– ರಾಜ್ಯದ ರೈಲ್ವೆ ಯೋಜನೆಗಳಿಗೆ 7,748 ಕೋಟಿ ಮೀಸಲು
ನವದೆಹಲಿ: ಈ ಬಾರಿಯ ಬಜೆಟ್ನಲ್ಲಿ ರೈಲ್ವೆ ವಲಯಕ್ಕೆ 2.78 ಲಕ್ಷ ಕೋಟಿ ಮೀಸಲಿಡಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ತಿಳಿಸಿದರು.
ಕೇಂದ್ರ ಬಜೆಟ್ (Union Budget 2026) ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್ ದಕ್ಷಿಣ ಹೈ-ಸ್ಪೀಡ್ ತ್ರಿಕೋನ ಅಥವಾ ದಕ್ಷಿಣ ಹೈ-ಸ್ಪೀಡ್ ಡೈಮಂಡ್ ಅನ್ನು ರೂಪಿಸಲಿವೆ. ಇದು ದಕ್ಷಿಣ ಭಾರತದ 5 ರಾಜ್ಯಗಳಿಗೆ ದೊಡ್ಡ ವರದಾನವಾಗಲಿದೆ. ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಕ್ಕೆ ಅನುಕೂಲವಾಗಲಿದೆ ಎಂದು ವಿವರಿಸಿದರು.

ಹೈಸ್ಪೀಡ್ ರೈಲು ಚೆನ್ನೈ-ಬೆಂಗಳೂರು ಪ್ರಯಾಣದ ಸಮಯವನ್ನ ಕೇವಲ 1 ಗಂಟೆ 13 ನಿಮಿಷಗಳಿಗೆ ಇಳಿಸಲಿದೆ. ಬೆಂಗಳೂರು-ಹೈದರಾಬಾದ್ ಕೇವಲ ಎರಡು ಗಂಟೆಗಳ ಪ್ರಯಾಣವಾಗಿರುತ್ತದೆ. ಚೆನ್ನೈ-ಹೈದರಾಬಾದ್ 2 ಗಂಟೆ 55 ನಿಮಿಷಗಳ ಪ್ರಯಾಣವಾಗಿರುತ್ತದೆ ಎಂದು ಹೇಳಿದರು. ಇದನ್ನೂ ಓದಿ: Union Budget 2026 | ಏ.1 ರಿಂದ ಹೊಸ ಆದಾಯ ತೆರಿಗೆ ನೀತಿ, 7 ಅಪರೂಪದ ಕಾಯಿಲೆಗಳ ಔಷಧಿ ಅಗ್ಗ – ಯಾವುದು ದುಬಾರಿ?
ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್ ಎಲ್ಲಾ ಪ್ರಮುಖ ಆರ್ಥಿಕ ನಗರಗಳಾಗಿವೆ. ಜೊತೆಗೆ ಐಟಿ ತಂತ್ರಜ್ಞಾನದ ಪ್ರಮುಖ ಕೇಂದ್ರಗಳಾಗಿವೆ. ಈ ಹೈ-ಸ್ಪೀಡ್ ರೈಲು ಮಾರ್ಗ ರಚಿಸುವುದರಿಂದ ದಕ್ಷಿಣ ಭಾರತದ ರಾಜ್ಯಗಳ ಬೆಳವಣಿಗೆಯ ವೇಗ ಇನ್ನಷ್ಟು ಹೆಚ್ಚಾಗುತ್ತದೆ. ಇದು ದೇಶಕ್ಕೆ ಒಳ್ಳೆಯದು ಮತ್ತು ದಕ್ಷಿಣ ಭಾರತದ ಎಲ್ಲಾ ನಿವಾಸಿಗಳಿಗೂ ಅನುಕೂಲ ಎಂದು ಅಶ್ವಿನಿ ವೈಷ್ಣವ್ ತಿಳಿಸಿದರು. ಇದನ್ನೂ ಓದಿ: Budget 2026: ಒಂದು ರೂಪಾಯಿ ಬಂದಿದ್ದು ಎಲ್ಲಿಂದ? ಹೋಗಿದ್ದು ಎಲ್ಲಿಗೆ?

ರೈಲ್ವೆ ಅಪಘಾತಗಳು 95% ಕಡಿಮೆ
ಇನ್ನೂ ರೈಲ್ವೆ ಅಪಘಾತಗಳು 95% ಕಡಿಮೆಯಾಗಿದೆ. ಮುಂದೆಯೂ ಟ್ರ್ಯಾಕ್ ನಿರ್ವಹಣೆ, ಲೋಕೋ ಪೈಲಟ್ ನಿರ್ವಹಣೆ, ವ್ಯಾಗನ್ ನಿರ್ವಹಣೆ, ಕೋಚ್ ನಿರ್ವಹಣೆ, ಕವಚದ ತ್ವರಿತ ಸ್ಥಾಪನೆ, ಸಿಸಿಟಿವಿ ಕ್ಯಾಮೆರಾಗಳ ಸ್ಥಾಪನೆ, ಓಹೆಚ್ಇ (ಓವರ್ಹೆಡ್ ಎಲೆಕ್ಟ್ರಿಕಲ್) ವ್ಯವಸ್ಥೆಯನ್ನು ನವೀಕರಿಸುವ ಕ್ರಮಗಳು ಮುಂದುವರಿಯಲಿದೆ. ಜೊತೆಗೆ ಹೊಸ ನಿಲ್ದಾಣಗಳನ್ನ ನಿರ್ಮಿಸುವ ಮೂಲಕ ಸುರಕ್ಷತೆಯನ್ನ ಮತ್ತಷ್ಟು ಸುಧಾರಿಸಲಾಗುವುದು. ಮತ್ತು ಗ್ರಾಹಕ ಆರೈಕೆ ಮತ್ತು ಗ್ರಾಹಕ ಸೌಲಭ್ಯಗಳನ್ನ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದರು. ಇದನ್ನೂ ಓದಿ: ವೈಯಕ್ತಿಕ ಬಳಕೆಗೆ ಆಮದು ಮಾಡಿಕೊಳ್ಳುವ ಎಲ್ಲಾ ಸರಕುಗಳ ಮೇಲಿನ ಸುಂಕ 20%ನಿಂದ 10%ಗೆ ಇಳಿಕೆ

ರಾಜ್ಯಕ್ಕೂ ಬಂಪರ್ ಕೊಡುಗೆ
ಈ ಬಾರಿಯ ಬಜೆಟ್ನಲ್ಲಿ ರಾಜ್ಯದ ರೈಲ್ವೆ ಯೋಜನೆಗಳಿಗೆ 7,748 ರೂ. ಕೋಟಿ ಮೀಸಲಿಡಲಾಗಿದೆ. ಕಳೆದ ಬಾರಿಗಿಂತ ಸುಮಾರು 200 ಕೋಟಿ ರೂ. ಹೆಚ್ಚುವರಿ ಹಣ ಮೀಸಲಿಡಲಾಗಿದೆ. 2025-26 ರಲ್ಲಿ 7,559 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಇದರೊಂದಿಗೆ ಬೆಂಗಳೂರು ಸರ್ಬನ್ ರೈಲ್ವೆಗೆ ಈ ಬಾರಿ 500 ಕೋಟಿ ರೂ. ಮೀಸಲಿಡಲಾಗಿದೆ. ಕಳೆದ ಬಾರಿ 350 ಕೋಟಿ ರೂ. ನೀಡಲಾಗಿತ್ತು. ಇದನ್ನೂ ಓದಿ: ಬಜೆಟ್ನಲ್ಲಿ ದೇಶದ ಬಿಕ್ಕಟ್ಟುಗಳನ್ನು ನಿರ್ಲಕ್ಷಿಸಲಾಗಿದೆ: ರಾಹುಲ್ ಗಾಂಧಿ

