ವೈದ್ಯನ ಎಡವಟ್ಟಿನಿಂದ ಯುವಕನ ಪ್ರಾಣಕ್ಕೆ ಕುತ್ತು – ಇಂಜೆಕ್ಷನ್ ನೀಡಿದ ಜಾಗ ಕೊಳೆತೇ ಹೋಯ್ತು

Public TV
1 Min Read
bij doctor

ವಿಜಯಪುರ: ವೈದ್ಯನ ಎಡವಟ್ಟಿಗೆ ಯುವಕನ ಜೀವಕ್ಕೆ ಕುತ್ತು ಬಂದ ಘಟನೆ ವಿಜಯಪುರದಲ್ಲಿ ನಡೆದಿದೆ.

ಜಿಲ್ಲೆಯ ಹಿಟ್ಟಿನಹಳ್ಳಿ ಗ್ರಾಮದ ಸತೀಶ ಎಂಬ ಯುವಕ ಜ್ವರ ಬಂದ ಕಾರಣ ಗ್ರಾಮದ ಸುನೀಲ ಕುಸಗಲ್ ಎಂಬ ವೈದ್ಯನ ಹತ್ತಿರ ಚಿಕಿತ್ಸೆ ಪಡೆದಿದ್ದರು. ಆದ್ರೆ ವೈದ್ಯ ಸುನೀಲ ನೀಡಿದ ಚುಚ್ಚು ಮದ್ದು ರಿಯಾಕ್ಷನ್ ಆಗಿ ಸತೀಶನ ಹಿಂಭಾಗದಲ್ಲಿ ಶೇಕಡ 90 ರಷ್ಟು ಭಾಗ ಹುಳು ಹತ್ತಿದೆ.

bij doctors 7

ಅಲ್ಲದೆ ಈ ಚುಚ್ಚು ಮದ್ದಿನಿಂದ ಕಿಡ್ನಿ ವೈಫಲ್ಯದ ಸಂಭವವಿದೆ ಎಂದು ಹಿರಿಯ ವೈದ್ಯರು ಹೇಳಿದ್ದಾರೆ.

ನನ್ನ ಕಾಲುಗಳೆರಡೂ ನೋವಾಗ್ತಿತ್ತು. ಆಸ್ಪತ್ರೆಗೆ ಬಂದಾಗ ವೈದ್ಯರು ಇರ್ಲಿಲ್ಲ. ನಂತರ 12 ಗಂಟೆಗೆ ವೈದ್ಯರು ಬಂದು ಇಂಜೆಕ್ಷನ್ ಕೊಟ್ರು ಎಂದು ಸತೀಶ್ ಹೇಳಿದ್ದಾರೆ.

bij doctors 3

ಸತೀಶ ಬಹಳ ದಿನ ಬದುಕುವುದು ಸಂಶಯ ಎಂದು ವೈದ್ಯರು ಹೇಳಿದ್ದಾರೆ. ವೈದ್ಯ ಸುನೀಲ ಸದ್ಯಕ್ಕೆ ಕ್ಲಿನಿಕ್ ಮುಚ್ಚಿ ಪರಾರಿಯಾಗಿದ್ದಾನೆ.

bij doctors 2

bij doctors 10

bij doctors 8

bij doctors 6

bij doctors 7

bij doctors 1

bij doctors 11

bij doctors 5

bij doctors 4

Share This Article
Leave a Comment

Leave a Reply

Your email address will not be published. Required fields are marked *