ಅಪಘಾತಗಳು ನಡೆಯದಂತೆ ರಸ್ತೆಗೆ ಕುರಿ ಬಲಿ ನೀಡಿ ಪ್ರಾರ್ಥನೆ ಸಲ್ಲಿಸಿದ್ರು!

Public TV
1 Min Read
SHEEP 12

ರಾಮನಗರ: ಜಿಲ್ಲೆಯ ರಸ್ತೆಗಳಲ್ಲಿ ನಡೆಯೋ ಅಪಘಾತಗಳನ್ನು ತಡೆಯುವಂತೆ ಹಾಗೂ ಅಪಘಾತಗಳು ನಡೆಯದಿರಲಿ ಎಂದು ರಸ್ತೆಗೆ ಕುರಿ ಬಲಿ ನೀಡಿರುವ ಘಟನೆಯೊಂದು ನಡೆದಿದೆ.

ಜಿಲ್ಲೆಯ ಬೊಂಬೆನಗರಿ ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ಇಂತಹದೊಂದು ವಿಚಿತ್ರ ಘಟನೆ ನಡೆದಿದೆ. ಹೌದು. ತಿಟ್ಟಮಾರನಹಳ್ಳಿ ಗ್ರಾಮದ ರಾಮಮ್ಮನ ಕೆರೆಯ ಏರಿ ರಸ್ತೆ ಬಹಳ ಕಡಿದಾಗಿದೆ. ಅಲ್ಲದೇ ತಿರುವುಗಳಿಂದ ಕೂಡಿದೆ. ಒಮ್ಮೆಲೆ ಬಸ್, ಕಾರು ಬಂದ್ರೆ ಇಲ್ಲವೇ ಸ್ಕೂಟರ್ ಬಂದ್ರೆ ಸ್ವಲ್ಪ ಯಾಮಾರಿದ್ರು ವಾಹನ ಸವಾರರು ಕೈಲಾಸ ಸೇರುವಂತಹ ಪರಿಸ್ಥಿತಿ. ಇದರಿಂದ ಗ್ರಾಮಸ್ಥರು ಶುಕ್ರವಾರ ರಸ್ತೆತಡೆ ನಡೆಸಿ ಕೆರೆಯ ಏರಿಯ ಮೇಲಿನ ಇಕ್ಕೆಲಗಳಲ್ಲಿ ತಡೆಗೋಡೆ ನಿರ್ಮಿಸುವಂತೆ ಪ್ರತಿಭಟನೆ ಮಾಡಿದ್ರು.

ಅಲ್ಲದೇ ಪದೇ ಪದೇ ಅಪಘಾತಗಳು ನಡೆದು ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಸ್ತೆಗೆ ಕುರಿಯನ್ನ ಬಲಿ ನೀಡಿದ್ದಾರೆ. ವಾಹನ ಚಾಲಕರು ಸ್ವಲ್ಪ ಯಾಮಾರಿದ್ರು ಕೆರೆಗೆ ಬೀಳುವುದು ಗ್ಯಾರಂಟಿ. ಇನ್ನೊಂದೆಡೆ ಗದ್ದೆ ರಸ್ತೆಯಿಂದ ಸುಮಾರು ಇಳಿಜಾರಿನಂತಿದೆ. ಆದ್ರೆ ಎರಡು ಭಾಗದಲ್ಲೂ ಸಹ ತಡೆಗೋಡೆಗಳಲ್ಲಿ ಇದ್ರಿಂದ ಸಾರ್ವಜನಿಕರು ಕುರಿಬಲಿ ನೀಡಿ ಅಪಘಾತಗಳು ನಡೆಯದಂತೆ ಪ್ರಾರ್ಥನೆ ಸಲ್ಲಿಸಿದ್ರು.

ರಾಮಮ್ಮನ ಕೆರೆ ತುಂಬಿ ಕೋಡಿ ಹೊಡೆದ ಪರಿಣಾಮ ಗ್ರಾಮಸ್ಥರೆಲ್ಲ ಸೇರಿ ಮೆರವಣಿಗೆ ಮೂಲಕ ಕೆರೆಗೆ ಆಗಮಿಸಿ ಪೂಜೆ ಪುನಸ್ಕಾರ ಸಲ್ಲಿಸಿದ್ದಾರೆ. ಜೊತೆಗೆ ಬಾಗಿನ ಅರ್ಪಿಸಿ ಮಳೆಯಿಂದ ಕೆರೆ ತುಂಬಿದ್ದಕ್ಕೆ ಸಂತೋಷಗೊಂಡಿದ್ದಾರೆ.

SHEEP 3

SHEEP 1

SHEEP

Share This Article
Leave a Comment

Leave a Reply

Your email address will not be published. Required fields are marked *