ನನ್ನ ಮಗಳನ್ನು ಕೊಂದವರನ್ನು ಜೀವಂತವಾಗಿ ಸುಡಿ – ಅಂಕಿತಾ ಭಂಡಾರಿ ತಾಯಿ ಆಕ್ರೋಶ

Public TV
1 Min Read
Ankita Bhandari

ಡೆಹ್ರಾಡೂನ್: ನನ್ನ ಮಗಳನ್ನು ಕೊಂದವರನ್ನು ಜೀವಂತವಾಗು ಸುಟ್ಟು ಹಾಕಿ ಎಂದು ಅಂಕಿತಾ ಭಂಡಾರಿ (Ankita Bhandari) ತಾಯಿ (Mother) ಆಕ್ರೋಶ ಹೊರಹಾಕಿದ್ದಾರೆ.

ಉತ್ತರಖಂಡದ (Uttarakhand) ರೆಸಾರ್ಟ್‍ವೊಂದರಲ್ಲಿ (Resort) ರಿಸೆಪ್ಷನ್ ಲಿಸ್ಟ್ (Receptionist) ಆಗಿ ಕೆಲಸ ಮಾಡುತ್ತಿದ್ದ ಅಂಕಿತಾ ಭಂಡಾರಿ ಹತ್ಯೆ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರ ತಾಯಿ, ತಮ್ಮ ಮಗಳನ್ನು ಹತ್ಯೆಗೈದ ಆರೋಪಿಗಳನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿದ್ದಾರೆ. ಒಂದು ವೇಳೆ ಕಾನೂನಿನ ಪ್ರಕಾರ ಆರೋಪಿಗಳನ್ನು ಗಲ್ಲಿಗೇರಿಸಲು ಸಾಧ್ಯವಾಗಲಿಲ್ಲ ಎಂದರೆ ಅವರನ್ನು ಅವರ ಮನೆಗಳ ಮುಂದೆಯೇ ಜೀವಂತವಾಗಿ ಸುಟ್ಟುಹಾಕಬೇಕು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಿಸೆಪ್ಷನಿಸ್ಟ್‌ ಆಗಿ ಕೆಲಸ ಮಾಡ್ತಿದ್ದ ಯುವತಿ ಹತ್ಯೆ – ಬಿಜೆಪಿ ಮಾಜಿ ಸಚಿವನ ಪುತ್ರ ಅರೆಸ್ಟ್‌

bjp leader son

ನನ್ನ ಮಗಳ ಅಂತಿಮ ಸಂಸ್ಕಾರವನ್ನು ನನಗೆ ತಿಳಿಸದೇ ನಡೆಸಲಾಗದೆ. ಆಕೆಯ ಅಂತ್ಯಕ್ರಿಯೆ ಮಾಡುತ್ತಿರುವ ಬಗ್ಗೆ ನನಗೆ ಹೇಳೇ ಇಲ್ಲ. ಸರ್ಕಾರವೇ ಅವಳ ಅಂತಿಮ ವಿಧಿವಿಧಾನವನ್ನು ಮಾಡಿ ಮುಗಿಸಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ನನ್ನನ್ನು ವೇಶ್ಯಾವಾಟಿಕೆಗೆ ಒತ್ತಾಯಿಸ್ತಿದ್ರು- ಅಂಕಿತಾ ಭಂಡಾರಿ ವಾಟ್ಸಾಪ್ ಸಂದೇಶ ವೈರಲ್

ಉತ್ತರಖಂಡದ ಕಾಲುವೆಯೊಂದರಲ್ಲಿ (Canal) ಅಂಕಿತಾ ಭಂಡಾರಿ ಮೃತದೇಹ ಪತ್ತೆಯಾಗಿದ್ದು, ಇದಾದ ಒಂದು ದಿನಗಳ ನಂತರ ಭಾನುವಾರ ಅಂಕಿತಾ ಭಂಡಾರಿ ಅಂತಿಮ ವಿಧಿವಿಧಾನವನ್ನು ನೆರವೇರಿಸಲಾಗಿತ್ತು. ಉತ್ತರಾಖಂಡದ ರಿಷಿಕೇಶದಲ್ಲಿರುವ (Rishikesh) ಬಿಜೆಪಿ ಮುಖಂಡನ ಮಗಪುಲ್ಕಿತ್ ಆರ್ಯ ಮಾಲೀಕತ್ವದ ರೆಸಾರ್ಟ್‍ನಲ್ಲಿ ರಿಸೆಪ್ಷನ್ ಆಗಿ ಅಂಕಿತಾ ಭಂಡಾರಿ ಕೆಲಸ ಮಾಡುತ್ತಿದ್ದಳು. ಆದರೆ ಬಲವಂತವಾಗಿ ವೇಶ್ಯಾವಾಟಿಕೆಗೆ ನೂಕಲು ಪ್ರಯತ್ನಿಸಿದಾಗ ಅದನ್ನು ನಿರಾಕರಿಸಿದ್ದಕ್ಕೆ ಅಂಕಿತಾ ಭಂಡಾರಿಯನ್ನು ಕೊಲೆ ಮಾಡಲಾಗಿದೆ ಎನ್ನಲಾಗಿದ್ದು, ಈ ಸಂಬಂಧ ಉಚ್ಚಾಟಿತ ಬಿಜೆಪಿ ನಾಯಕನ ಮಗ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *