ಕಿಚ್ಚ ಸುದೀಪ್ ಮತ್ತು ವಿಕ್ರಾಂತ್ ರೋಣ ಸಿನಿಮಾದ ನಿರ್ದೇಶಕ ಅನೂಪ್ ಭಂಡಾರಿ ಮತ್ತೊಂದು ಸಿನಿಮಾ ಮಾಡುವುದು ಖಚಿತವಾಗಿದೆ. ಈ ಹಿಂದೆಯೇ ಸ್ವತಃ ಸುದೀಪ್ ಅವರೇ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಈಗ ಮತ್ತೊಂದು ಸುದ್ದಿಯನ್ನು ಸ್ವತಃ ಸುದೀಪ್ ಅವರೇ ಟ್ವಿಟರ್ ಮೂಲಕ ಹೇಳಿಕೊಂಡಿದ್ದಾರೆ. ಅದು ವಿಕ್ರಾಂತ್ ರೋಣ 2 ಕುರಿತಾದದ್ದಾ ಅಥವಾ ಅನೂಪ್ ಭಂಡಾರಿ ಅವರ ಜತೆ ಮಾಡಬೇಕಿದ್ದ ಮತ್ತೊಂದು ಸಿನಿಮಾ ಬಿಲ್ಲ, ರಂಗ, ಬಾಷಾ ಚಿತ್ರದ್ದಾ ಎನ್ನುವ ಕುರಿತು ಕುತೂಹಲ ಮೂಡಿದೆ. ಇದನ್ನೂ ಓದಿ : ಏನಾಯ್ತು ಅಮಿತಾಭ್ ಬಚ್ಚನ್ ಗೆ? ಆತಂಕದಲ್ಲಿ ಅಭಿಮಾನಿಗಳು
ವಿಕ್ರಾಂತ್ ರೋಣಕ್ಕಿಂತ ಮುಂಚೆಯೇ ‘ಬಿಲ್ಲ ರಂಗ ಬಾಷಾ’ ಸಿನಿಮಾ ಆಗಬೇಕಿತ್ತು. ಆದರೆ, ಅದಕ್ಕೂ ಮುನ್ನ ‘ವಿಕ್ರಾಂತ್ ರೋಣ’ ಸಿದ್ಧವಾಯಿತು. ಇತ್ತೀಚೆಗಷ್ಟೇ ಮತ್ತೆ ನಾವು ಜತೆಯಾಗಿ ಕೆಲಸ ಮಾಡುತ್ತಿದ್ದೇವೆ. ಆದಷ್ಟು ಬೇಗ ಆ ಕುರಿತು ಮಾಹಿತಿ ನೀಡುತ್ತೇನೆ ಎಂದು ಸುದೀಪ್ ಬರೆದುಕೊಂಡಿದ್ದರು. ಯಾವ ಚಿತ್ರ ಮಾಡುತ್ತಾರೆ ಎಂದು ಮಾತ್ರ ಅವರು ಈವರೆಗೂ ಹೇಳಿಲ್ಲ. ಇದನ್ನೂ ಓದಿ : ಕಂಠೀರವ ಸ್ಟುಡಿಯೋ ಆವರಣದಲ್ಲಿ 14 ಅಡಿ ಎತ್ತರದ ಅಂಬರೀಶ್ ಪ್ರತಿಮೆ
Losing pounds,,,
To gaining pounds,
For the same director's conviction.
The very sleek "VikrantRona" ,,
To the new me,,
for "???" pic.twitter.com/pepoVMfhDQ
— Kichcha Sudeepa (@KicchaSudeep) February 27, 2022
ಸುದೀಪ್ ಅವರ ಗರಡಿಯಲ್ಲೇ ಸದಾ ಇರುವ ನಟ ಪ್ರದೀಪ್, ಈ ವಿಷಯ ಕುರಿತಾಗಿ ಸುದೀಪ್ ಅವರಿಗೆ ನೇರವಾಗಿ ಪ್ರಶ್ನೆಯನ್ನು ಕೇಳಿದ್ದಾರೆ. ನೀವು ಈಗ ಮಾಡಿರುವ ಟ್ವಿಟ್.. ವಿಕ್ರಾಂತ್ ರೋಣ 2 ಅಥವಾ ಬಿಲ್ಲ ರಂಗ ಬಾಷಾ? ಎಂದು ಕೇಳಿದ್ದಾರೆ. ಅವರ ಈ ಪ್ರಶ್ನೆಯೇ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಸುದೀಪ್ ಅವರ ಆಪ್ತರು ಹೇಳುವ ಪ್ರಕಾರ, ಇನ್ನೂ ಎರಡು ಸಿನಿಮಾ ಮಾಡುವಷ್ಟ ಕಥೆ ವಿಕ್ರಾಂತ್ ರೋಣದಲ್ಲಿ ಇದೆಯಂತೆ. ಅಲ್ಲದೇ, ಮುಂದಿನ ಭಾಗಕ್ಕೆ ಬೇಕಾದ ಒಂದಷ್ಟು ದೃಶ್ಯಗಳನ್ನು ಈಗಾಗಲೇ ಪ್ಲ್ಯಾನ್ ಮಾಡಲಾಗಿದೆಯಂತೆ. ಹೀಗಾಗಿ ವಿಕ್ರಾಂತ್ ರೋಣ ಭಾಗ 2 ಬಂದರೂ ಅಚ್ಚರಿ ಪಡಬೇಕಿಲ್ಲ.