ತುಮಕೂರು: ಹೆತ್ತ ತಾಯಿಯನ್ನೇ (Mother) ಮಗಳು ಉಸಿರುಗಟ್ಟಿಸಿ ಕೊಂದ ಘಟನೆ ತುಮಕೂರಿನ (Tumkur) ಶ್ರೀನಗರದಲ್ಲಿ ನಡೆದಿದೆ.
ಪುಷ್ಪಲತಾ (55) ಮೃತ ದುರ್ದೈವಿ, ಸುಚಿತ್ರಾ (35) ಕೊಲೆಗೈದ ಮಗಳು. ತಾಯಿ ಪುಷ್ಪಲತಾ ಹೆಸರಲ್ಲಿ ಒಂದು ಮನೆ ಹಾಗೂ ಬ್ಯಾಂಕ್ ಖಾತೆಯಲ್ಲಿ 40 ಲಕ್ಷ ರೂಪಾಯಿ ಇತ್ತು. ಇದನ್ನು ಲಪಟಾಯಿಸಲು ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಇದನ್ನೂ ಓದಿ: ಶಾಸಕರ ಪಿಎ ಕಿರುಕುಳ ಆರೋಪ – ಡೆತ್ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಸರ್ಕಾರಿ ನೌಕರ ಡಿಸಿ ಮುಂದೆ ಹಾಜರ್

ತಾಯಿ ಕೊಲೆಗೆ ಇನ್ನೊಂದು ಮುಖ್ಯ ಕಾರಣವೂ ಇದೆ. ಸುಚಿತ್ರಾಳ ತಂದೆ ಕಳೆದ ಒಂದೂವರೆ ವರ್ಷದ ಹಿಂದೆ ತೀರಿ ಹೋಗಿದ್ದರು. ತಾಯಿಯೇ ಮಾಟ ಮಂತ್ರ ಮಾಡಿಸಿ ಕೊಂದಿದ್ದಾಳೆ ಎಂದು ಜ್ಯೋತಿಷಿಯೊಬ್ಬ ಹೇಳಿದ್ದನಂತೆ. ಜ್ಯೋತಿಷಿ ಮಾತು ನಂಬಿ ಸುಚಿತ್ರಾ ತಾಯಿಯನ್ನ ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಸದ್ಯ ಕೊಲೆ ಮಾಡಿದ ಸುಚಿತ್ರಾ ಹಾಗೂ ಸಹಕರಿಸಿದ ಗಂಡ ಸುರೇಶ್ ಕ್ಯಾತಸಂದ್ರ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಫೆ.19ಕ್ಕೆ ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆ – ಚುನಾವಣಾ ತಯಾರಿ, ಸರ್ಕಾರದ ವಿರುದ್ಧ ಹೋರಾಟದ ಬಗ್ಗೆ ಚರ್ಚೆ: ಬಿವೈವಿ

