿಷಬ್
ಇನ್ನೂ ಸಾಲು ಸಾಲು ಚಿತ್ರಗಳಲ್ಲಿ ನಟಿ ತಾರಾ ಬ್ಯುಸಿಯಾಗಿದ್ದಾರೆ. `ನನ್ನಮ್ಮ ಸೂಪರ್ ಸ್ಟಾರ್ 2′ ರಿಯಾಲಿಟಿ ಶೋನ ಜಡ್ಜ್ ಆಗಿ ಕಾಣಿಸಿಕೊಳ್ತಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ನಟಿ ತಾರಾ ಸೈ ಎನಿಸಿಕೊಂಡಿದ್ದಾರೆ.