ಬಿಗ್ಬಾಸ್ ಮನೆಯಲ್ಲಿ ಕಳಪೆ ಮತ್ತು ಅತ್ಯುತ್ತಮ ಸ್ಪರ್ಧಿ ಯಾರೆಂಬ ಆಯ್ಕೆ ಪ್ರತಿವಾರದಂತೆ ಈ ವಾರವೂ ನಡೆದಿದೆ. ಈ ಮಧ್ಯೆ ಕ್ಯಾಪ್ಟನ್ ರಘು ಗೌಡ ಮೇಲೆ ಪ್ರಿಯಾಂಕಾ ತಿಮ್ಮೇಶ್ ತೀವ್ರವಾಗಿ ಅಸಮಾಧಾನಗೊಂಡಿದ್ದಾರೆ. ಜೊತೆಗೆ ಕ್ಯಾಪ್ಟನ್ ಆದ್ರೆ ಎರಡು ಕೊಂಬು ಇರಲ್ಲ ಅಂತಲೂ ಅವರು ಹೇಳಿದ್ದಾರೆ. ಇಷ್ಟದಿನ ಸುಮ್ಮನೆ ಇದ್ದಪ್ರಿಯಾಂಕಾ ಇದೀಗ ತಮ್ಮ ಆಟವನ್ನು ಪ್ರಾರಂಭಿಸಿದ್ದಾರೆ.
ಈ ವೇಳೆ ಕ್ಯಾಪ್ಟನ್ ರಘು, ಪ್ರಿಯಾಂಕಾಗೆ ಕಳಪೆ ವೋಟ್ ನೀಡಿದರು. ಅದಕ್ಕೆ ಪ್ರಿಯಾಂಕಾ ಮನೆಯಲ್ಲಿ ತಪ್ಪುಗಳೇನು ಮಾಡಿಲ್ಲ. ಆದರೆ, ಜಾಸ್ತಿ ಬೆರೆಯುತ್ತಿಲ್ಲ ಎಂದು ನನಗೆ ಅನ್ನಿಸುತ್ತಿದೆ. ವೈಲ್ಡ್ ಕಾರ್ಡ್ ಎಂಟ್ರಿ ಅಂದಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಗಳಿರುತ್ತದೆ. ಅವರನ್ನು ಗೇಮ್ ಚೇಂಜರ್ ಅಂತಲೇ ನಾವು ಭಾವಿಸುತ್ತೇವೆ. ಅವರು ಕೊಟ್ಟಿರುವ ಕೆಲಸ ಎಲ್ಲ ಚೆನ್ನಾಗಿ ಮಾಡ್ತಾ ಇದ್ದಾರೆ. ಆದರೆ, ಇರುವಿಕೆ, ಇಲ್ಲದಿರುವಿಕೆ ಬಗ್ಗೆ ನನಗೇನೂ ಅನ್ನಿಸುತ್ತಿಲ್ಲ ಎಂದು ರಘು ಪ್ರಿಯಾಂಕ ಅವರಿಗೆ ಹೇಳಿದ್ದರು.
ರಘು ದೊಡ್ಡ ಕಳಪೆ. ತನ್ನ ಸ್ವಂತ ಬುದ್ಧಿಯಿಂದ, ಶ್ರಮ ಹಾಕಿ ಅವನು ಕ್ಯಾಪ್ಟನ್ ಆಗಿಲ್ಲ. ಒಬ್ಬರ ಬಗ್ಗೆ ಮಾತನಾಡೋಕು ಮುಂಚೆ ಯೋಚನೆ ಮಾಡಬೇಕು. ನಾನು ಎರಡು ವಾರದಿಂದ ಅರವಿಂದ್, ಪ್ರಶಾಂತ್ ಅವರ ವರ್ತನೆಯನ್ನು ನೋಡಿದ್ದೇನೆ. ಕ್ಯಾಪ್ಟನ್ ಆದಕೂಡಲೇ ಎರಡು ಕೊಂಬು ಬರಲ್ಲ. ಮುಂದೆ ಇಲ್ಲಿ ಯಾವ ಥರ ಇರಬೇಕು ಅನ್ನೋದು ಗೊತ್ತಾಗಿದೆ ಎಂದು ದಿವ್ಯಾ ಸುರೇಶ್ ಜೊತೆ ಚರ್ಚೆ ಮಾಡಿದ ಪ್ರಿಯಾಂಕಾ ಹೇಳಿದ್ದಾರೆ.
ಹುಚ್ಚುನ ತರಾ ಮಾತಾಡ್ತಾಇದ್ದಾನೆ. ಏನು ಇಲ್ಲದೆ ಕ್ಯಾಪ್ಟನ್ ಆಗಿದ್ದಾನೆ. ತನ್ನ ಕಳಪೆ ಮಾಡಿರುವ ಕುರಿತಾಗಿ ಪ್ರಿಯಾಂಕ ಚಕ್ರವರ್ತಿ ಅವರ ಬಳಿ ಹೇಳಿದ್ದಾರೆ. ಪ್ರಿಯಾಂಕ ತನ್ನ ಕಳಪೆ ಮಾಡಿರುವ ಕುರಿತಾಗಿ ಕೋಪಗೊಂಡಿದ್ದಾರೆ.