ತವರು ಮನೆಗೆ ಹೋದ ಪತ್ನಿಗೆ ಬುದ್ಧಿ ಕಲಿಸಲು ಹೋಗಿ ಎಡವಟ್ಟು ಮಾಡ್ಕೊಂಡ ಪತಿರಾಯ!

Public TV
1 Min Read
couple

ಲಕ್ನೋ: ಅಳಿಯನೊಬ್ಬ ವೇಶ್ಯೆಯನ್ನು ತನ್ನ ಜೊತೆ ಪತ್ನಿಯ ತವರು ಮನೆಗೆ ಕರೆದುಕೊಂಡ ಹೋಗಿ ಒದೆ ತಿಂದ ಘಟನೆ ಬುಧವಾರ ಉತ್ತರ ಪ್ರದೇಶದ ಫಿಲ್‍ಖುವಾದ ಮೊಹಲ್ಲಾ ಸಿದ್ದಿಕಪೂರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕೋತ್‍ವಾಲಿದಲ್ಲಿರುವ ಮೊಹೆಲ್ಲಾ ಸಿದ್ದಿಪುರಿ ನಿವಾಸಿಯ ಯುವತಿಗೆ ಮಸೂರಿಯ ಯುವಕನ ಜೊತೆ ಮದುವೆಯಾಗಿತ್ತು. ಇಬ್ಬರ ನಡುವೆ ಒಂದು ಚಿಕ್ಕ ಜಗಳ ನಡೆದಿದೆ. ಇಬ್ಬರ ನಡುವೆ ಆದ ಜಗಳದಿಂದ ಪತ್ನಿ 15 ದಿನಗಳ ಹಿಂದೆ ತನ್ನ ತವರು ಮನೆ ಸೇರಿದ್ದಳು. ಆದರಿಂದ ಪತಿ ತನ್ನ ಪತ್ನಿಯ ತವರು ಮನೆಗೆ ವೇಶ್ಯೆಯನ್ನು ಕರೆದುಕೊಂಡು ಹೋಗಿದ್ದನು ಎಂದು ಹೇಳಲಾಗಿದೆ.

ತವರು ಮನೆಗೆ ಬಂದಿದ್ದ ಪತ್ನಿಗೆ ಬುದ್ಧಿ ಕಲಿಸಲು ಪತಿ ತನ್ನ ಜೊತೆ ವೇಶ್ಯೆಯನ್ನು ಕರೆದುಕೊಂಡು ಹೋಗಿದ್ದಾನೆ. ಆದರೆ ಪತ್ನಿ ತನ್ನ ಪತಿಯ ಜೊತೆ ವೇಶ್ಯೆಯನ್ನು ನೋಡುತ್ತಿದ್ದಂತೆ ಆತನ ಮೇಲೆ ರೇಗಾಡಿದ್ದಾಳೆ. ಅಲ್ಲದೇ ಆಕೆಯ ತವರು ಮನೆಯವರು ಆತನನ್ನು ಸರಿಯಾಗಿ ಥಳಿಸಿದ್ದಾರೆ. ಥಳಿತಕ್ಕೊಳಕ್ಕಾಗುತ್ತಿದ್ದಂತೆಯೇ ಪತ್ನಿ ಮನೆಯ ನೆರೆಮನೆಯವರು ಬಂದು ಪತಿಯನ್ನು ರಕ್ಷಿಸಿದ್ದಾರೆ.

ಅಳಿಯ ಕುಡಿದ ನಶೆಯಲ್ಲಿ ತನ್ನ ಮಾವನ ಮನೆಗೆ ವೇಶ್ಯೆಯನ್ನು ಕರೆದುಕೊಂಡು ಹೋಗಿದ್ದನು. ನಶೆಯಲ್ಲಿ ಇದ್ದ ಅಳಿಯನಿಗೆ ತನ್ನ ಪತ್ನಿ ಅಲ್ಲಿ ಇರುವುದನ್ನು ಮರೆತು ಹೋಗಿದ್ದನು. ಪತಿಯ ಜೊತೆ ವೇಶ್ಯೆಯನ್ನು ನೋಡಿ ಪತ್ನಿ ರೇಗಾಡಿ, ಆಕೆಯ ಮನೆಯವರು ಆತನನ್ನು ಕೋಲಿನಿಂದ ಹೊಡೆದಿದ್ದಾರೆ. ಜೊತೆಗೆ ಆ ವೇಶ್ಯೆಗೂ ಕಪಾಳಮೋಕ್ಷ ಮಾಡಿದ್ದಾರೆ ಎಂಬುದಾಗಿ ವರದಿಯಾಗಿದೆ.

ಘಟನೆಯ ಬಳಿಕ ಗ್ರಾಮಸ್ಥರು ಆತನನ್ನು ರಕ್ಷಿಸಿ ಮಸೂರಿಗೆ ಕಳುಹಿಸಿದ್ದರು. ವೇಶ್ಯೆ ಕೂಡ ಸಮಯ ಸಿಕ್ಕದ ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾಳೆ. ಪತಿಯ ಈ ವರ್ತನೆಯಿಂದ ಪತ್ನಿ ತನ್ನ ತವರು ಮನೆಯಲ್ಲೇ ಉಳಿದುಕೊಂಡಿದ್ದಾಳೆ ಎಂದು ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *