ಮಡಿಕೇರಿ: ಕೇಬಲ್ ಹಾಕಲು ತಗೆದಿದ್ದ ಗುಂಡಿಯಲ್ಲಿ ಹಸುವೊಂದು ಬಿದ್ದು, ಮೃತಪಟ್ಟ ಘಟನೆ ಮಡಿಕೇರಿ ತಾಲೂಕಿನ ಕಡಗದಾಳು ಗ್ರಾಮದಲ್ಲಿ ನಡೆದಿದೆ.
ಮೃತ ಪಟ್ಟ ಹಸು ಅಜಿತ್ ಅವರಿಗೆ ಸೇರಿದ್ದು. ಮಂಗಳವಾರ ರಾತ್ರಿ ಹಸು ರಸ್ತೆ ದಾಟುತ್ತಿರುವ ವೇಳೆ ಈ ದುರ್ಘಟನೆ ನಡೆದಿದೆ. ಸುಮಾರು ದಿನಗಳ ಹಿಂದೆಯೇ ಖಾಸಗಿ ಟೆಲಿಕಾಂ ಕಂಪನಿ ಕೇಬಲ್ ಅಳವಡಿಸಲು ರಸ್ತೆ ಪಕ್ಕದಲ್ಲಿ ಗುಂಡಿಯನ್ನು ತೆಗೆದಿತ್ತು.
ಹಸು ರಾತ್ರಿ ಗುಂಡಿಗೆ ಬಿದ್ದು ಅಲ್ಲಿಯೇ ಉಸಿರುಗಟ್ಟಿ ಮೃತಪಟ್ಟಿದ್ದು, ಬೆಳಗ್ಗೆ ಸಾರ್ವಜನಿಕರ ಗಮನಕ್ಕೆ ಬಂದಿದೆ. ಗುಂಡಿ ಅಗೆದು ತಿಂಗಳಾದರೂ ಗುಂಡಿಯನ್ನು ಮುಚ್ಚಿರದ ಟೆಲಿಕಾಂ ಕಂಪನಿ ಹಾಗೂ ಪಿಡಬ್ಲ್ಯುಡಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.