ಫಸ್ಟ್ ನೈಟಲ್ಲಿ ‘ನರಕ ದರ್ಶನ’ ಮಾಡಿಸಿದವನಿಗೆ ಇಂದು ಪುರುಷತ್ವ ಪರೀಕ್ಷೆ!

Public TV
2 Min Read
HYDERABAD 2

ಹೈದರಾಬಾದ್: ಮದುವೆಯ ಈ ಬಂಧಾ, ಅನುರಾಗದ ಅನುಬಂಧಾ, ಏಳೇಳು ಜನುಮದಲೂ ತೀರದ ಸಂಬಂಧ ಎಂಬಂತೆ ಮದುವೆಯ ಬಗ್ಗೆ ಅಪಾರ ಕನಸು ಕಟ್ಟಿಕೊಂಡು ತಾಳಿ ಕಟ್ಟಿಸಿಕೊಂಡು ಪತಿಯ ಕಿರಾತಕ ಕೃತ್ಯಗಳಿಂದ ಫಸ್ಟ್ ನೈಟಲ್ಲೇ ಚಿತ್ರ ಹಿಂಸೆ ಅನುಭವಿಸಿದ ಯುವತಿಯ ಪತಿಯ ಪುರುಷತ್ವ ಪರೀಕ್ಷೆ ಮಾಡುವಂತೆ ಚಿತ್ತೂರ್ ಕೋರ್ಟ್ ಆದೇಶ ನೀಡಿದೆ. ಹೈದರಾಬಾದ್ ನಲ್ಲಿರುವ ಮೆಡಿಕಲ್ ಬೋರ್ಡ್ ನಲ್ಲಿ ಪುರುಷತ್ವ ಪರೀಕ್ಷೆ ಮಾಡುವಂತೆ ನ್ಯಾಯಾಲಯ ಸೂಚಿಸಿದ್ದು, ಪೊಲೀಸರು ಆರೋಪಿಯನ್ನು ಇಂದು ಪುರುಷತ್ವ ಪರೀಕ್ಷೆಗೆ ಹಾಜರುಪಡಿಸಲಿದ್ದಾರೆ.

ಫಸ್ಟ್ ನೈಟಲ್ಲಿ ಏನಾಗಿತ್ತು?: ಚಿತ್ತೂರು ಜಿಲ್ಲೆಯ ಗಂಗಾಧರ ನೆಲ್ಲೂರು ಮಂಡಲದ ಮೋತರಂಗನಪಲ್ಲಿಯ ರಾಜೇಶ್ ಎಂಬಾತನಿಗೆ ಚಿನ್ನದಮರಗುಂಟ ಎಂಬಲ್ಲಿನ ಶೈಲಜಾ ಎಂಬಾಕೆಯ ಜೊತೆಯ ಡಿಸೆಂಬರ್ 1ರಂದು ಶುಕ್ರವಾರ ಮದುವೆ ನಡೆದಿತ್ತು. ರಾಜೇಶ್ ವೃತ್ತಿಯಲ್ಲಿ ಸರ್ಕಾರಿ ಶಾಲಾ ಶಿಕ್ಷಕನಾಗಿದ್ದರೆ, ಶೈಲಜಾ ಎಂಬಿಎ ವ್ಯಾಸಂಗ ಮಾಡುತ್ತಿದ್ದಳು. ಮದುವೆ ಆದ ತಕ್ಷಣ ದಂಪತಿ ಕನಿಪಾಕಂನಲ್ಲಿ ಪೂಜೆ ಸಲ್ಲಿಸಲು ತೆರಳಿದ್ದರು. ಅಲ್ಲಿಯವರೆಗೆ ಎಲ್ಲವೂ ಸರಿಯಾಗಿತ್ತು. ಆದರೆ ರಾಜೇಶನ ಕರಾಳ ಮುಖದ ಪರಿಚಯ ಶೈಲಜಾಗೆ ರಾತ್ರಿಯಾಗುತ್ತಿದ್ದಂತೆಯೇ ಅರಿವಾಯಿತು. ಫಸ್ಟ್ ನೈಟ್‍ನಲ್ಲೇ ರಾಕ್ಷಸನಾದ ಪತಿ- ಚೂರಿಯಿಂದ ಇರಿದು, ಅಂಗಾಂಗ ಕಚ್ಚಿ ಹಲ್ಲೆ

HYDERABAD 3

ಫಸ್ಟ್ ನೈಟ್ ಗೆಂದು ಸಿದ್ಧಳಾಗಿ ಬಂದ ಶೈಲಜಾ ಮುಂದೆ ರಾಜೇಶ್ ತನ್ನ ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡಿದ್ದಾನೆ. ನಾನು ನಪುಂಸಕ, ನನಗೆ ಪುರುಷತ್ವ ಇಲ್ಲ. ಆದರೆ ಇದನ್ನು ನೀನು ಯಾರಿಗೂ ಹೇಳಬೇಡ ಎಂದು ಬೆದರಿಕೆ ಹಾಕಿದ್ದಾನೆ. ಆದರೆ ಶೈಲಜಾ ಫೋನ್ ಮಾಡಿ ಈ ವಿಚಾರವನ್ನು ತನ್ನ ಪೋಷಕರಿಗೆ ತಿಳಿಸುತ್ತಾಳೆ. ಇದನ್ನೂ ಓದಿ: ಯುವಕರೊಂದಿಗೆ ಸೆಕ್ಸ್ ಮಾಡುವಾಗ ಪತ್ನಿ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪತಿರಾಯ!

ಇದರಿಂದ ತನ್ನ ಮರ್ಯಾದೆ ಹರಾಜಾಯಿತು ಎಂದು ಸಿಟ್ಟಿಗೆದ್ದ ಪತಿರಾಯ ಪತ್ನಿಯ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ಆಕೆಯ ಮುಖಕ್ಕೆ ಹೊಡೆದಿದ್ದಾನೆ. ಕಣ್ಣು, ಕೆನ್ನೆ, ತಲೆ ಹಾಗೂ ದೇಹ ಪೂರ್ತಿ ಹಲ್ಲೆ ಮಾಡಿದ್ದಾನೆ. ಇಷ್ಟು ಸಾಲದೆಂಬಂತೆ ಆಕೆಯ ದೇಹ ಪೂರ್ತಿ ಕಚ್ಚಿ ತನ್ನ ವಿಕೃತಿ ಮೆರೆದಿದ್ದಾನೆ. ಆತನ ಹೊಡೆತದ ತೀವ್ರತೆ ಎಷ್ಟಿತ್ತೆಂದರೆ ಹಲ್ಲೆ ನಡೆದ ಕೆಲವೇ ಗಂಟೆಗಳಲ್ಲಿ ಸುಂದರವಾಗಿದ್ದ ಮುಖ ಹಾಗೂ ಕಣ್ಣು ಊದಿಕೊಂಡಿತ್ತು. ಕಣ್ಣಿನ ಕೆಳಭಾಗ ಕಪ್ಪು ಬಣ್ಣಕ್ಕೆ ತಿರುಗಿತ್ತು. ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಾದಾಗ ಶೈಲಜಾ ತನ್ನ ಪೋಷಕರಿಗೆ ಫೋನ್ ಮಾಡಿ ವಿವರಿಸುತ್ತಾಳೆ. ಇದನ್ನೂ ಓದಿ: ಪತಿಯನ್ನು ಕೊಂದು, ಪ್ರೇಮಿಯನ್ನೇ ತನ್ನ ಗಂಡ ಎಂದು ನಂಬಿಸಲು ಆತನ ಮುಖಕ್ಕೆ ಆ್ಯಸಿಡ್ ಸುರಿದ ಪತ್ನಿ

HYDERABAD 1

ತಕ್ಷಣ ಆಕೆಯ ಮನೆಯವರು ರಾಜೇಶ್ ಮನೆಗೆ ಆಗಮಿಸುತ್ತಾರೆ. ಅದರೆ ಬೆಡ್ ರೂಂ ಬಾಗಿಲು ತೆಗೆಯಲು ನಿರಾಕರಿಸಿದಾಗ ಬಾಗಿಲು ಒಡೆದು ಒಳ ಹೋಗುವ ವೇಳೆ ರಾಜೇಶ್ ಪರಾರಿಯಾಗಿದ್ದ. ಇದನ್ನೂ ಓದಿ: ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!

ಇದೇ ವೇಳೆ ನೋವಿನಿಂದ ನರಳಾಡುತ್ತಿದ್ದ ಆಕೆಯನ್ನು ಆಸ್ಪತ್ರೆಗೆ ಸೇರಿದ್ದಾರೆ. ಆದರೆ ತುಟಿಯನ್ನು ಕಚ್ಚಿ, ಹಲ್ಲೆ ಮಾಡಿದ್ದರಿಂದ ಆಕೆಯ ತುಟಿ ಊದಿಕೊಂಡಿದ್ದರಿಂದ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಸದ್ಯ ಶೈಲಜಾ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಪತ್ನಿಗೆ ಬ್ಲೂಫಿಲ್ಮ್ ತೋರಿಸಿ, ಮದ್ಯ ಕುಡಿಸಿ ಸೆಕ್ಸ್ ಗೆ ಬರುವಂತೆ ಟೆಕ್ಕಿ ಗಂಡನ ಕಿರಿಕ್

HYDERABAD

ಬೆಡ್ ರೂಂನಿಂದ ಪರಾರಿಯಾಗಿದ್ದ ರಾಜೇಶನನ್ನು ಬಳಿಕ ಪೊಲೀಸರು ಬಂಧಿಸಿದ್ದರು. ಆದರೆ ಪುರುಷತ್ವ ಪರೀಕ್ಷೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಪೊಲೀಸರು ಕೋರ್ಟ್ ಮೊರೆ ಹೋಗಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಪುರುಷತ್ವ ಪರೀಕ್ಷೆ ನಡೆಸಲು ಸೂಚಿಸಿದೆ. ಇದನ್ನೂ ಓದಿ: ಕಾಲ್ ಮಾಡಿ ಸೆಕ್ಸ್ ಗೆ ಕರೀತಿದ್ದ ವ್ಯಕ್ತಿ ಅರೆಸ್ಟ್-ಆರೋಪಿಯನ್ನ ನೋಡಿದ ಮಹಿಳೆ ಶಾಕ್!

Share This Article
Leave a Comment

Leave a Reply

Your email address will not be published. Required fields are marked *