ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಮಳೆ ಅರ್ಭಟ ಹೆಚ್ಚಾಗುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪ್ರವಾಹ ಹಾಗೂ ಭೂಕುಸಿತ ಉಂಟಾಗುವ ಸ್ಥಳಗಳನ್ನು ಗುರುತು ಮಾಡಿದೆ.
ಮಡಿಕೇರಿ ತಾಲೂಕಿನ ಭಾಗಮಂಡಲ, ನಾಪೋಕ್ಲುವಿನ 771 ಕುಟುಂಬದ 2688, ಮಡಿಕೇರಿ ನಗರ ವ್ಯಾಪ್ತಿಯ 381 ಕುಟುಂಬದ 1948, ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ, ಹುದಿಕೇರಿ, ಬಾಳೆಲೆ ಹೋಬಳಿಯ 192 ಕುಟುಂಬದ 660, ಕುಶಾಲನಗರ ನಗರ ವ್ಯಾಪ್ತಿಯ 347 ಕುಟುಂಬದ 1366, ಸೋಮವಾರಪೇಟೆ ಹೋಬಳಿಯ ಕುಶಾಲನಗರ, ಸುಂಟಿಕೊಪ್ಪ, ಶಾಂತಳ್ಳಿ, ಕೊಡ್ಲಿಪೇಟೆ ವ್ಯಾಪ್ತಿಯ 796 ಕುಟುಂಬದ 2796, ವೀರಾಜಪೇಟೆ ತಾಲೂಕಿನ ಅಮ್ಮತ್ತಿ ಹೋಬಳಿಯ 213 ಕುಟುಂಬದ 922, ವೀರಾಜಪೇಟೆ ಗ್ರಾಮಾಂತರದ 112 ಕುಟುಂಬದ 442, ವೀರಾಜಪೇಟೆ ನಗರದ 66 ಕುಟುಂಬಗಳು ಸ್ಥಳಾಂತರಗೊಳ್ಳಬೇಕಾದ ಪಟ್ಟಿಯಲ್ಲಿವೆ.
77 ಕಾಳಜಿ ಕೇಂದ್ರ ಸೇರಿದಂತೆ 5 ತಾಲೂಕಿನ ಎಲ್ಲ ಹೋಬಳಿ ವ್ಯಾಪ್ತಿಯಲ್ಲಿ ಕಾಳಜಿ ಕೇಂದ್ರ ತೆರೆಯಲು ಈಗಾಗಲೇ ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಕೇಂದ್ರಗಳನ್ನು ಗುರುತಿಸಿದೆ. ಮಳೆ ಹೆಚ್ಚಾಗಿ, ಸಮಸ್ಯೆ ಸಂಭವಿಸಿದರೆ ತ್ವರಿತವಾಗಿ ಕಾಳಜಿ ಕೇಂದ್ರಕ್ಕೆ ಬೇಕಾದ ಅವಶ್ಯಕ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.