ರಕ್ತಕಣ್ಣೀರು (Rakthakanniru), ಶ್ರೀರಾಮ್, ಚೌಕ, ದಶರಥ, ಲಾಲಿ ಹಾಡು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಅಭಿರಾಮಿ(Abhirami) ಅವರು ವಿಶ್ವ ತಾಯಂದರ ದಿನದಂದು ಹೊಸ ಅಪ್ಡೇಟ್ವೊಂದನ್ನ ಹಂಚಿಕೊಂಡಿದ್ದಾರೆ. ಮದುವೆಯಾಗಿ 14 ವರ್ಷ ಕಳೆದರೂ ಮಗು ಆಗದೇ ಇರೋದಕ್ಕೆ ತಮ್ಮ ಜೀವನದ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
‘ಲಾಲಿಹಾಡು’ (Lalihaadu) ಖ್ಯಾತಿಯ ಅಭಿರಾಮಿ ಕೊನೆಯದಾಗಿ ಕನ್ನಡದಲ್ಲಿ ಸುದೀಪ್ ನಟನೆಯ ‘ಕೋಟಿಗಿಬ್ಬ-3’ (Kotigobba -3) ಚಿತ್ರದಲ್ಲಿ ಆಕೆ ನಟಿಸಿದ್ದರು. ವಿಶ್ವ ತಾಯಂದಿರ ದಿನಾಚರಣೆಯ ಸಂಭ್ರಮದಲ್ಲೇ ನಟಿ ಅಭಿರಾಮಿ ಅಭಿಮಾನಿಗಳ ಜೊತೆ ಸಿಹಿಸುದ್ದಿಯನ್ನು ಹಂಚಿಕೊಂಡಿದ್ದಾರೆ. ತಾವು ತಾಯಿಯಾಗಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಗರ್ಭಿಣಿ ಆಗದೇ ಮಗು ಹೇಗೆ ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
View this post on Instagram
20019ರಲ್ಲಿ ನಟಿ ಅಭಿರಾಮಿ, ರಾಹುಲ್ ಪವನನ್ ಎಂಬುವವರ ಕೈ ಹಿಡಿದಿದ್ದರು. ರಾಹುಲ್ ಮಲಯಾಳಂನ ಖ್ಯಾತ ಸಾಹಿತಿ ಪುತನ್ ವಿಟಿಲ್ ನಾರಾಯಣನ್ ನಾಯರ್ ಮೊಮ್ಮಗ. ನಟಿ ಅಭಿರಾಮಿ- ರಾಹುಲ್ ದಂಪತಿ ಕಳೆದ ವರ್ಷ ಒಂದು ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡಿದ್ದಾರೆ. ಮದುವೆಯಾಗಿ 14 ವರ್ಷ ಕಳೆದರೂ ಮಕ್ಕಳು ಆಗದ ಕಾರಣಕ್ಕೆ ಆಕೆ ಈ ನಿರ್ಣಯ ಕೈಗೊಂಡಿದ್ದಾರೆ ಎಂದು ಮಾಲಿವುಡ್ನಲ್ಲಿ ಹೇಳಲಾಗುತ್ತಿದೆ. ಆಕೆಯ ಈ ನಿರ್ಧಾರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತಾಯಂದಿರ ದಿನದ ಸಂಭ್ರಮದಲ್ಲೇ ತಾವು ಮಗು ದತ್ತು ಪಡೆದಿರುವ ವಿಚಾರವನ್ನು ಅಭಿರಾಮಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪತಿ- ಮಗಳ ಫೋಟೊ ಸಮೇತ ಆಕೆ ಪೋಸ್ಟ್ ಮಾಡಿ, ಗುಡ್ ನ್ಯೂಸ್ ಹೇಳಿದ್ದಾರೆ. ಇದನ್ನೂ ಓದಿ:ತಮಿಳು ನಟ ಸಿಂಬುಗೆ ಜೋಡಿಯಾಗಲಿದ್ದಾರೆ ದೀಪಿಕಾ ಪಡುಕೋಣೆ
View this post on Instagram
ಆತ್ಮೀಯ ಸ್ನೇಹಿತರೇ, ರಾಹುಲ್ ಹಾಗೂ ನಾನು ಈಗ ‘ಕಲ್ಕಿ’ (Kalki) ಎನ್ನುವ ಹೆಣ್ಣು ಮಗುವಿನ ಪೋಷಕರಾಗಿದ್ದೇವೆ ಎಂದು ಹೇಳಲು ಥ್ರಿಲ್ಲಾಗುತ್ತಿದೆ. ನಾವು ಕಳೆದ ವರ್ಷ ಮಗಳನ್ನು ದತ್ತು ಪಡೆದುಕೊಂಡಿದ್ದೆವು. ಇದು ನಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ನಾನು ಕೂಡ ತಾಯಿಯಾಗಿ ಇವತ್ತು ತಾಯಂದಿರ ದಿನ ಆಚರಿಸುತ್ತಿರುವುದಕ್ಕೆ ಬಹಳ ಸಂತೋಷವಾಗುತ್ತದೆ. ನಾನು- ನಮ್ಮ ಕುಟುಂಬ ನನ್ನ ಹೊಸ ಪಾತ್ರ ನಿಭಾಯಿಸಲು ನಿಮ್ಮ ಆಶೀರ್ವಾದ ಕೋರುತ್ತಿದ್ದೇವೆ ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.