ರಾಜ್ಯದಲ್ಲಿ ಏ.21ರವರೆಗೆ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆಯಿದೆ. 40ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಆಲಿಕಲ್ಲು ಸಹಿತ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಇನ್ನೂ ಮಳೆಯ ನಡುವೆಯೂ ಮುಂದಿನ 5 ದಿನಗಳ ಕಾಲ ಕರಾವಳಿ ಕರ್ನಾಟಕದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಸಿ ಗಾಳಿ ಹೆಚ್ಚಾಗಲಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ
ಬೆಂಗಳೂರು: 36-22
ಮಂಗಳೂರು: 33-27
ಶಿವಮೊಗ್ಗ: 36-23
ಬೆಳಗಾವಿ: 36-23
ಮೈಸೂರು: 36-22

ಮಂಡ್ಯ: 37-23
ಮಡಿಕೇರಿ: 33-21
ರಾಮನಗರ: 37-22
ಹಾಸನ: 34-21
ಚಾಮರಾಜನಗರ: 36-21
ಚಿಕ್ಕಬಳ್ಳಾಪುರ: 36-22

ಕೋಲಾರ: 35-21
ತುಮಕೂರು: 36-22
ಉಡುಪಿ: 33-27
ಕಾರವಾರ: 31-27
ಚಿಕ್ಕಮಗಳೂರು: 33-20
ದಾವಣಗೆರೆ: 37-24

ಹುಬ್ಬಳ್ಳಿ: 37-24
ಚಿತ್ರದುರ್ಗ: 36-23
ಹಾವೇರಿ: 37-24
ಬಳ್ಳಾರಿ: 39-27
ಗದಗ: 37-24
ಕೊಪ್ಪಳ: 38-26

ರಾಯಚೂರು: 40-28
ಯಾದಗಿರಿ: 40-28
ವಿಜಯಪುರ: 38-27
ಕಲಬುರಗಿ: 39-28
ಬಾಗಲಕೋಟೆ: 38-26

