ಬೆಂಗಳೂರು: ಒಳಮೀಸಲಾತಿ (Internal Reservation) ನೀಡಲು ಕ್ಯಾಬಿನೆಟ್ನಲ್ಲಿ (Cabinet) ಒಮ್ಮತದ ನಿರ್ಧಾರ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತಿಳಿಸಿದ್ದಾರೆ.
ಒಳಮೀಸಲಾತಿ ಜಾರಿ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಒಳಮೀಸಲಾತಿ ಬಗ್ಗೆ ಸೋಮವಾರ ಕ್ಯಾಬಿನೆಟ್ನಲ್ಲಿ ತರ್ಮಾನ ಆಗಿದೆ. ಸೋಮವಾರದ ಕ್ಯಾಬಿನೆಟ್ನಲ್ಲಿ ಒಳಮೀಸಲಾತಿ ಜಾರಿಗೆ ಒಪ್ಪಲಾಗಿದೆ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಏಕ ಸದಸ್ಯ ಆಯೋಗ ರಚನೆ ಮಾಡುತ್ತೇವೆ. ಆಯೋಗವೂ 3 ತಿಂಗಳ ಒಳಗೆ ವರದಿ ಕೊಡಲಿದೆ ಎಂದರು. ಇದನ್ನೂ ಓದಿ: ಯಾರನ್ನೋ ಓಲೈಸಲು ಹೋದರೆ ದೊಡ್ಡ ಬೆಲೆ ತೆರಬೇಕಾಗುತ್ತದೆ: ರಾಜ್ಯ ಸರ್ಕಾರಕ್ಕೆ ಹೆಚ್ಡಿಕೆ ಎಚ್ಚರಿಕೆ
- Advertisement
ಮೀಸಲಾತಿ ನೀಡಲು ಅಂಕಿಅಂಶಗಳು ಇಲ್ಲ ಅನ್ನೋದು ಕೆಲವರ ಅಭಿಪ್ರಾಯ. ಈ ಕಾರಣಕ್ಕೆ ಅಂಕಿಅಂಶಗಳ ಸಂಗ್ರಹಕ್ಕೆ ಆಯೋಗ ರಚನೆ ಮಾಡ್ತಿದ್ದೇವೆ. ಕೂಡಲೇ ಆಯೋಗ ರಚನೆ ಮಾಡುತ್ತೇವೆ. ಅಲ್ಲಿವರೆಗೂ ಯಾವುದೇ ನೇಮಕಾತಿ ಪ್ರಕ್ರಿಯೆ ಮಾಡೋದಿಲ್ಲ. ಈಗ ಯಾವುದು ನೊಟೀಫಿಕೇಶನ್ ಆಗಿದೆಯೋ ಅದನ್ನು ಹೊರತುಪಡಿಸಿ ಹೊಸ ನೇಮಕಾತಿ ಪ್ರಕ್ರಿಯೆ ಪ್ರಾರಂಭ ಮಾಡಲ್ಲ. ಜಡ್ಜ್ ಯಾರು ಅಂತ ಇವತ್ತೇ ತರ್ಮಾನ ಮಾಡುತ್ತೇವೆ. 3 ತಿಂಗಳಲ್ಲಿ ವರದಿ ಬರಲಿದ್ದು, ಅಲ್ಲಿಯವರೆಗೂ ಹೊಸ ನೇಮಕಾತಿ ಪ್ರಕ್ರಿಯೆ ಶುರು ಮಾಡಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಕಾಂಗ್ರೆಸ್ ನಾಯಕರ ಟೀಕೆಗೆ ನ.23ಕ್ಕೆ ಉತ್ತರ ಕೊಡ್ತೀನಿ: ಹೆಚ್ಡಿಕೆ
- Advertisement