ಮಾಟಮಂತ್ರ ನಂತ್ರ ಚುನಾವಣೆ ಗೆಲುವಿಗಾಗಿ ನಾಗಸಾಧು ಮೊರೆ ಹೋದ ಅಭ್ಯರ್ಥಿಗಳು

Public TV
1 Min Read
bly nagasadhu collage copy

ಬಳ್ಳಾರಿ: ಲೋಕಸಭಾ ಚುನಾವಣೆಯಲ್ಲಿ ಗೆಲುವಿಗಾಗಿ ಅಭ್ಯರ್ಥಿಗಳು ನಾಗಸಾಧು ಮೊರೆ ಹೋಗುತ್ತಿದ್ದಾರೆ.

ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಿಬ್ಬರು ನಾಗಸಾಧುರೊಬ್ಬರನ್ನ ಭೇಟಿ ಮಾಡಿ ಗೆಲುವಿಗಾಗಿ ಆಶೀರ್ವಾದ ಪಡೆದಿದ್ದಾರೆ. ಸಂಡೂರು ತಾಲೂಕಿನ ಜೋಗದ ಬಳಿಯಿರುವ ದಿಗಂಬರ ರಾಜಾಭಾರತಿ ಸ್ವಾಮೀಜಿಯನ್ನ ಭೇಟಿ ಮಾಡಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವಿಗಾಗಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ.

Bly nagasadhu 1 copy

ಕಳೆದ ಮೂರು ತಿಂಗಳ ಹಿಂದೆ ನಡೆದ ಉಪಚುನಾವಣೆಯ ವೇಳೆ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಸಹ ಈ ನಾಗಸಾಧು ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಚುನಾವಣೆ ನಡೆಸಿದ್ದರು. ಆಗ ಉಗ್ರಪ್ಪ ಬಹುಮತಗಳಿಂದ ಗೆದ್ದ ಪರಿಣಾಮ ಇದೀಗ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಿಬ್ಬರು ಈ ನಾಗಸಾಧು ಮೊರೆ ಹೋಗಿ ಜಯಕ್ಕಾಗಿ ಪಾರ್ಥಿಸಿದ್ದಾರೆ.

ಇತ್ತೀಚೆಗೆ ಚಾಮರಾಜನಗರದಲ್ಲೂ ಲೋಕಸಭಾ ಚುನಾವಣೆಯನ್ನು ಗೆಲ್ಲಲು ಮೂರು ಪಕ್ಷದ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಕೊಳ್ಳೇಗಾಲಕ್ಕೆ ಬಂದು ಮಾಟ-ಮಂತ್ರ ಮಾಡಿಸಿ ತಮ್ಮ ಎದುರಾಳಿಗಳನ್ನು ಸೋಲಿಸುವ ತಂತ್ರಕ್ಕೆ ಮುಂದಾಗಿದ್ದರು. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ರಾಜ್ಯದಲ್ಲಿ ಮಾಟ-ಮಂತ್ರಕ್ಕೆ ಫುಲ್ ಫೇಮಸ್ ಆಗಿದ್ದು, ಇದ್ರಿಂದ ಇಲ್ಲಿಗೆ ಇದೀಗ 28 ಲೋಕಸಭಾ ಕ್ಷೇತ್ರದ ಹಲವು ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಬರುತ್ತಿದ್ದಾರೆ ಎಂದು ತಿಳಿದು ಬಂದಿತ್ತು.

Share This Article
Leave a Comment

Leave a Reply

Your email address will not be published. Required fields are marked *