ವಿದ್ಯೆಗೆ ಸರಸ್ವತಿ, ಸಂಪತ್ತಿಗೆ ಲಕ್ಷ್ಮಿ, ಶಕ್ತಿಗೆ ಪಾರ್ವತಿ.. ಎಲ್ಲಕ್ಕೂ ಮಿಗಿಲಾಗಿ ಜನ್ಮಕೊಟ್ಟವಳು ಹೆಣ್ಣು. ಇಂಥಾ ಲೋಕಮಾತೆಗೆ ಕೋಟಿ ನಮನ.. ಮಕ್ಕಳಿಗೆ ಮಮತೆಯ ಮಡಿಲಾಗಿ, ಕುಟುಂಬದ ಏಳ್ಗೆಗೆ ಹೆಗಲು ಕೊಟ್ಟ ಹೆಣ್ಣಾಗಿ, ಮನೆಯ ಮುದ್ದಿನ ಮಗಳಾಗಿ ಕಾಣುವಾಕೆ ಹೆಣ್ಣು. ಜವಾಬ್ದಾರಿಗಳ ಗಣಿ ಮಹಿಳೆ ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಹೆಜ್ಜೆ ಇಟ್ಟು ಸಾಧನೆ ಮಾಡಿದ್ದಾಳೆ.
ಸಾಧನೆ ಮಾಡಿದ ಸಾಧಕಿಯರನ್ನು ಸನ್ಮಾನಿಸಿದರೆ ಮತ್ತಷ್ಟು ಮಂದಿಗೆ ಆ ಸಾಧನೆಗೆ ಪ್ರೇರಣೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವು ಸಾಧಕಿಯರಿಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ (Women’s Day) ಈ ವಿಶೇಷ ದಿನದಂದು ಪಬ್ಲಿಕ್ ಟಿವಿ (Public TV) ‘ನಾರಿ ನಾರಾಯಣಿ’ ಪ್ರಶಸ್ತಿ (Nari Narayani Award) ನೀಡಿ ಗೌರವಿಸಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಉತ್ಪಾದಕ ರೈತರಿಗೆ ಗುಡ್ ನ್ಯೂಸ್ – ಲೀಟರ್ ಹಾಲಿಗೆ 50 ಪೈಸೆ ಹೆಚ್ಚಳ

ಪಬ್ಲಿಕ್ ಟಿವಿ ಸಹಯೋಗದಲ್ಲಿ ಎಕ್ಸೆಲ್ ಅಕಾಡೆಮಿಕ್ಸ್ ಪ್ರಸ್ತುತ ಪಡಿಸುವ ‘ನಾರಿ ನಾರಾಯಣಿ-2026’ ಕಾರ್ಯಕ್ರಮ ನಗರದಲ್ಲಿ ನಡೆಯಿತು. ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಅವರು ಮಾತನಾಡಿ, ‘ನಾರಿ ನಾರಾಯಣಿ’ ರೂಪುಗೊಂಡ ಉದ್ದೇಶವೇ ನಮ್ಮ ಮಹಿಳೆಯರ ಯಶಸ್ಸನ್ನು ಗುರುತಿಸಬೇಕೆಂದು. ಐದು ವರ್ಷದಿಂದ ಬಹಳ ಅದ್ಭುತವಾಗಿ ನಡೆದುಕೊಂಡು ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಮಾಜದಲ್ಲಿ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳದೇ ಇರುವಂತಹವರನ್ನು ಕರೆದು ಸನ್ಮಾನಿಸುವುದು ಉದ್ದೇಶವಾಗಿತ್ತು. ಆ ದೃಷ್ಟಿಯಿಂದ ‘ನಾರಿ ನಾರಾಯಣಿ’ ಬಗ್ಗೆ ಆಲೋಚನೆ ಮಾಡಿದ್ದೆ. ಸಾಧಕರನ್ನು ಗುರುತಿಸುವ ಕೆಲಸ ಮಾಡಿದರೆ, ನಾಳೆ ಇನ್ಯಾರಿಗೂ ಸಾಧನೆಗೆ ಪ್ರೇರೇಪಣೆ, ಸ್ಫೂರ್ತಿಯಾಗುತ್ತದೆ ಅನ್ನೋ ಉದ್ದೇಶದಿಂದ ಈ ಕಾರ್ಯಕ್ರಮ ಎಂದು ತಿಳಿಸಿದರು. ಇದನ್ನೂ ಓದಿ: T20 World Cup final: ಭಾರತ vs ನ್ಯೂಜಿಲೆಂಡ್ ಫೈನಲ್ ಫೈಟ್ – ಟಿ20 ವಿಶ್ವಕಪ್ ಕಿರೀಟ ಯಾರ ಮುಡಿಗೆ?

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಅವರು ಮಾತನಾಡಿ, ಪಬ್ಲಿಕ್ ಟಿವಿ ಮನೆ ಮನೆಗಳಲ್ಲಿ ಮತ್ತು ಮನಗಳಲ್ಲಿದೆ. ಹೆಣ್ಣನ್ನು ನಾರಾಯಣನಿಗೆ ಹೋಲಿಸಿ ಪ್ರಶಸ್ತಿ ಕೊಡುತ್ತಿರುವುದು ಸಂತಸ ತಂದಿದೆ ಎಂದು ಖುಷಿ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಸಾಧಕಿಯರಾದ ಕ್ರಿಕೆಟ್ ಪಟು ದೀಪಿಕಾ, ಅನಾಥ ಶವಗಳಿಗೆ ಮುಕ್ತಿ ನೀಡುವ ಮಹದೇವಮ್ಮ, ಉದ್ಯಮಿ ಶಶಿಕಲಾ, ಜಯಶ್ರೀ ಗಳಗಣ್ಣನವರ್, ಶರಣ್ಯ ಫಾರ್ಮ್ಸ್ ರೂವಾರಿ ವಿದ್ಯಾರಾಯಣಿ ಜಯಸ್ವಾಮಿ, ಬೀಜ ಮಾತೆ ಪಾಪಮ್ಮ, ಡಾ. ನಫೀಸಾ ಅಹಮದ್, ಆಶಾ, ಗೀತಾ ಪ್ರಿಯಾ, ಮಾಲಾ ಮಖೀಜಾ ಅವರಿಗೆ ‘ನಾರಿ ನಾರಾಯಣಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

