ಬೇಸಿಗೆ ಕೇವಲ ಬೆಂಕಿ ಮಾತ್ರ ಉಗುಳುತ್ತಿಲ್ಲ, ಅದರ ಜೊತೆಗೆ ನೀರಿನ ಹಾಹಾಕಾರವನ್ನೂ ಸೃಷ್ಟಿ ಮಾಡಿದೆ. ಅದರಲ್ಲೂ ಬೆಂಗಳೂರಿನ ಸಾಕಷ್ಟು ಬಡಾವಣೆಗಳಲ್ಲಿ ನೀರೇ ಸಿಗುತ್ತಿಲ್ಲ. ವಾರಕ್ಕೆ ಇಂತಿಷ್ಟು ದಿನ ಅಂತ ಕಾವೇರಿ ನೀರನ್ನು ಒದಗಿಸಲಾಗುತ್ತಿದೆ. ಜೊತೆಗೆ ಟ್ಯಾಂಕರ್ ಮೂಲಕ ಸರಕಾರವು ನೀರನ್ನು ಪೂರೈಸುತ್ತಿದೆ. ಇಷ್ಟೆಲ್ಲ ಕಷ್ಟವನ್ನು ನೋಡಿರುವ ಧ್ರುವ ಸರ್ಜಾ ಅಭಿಮಾನಿಗಳು, ಧ್ರುವ (Dhruva Sarja) ಹೆಸರಿನಲ್ಲಿ ಟ್ಯಾಂಕರ್ ಮೂಲಕ ಉಚಿತವಾಗಿ ನೀರು ಸರಬರಾಜು ಮಾಡುತ್ತಿದ್ದಾರೆ.
ಬೆಂಗಳೂರಿನ (Bangalore) ಕಂಗೇರಿಯ ಏರಿಯಾದಲ್ಲಿ ಧ್ರುವ ಸರ್ಜಾ ಅಭಿಮಾನಿಗಳ ಪೋಸ್ಟರ್ ಅಂಟಿಸಿದ ಟ್ಯಾಂಕರ್ ಅಲ್ಲಿನ ನಿವಾಸಿಗಳಿಗೆ ಮನೆ ಮನೆಗೂ ತೆರಳಿ ನೀರು ಪೂರೈಸುತ್ತಿದೆ. ಈ ಕೆಲಸಕ್ಕೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.
ಬೇಸಿಗೆ ಸಮಯದಲ್ಲಿ ಈ ಹಿಂದೆ ಯಶ್ ಅಭಿಮಾನಿಗಳು ಕೂಡ ಗದಗ ಜಿಲ್ಲೆಯ ಅನೇಕ ಹಳ್ಳಿಗಳಿಗೆ ನೀರು ಕೊಟ್ಟಿದ್ದರು. ಸಾಕಷ್ಟು ಹಳ್ಳಿಗಳಲ್ಲಿ ಯಶ್ ಹೆಸರಿನಲ್ಲಿ ಈಗಲೂ ಅನೇಕ ರೀತಿಯ ಸಹಾಯ ಮಾಡುತ್ತಿರುತ್ತಾರೆ. ಈ ಬಾರಿಯೂ ಹಲವು ಹಳ್ಳಿಗಳಲ್ಲಿ ನೀರು ನೀಡಲಾಗುತ್ತಿದೆ ಎನ್ನುವ ಮಾಹಿತಿಯೂ ಇದೆ.