ವಿಜಯಪುರ: ವೈದ್ಯನ ಎಡವಟ್ಟಿಗೆ ಯುವಕನ ಜೀವಕ್ಕೆ ಕುತ್ತು ಬಂದ ಘಟನೆ ವಿಜಯಪುರದಲ್ಲಿ ನಡೆದಿದೆ.
ಜಿಲ್ಲೆಯ ಹಿಟ್ಟಿನಹಳ್ಳಿ ಗ್ರಾಮದ ಸತೀಶ ಎಂಬ ಯುವಕ ಜ್ವರ ಬಂದ ಕಾರಣ ಗ್ರಾಮದ ಸುನೀಲ ಕುಸಗಲ್ ಎಂಬ ವೈದ್ಯನ ಹತ್ತಿರ ಚಿಕಿತ್ಸೆ ಪಡೆದಿದ್ದರು. ಆದ್ರೆ ವೈದ್ಯ ಸುನೀಲ ನೀಡಿದ ಚುಚ್ಚು ಮದ್ದು ರಿಯಾಕ್ಷನ್ ಆಗಿ ಸತೀಶನ ಹಿಂಭಾಗದಲ್ಲಿ ಶೇಕಡ 90 ರಷ್ಟು ಭಾಗ ಹುಳು ಹತ್ತಿದೆ.
ಅಲ್ಲದೆ ಈ ಚುಚ್ಚು ಮದ್ದಿನಿಂದ ಕಿಡ್ನಿ ವೈಫಲ್ಯದ ಸಂಭವವಿದೆ ಎಂದು ಹಿರಿಯ ವೈದ್ಯರು ಹೇಳಿದ್ದಾರೆ.
ನನ್ನ ಕಾಲುಗಳೆರಡೂ ನೋವಾಗ್ತಿತ್ತು. ಆಸ್ಪತ್ರೆಗೆ ಬಂದಾಗ ವೈದ್ಯರು ಇರ್ಲಿಲ್ಲ. ನಂತರ 12 ಗಂಟೆಗೆ ವೈದ್ಯರು ಬಂದು ಇಂಜೆಕ್ಷನ್ ಕೊಟ್ರು ಎಂದು ಸತೀಶ್ ಹೇಳಿದ್ದಾರೆ.
ಸತೀಶ ಬಹಳ ದಿನ ಬದುಕುವುದು ಸಂಶಯ ಎಂದು ವೈದ್ಯರು ಹೇಳಿದ್ದಾರೆ. ವೈದ್ಯ ಸುನೀಲ ಸದ್ಯಕ್ಕೆ ಕ್ಲಿನಿಕ್ ಮುಚ್ಚಿ ಪರಾರಿಯಾಗಿದ್ದಾನೆ.