ಢಾಕಾ: ಇಬ್ಬರು ಭಾರತ ವಿರೋಧಿ ಭಯೋತ್ಪಾದನಾ ಆರೋಪಿಗಳು ಸೇರಿದಂತೆ ಮೂವರು ಮಾಜಿ ಅಪರಾಧಿಗಳು ಬಾಂಗ್ಲಾದೇಶದ ಚುನಾವಣೆಯಲ್ಲಿ (Bangladesh Polls) ಗೆಲುವು ಸಾಧಿಸಿದ್ದಾರೆ.
ಹಸೀನಾ ದೇಶಭ್ರಷ್ಟರಾಗಿ ವಾಸಿಸಲು ಭಾರತಕ್ಕೆ ತೆರಳಿದ ನಂತರ, ಮುಹಮ್ಮದ್ ಯೂನಸ್ ಅಮೆರಿಕದಿಂದ ಹಿಂದಿರುಗುವ ಮೊದಲು, ಮೂವರ ಮೇಲೆ ಮರಣದಂಡನೆ ಸೇರಿದಂತೆ ಗಂಭೀರ ಆರೋಪಗಳಿದ್ದವು. ನಂತರ ಯೂನಸ್ ತಮ್ಮ ಎಲ್ಲಾ ಆರೋಪಗಳಿಂದ ಮುಕ್ತರಾದರು. ಇದನ್ನೂ ಓದಿ: ಬಾಂಗ್ಲಾದಲ್ಲಿ ಬಿಎನ್ಪಿ ಕ್ಲೀನ್ ಸ್ವೀಪ್| 20 ವರ್ಷದ ಬಳಿಕ ಅಧಿಕಾರಕ್ಕೆ, ಪ್ರಧಾನಿಯಾಗಲಿದ್ದಾರೆ ಖಲೀದಾ ಜಿಯಾ ಪುತ್ರ
ನೆರೆಯ ಭಾರತದೊಂದಿಗಿನ ಸಂಬಂಧದಲ್ಲಿ ಉದ್ವಿಗ್ನ ಪರಿಸ್ಥಿತಿಯಲ್ಲಿದ್ದ ಈ ಸಣ್ಣ ರಾಷ್ಟ್ರದ ಹೊಸ ಸಂಸತ್ತಿಗೆ ಬಿಎನ್ಪಿಯ ಇಬ್ಬರು ನಾಯಕರಾದ ಲುಟ್ಫೋಝ್ಝಮಾನ್ ಬಾಬರ್, ಅಬ್ದುಸ್ ಸಲಾಮ್ ಪಿಂಟು ಮತ್ತು ಜಮಾತ್-ಎ-ಇಸ್ಲಾಮಿಯ ಎಟಿಎಂ ಅಜರುಲ್ ಇಸ್ಲಾಂ ಆಯ್ಕೆಯಾಗಿದ್ದಾರೆ.
2024 ರ ಡಿಸೆಂಬರ್ನಲ್ಲಿ ಬಾಂಗ್ಲಾದೇಶ ಹೈಕೋರ್ಟ್ ಶೇಖ್ ಹಸೀನಾ ಅವರನ್ನು ಗುರಿಯಾಗಿಸಿಕೊಂಡು, ಆ.21 ರಂದು ನಡೆದ ಗ್ರೆನೇಡ್ ದಾಳಿಗೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ತಾರಿಕ್ ರೆಹಮಾನ್, ಲುಟ್ಫೋಝ್ಝಮಾನ್ ಬಾಬರ್ ಮತ್ತು ಇತರರನ್ನು ದೋಷಮುಕ್ತಗೊಳಿಸಿತು. ಅವರು ಕೂದಲೆಳೆ ಅಂತರದಲ್ಲಿ ಪಾರಾದರೂ, 24 ಜನರು ಸಾವನ್ನಪ್ಪಿದ್ದರು.
ಅಬ್ದುಸ್ ಸಲಾಮ್ ಪಿಂಟು ಭಾರತಕ್ಕೆ ಹೆಚ್ಚು ಸಮಸ್ಯಾತ್ಮಕ ವ್ಯಕ್ತಿ. ಗ್ರೆನೇಡ್ ದಾಳಿ ಪ್ರಕರಣದಲ್ಲಿ ಬಾಬರ್ ಖುಲಾಸೆಗೊಂಡ ಒಂದು ವರ್ಷದ ನಂತರ, ಅವರ ವಿರುದ್ಧದ ಆರೋಪಗಳು ತೆರವಾದಾಗ ಅಬ್ದುಸ್ ಸಲಾಮ್ ಪಿಂಟು ಕೂಡ ನಿರಾಳನಾಗಿದ್ದ.
2006 ರಲ್ಲಿ ಉತ್ತರ ಪ್ರದೇಶದ ವಾರಣಾಸಿಯ ನ್ಯಾಯಾಲಯ ಆವರಣದಲ್ಲಿ, 2007 ರಲ್ಲಿ ಅಜ್ಮೀರ್ ಷರೀಫ್ ದರ್ಗಾದಲ್ಲಿ ಮತ್ತು 2011 ರಲ್ಲಿ ದೆಹಲಿಯಲ್ಲಿ ನಡೆದ ಸ್ಫೋಟಗಳು ಸೇರಿದಂತೆ ಭಾರತದಲ್ಲಿ ನಡೆದ ದಾಳಿಗಳ ಹಿಂದೆ ಪಾಕಿಸ್ತಾನದ ಭಯೋತ್ಪಾದಕ ಗುಂಪು ಹರ್ಕತ್-ಉಲ್-ಜಿಹಾದ್-ಅಲ್-ಇಸ್ಲಾಮಿ (ಹುಜಿ) ಗೆ ಪಿಂಟು ಬೆಂಬಲ ನೀಡಿದ್ದಾನೆ ಎಂದು ಆರೋಪವಿದೆ. ಇದನ್ನೂ ಓದಿ: ಬಿಎನ್ಪಿಗೆ ಗೆಲುವು; ಬಾಂಗ್ಲಾ ಪ್ರಧಾನಿ ಹುದ್ದೆಗೆ ತಾರಿಕ್ ರೆಹಮಾನ್ ಆಯ್ಕೆ – ಮೋದಿ ಅಭಿನಂದನೆ
ಎಟಿಎಂ ಅಝರುಲ್ ಇಸ್ಲಾಂ, 1971 ರ ವಿಮೋಚನಾ ಯುದ್ಧದಲ್ಲಿ 1,200 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣನೆಂದು ಆರೋಪಿಸಲಾಗಿದೆ. 13 ಅತ್ಯಾಚಾರ ಪ್ರಕರಣಗಳಲ್ಲಿಯೂ ಆರೋಪಿಯಾಗಿದ್ದಾನೆ. ಈ ಎಲ್ಲಾ ಅಪರಾಧಗಳಿಗೆ ಆತನಿಗೆ 2014 ರಲ್ಲಿ ಮರಣದಂಡನೆ ವಿಧಿಸಲಾಯಿತು. ಆದರೆ, ಅಮೆರಿಕದಿಂದ ಹಿಂದಿರುಗಿದ ನೊಬೆಲ್ ಪ್ರಶಸ್ತಿ ವಿಜೇತರು ಆತನನ್ನು ಕ್ಷಮಿಸಿ ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿದರು.
ತಾರಿಕ್ ರೆಹಮಾನ್ ಅವರ ಪ್ರಮಾಣವಚನ ಸಮಾರಂಭದ ಕೆಲವೇ ದಿನಗಳಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಮೂವರು ನಾಯಕರು ಪ್ರಜಾಪ್ರಭುತ್ವದ ಪವಿತ್ರ ಸಭಾಂಗಣವಾದ ಬಾಂಗ್ಲಾದೇಶದ ಸಂಸತ್ತನ್ನು ಪ್ರವೇಶಿಸಲಿದ್ದಾರೆ.

