Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಬೆಂಗಳೂರು ಕಾಲ್ತುಳಿತ ಬೆನ್ನಲ್ಲೇ ಎಚ್ಚೆತ್ತ ಗುಜರಾತ್‌; ರಥಯಾತ್ರೆಯಲ್ಲಿ ಕಾಲ್ತುಳಿತ ತಪ್ಪಿಸಲು ನಯಾ ಪ್ಲ್ಯಾನ್‌ – AI ಟೆಕ್ನಾಲಜಿ ಮೊರೆ

Public TV
Last updated: June 14, 2025 7:50 am
Public TV
Share
5 Min Read
Jagannath Rath Yatra
SHARE

ಇತ್ತೀಚಿನ ವರ್ಷಗಳಲ್ಲಿ ಸಾಲು ಸಾಲು ಕಾಲ್ತುಳಿತ ಪ್ರಕರಣಗಳು ವರದಿಯಾಗುತ್ತಿವೆ. ಮಹಾಕುಂಭಮೇಳ, ತಿರುಪತಿ ದೇವಸ್ಥಾನ, ಅಲ್ಲು ಅರ್ಜುನ್ ಅಭಿನಯದ ಪುಷ್ಪಾ-2 ಸೆಲೆಬ್ರೇಷನ್, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವ ಸಂಭ್ರಮದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತಕ್ಕೆ ಹತ್ತಾರು ಮಂದಿ ಉಸಿರು ಚೆಲ್ಲಿದರು. ಈ ದುರಂತಗಳು ಆಡಳಿತ ಸರ್ಕಾರಗಳು ಹಾಗೂ ಭದ್ರತಾ ವ್ಯವಸ್ಥೆಗಳಿಗೆ ಎಚ್ಚರಿಕೆ ಕರೆಗಂಟೆಯಾಗಿದೆ. ಲಕ್ಷಾಂತರ ಮಂದಿ ಸೇರುವಂತಹ ಸಮಾರಂಭ, ಜಾತ್ರೆ, ಸಂಭ್ರಮೋತ್ಸವಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆಗಳು ಚಿಂತನೆ ನಡೆಸಿವೆ. ಈ ಹೊತ್ತಿನಲ್ಲೇ, ಗುಜರಾತ್‌ನ ಅಹಮದಾಬಾದ್‌ನಲ್ಲಿ ಐತಿಹಾಸಿಕ ಜಗನ್ನಾಥ ರಥ ಯಾತ್ರೆಗೆ ವೇದಿಕೆ ಸಜ್ಜಾಗಿದೆ. ಬೆಂಗಳೂರಿನಲ್ಲಾದ ಕಾಲ್ತುಳಿತ ಅವಘಡದಿಂದ ಎಚ್ಚೆತ್ತಿರುವ, ಅಹಮದಾಬಾದ್ ಪೊಲೀಸರು ನಯಾ ಪ್ಲ್ಯಾನ್‌ವೊಂದನ್ನು ರೂಪಿಸಿದ್ದಾರೆ. ದುರಂತಗಳು ಸಂಭವಿಸಿದಂತೆ ನೋಡಿಕೊಳ್ಳಲು ಎಐ ತಂತ್ರಜ್ಞಾನದ ಮೊರೆ ಹೋಗಿದ್ದಾರೆ.

ಜಗನ್ನಾಥ ರಥಯಾತ್ರೆ
ಅಹಮದಾಬಾದ್‌ನಲ್ಲಿ ನಡೆಯುವ ರಥಯಾತ್ರೆ ಅದೊಂದು ಐತಿಹಾಸಿಕ ಹಿಂದೂ ಹಬ್ಬ. 1878ರಿಂದಲೂ ಪ್ರತಿವರ್ಷ ರಥೋತ್ಸವ ಜರುಗುತ್ತಿದೆ. ಜಗನ್ನಾಥ ದೇವಸ್ಥಾನವು ಆಷಾಢ ಸುಧ್ ಬಿಜ್‌ನಂದು ರಥಯಾತ್ರೆ ಮೆರವಣಿಗೆಯನ್ನು ಆಯೋಜಿಸುತ್ತದೆ. ಈ ಹಬ್ಬದಂದು ಜಗನ್ನಾಥ, ಬಲರಾಮ ಮತ್ತು ಸುಭದ್ರ ದೇವತೆಗಳನ್ನು ಪೂಜಿಸಲಾಗುತ್ತದೆ. ಈಗ ಮತ್ತೆ 148ನೇ ಜಗನ್ನಾಥ ರಥಯಾತ್ರೆಗೆ ವೇದಿಕೆ ಸಿದ್ಧವಾಗಿದೆ. ಇದೇ ಜೂ.27 ರಂದು ರಥೋತ್ಸವ ನಡೆಯಲಿದೆ. ಪವಿತ್ರ ಮೆರವಣಿಗೆಯನ್ನು ವೀಕ್ಷಿಸಲು 15 ಲಕ್ಷಕ್ಕೂ ಹೆಚ್ಚು ಭಕ್ತರು ಸೇರುವ ನಿರೀಕ್ಷೆಯಿದೆ.

bengaluru stambede 1

ಕರ್ನಾಟಕದ ಬೆಂಗಳೂರಿನಲ್ಲಿ ಈಚೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ವಿಜಯೋತ್ಸವದ ಸಂಭ್ರಮಾಚರಣೆಯಲ್ಲಿ 11 ಜನರು ಸಾವನ್ನಪ್ಪಿ, ಹತ್ತಾರು ಜನರು ಗಾಯಗೊಂಡ ದುರ್ಘಟನೆ ನಡೆಯಿತು. ಪರಿಣಾಮವಾಗಿ ಅಹಮದಾಬಾದ್‌ನಲ್ಲಿ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ. ಲಕ್ಷಾಂತರ ಮಂದಿ ಸೇರುವ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಸೂಕ್ತ ಭದ್ರತಾ ವ್ಯವಸ್ಥೆಗೆ ಮುಂದಾಗಿವೆ.

ಕಾಲ್ತುಳಿತ ತಪ್ಪಿಸಲು ಎಐ ಮೊರೆ!
ಅತಿಹೆಚ್ಚು ಜನಸಂದಣಿಯ ಮಾರ್ಗದುದ್ದಕ್ಕೂ ಅತ್ಯಾಧುನಿಕ ಸಾಫ್ಟ್‌ವೇರ್‌ ವ್ಯವಸ್ಥೆ ಇರುವ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಸಂಭವನೀಯ ಕಾಲ್ತುಳಿತ ತಪ್ಪಿಸಲು ಕೃತಕ ಬುದ್ಧಿಮತ್ತೆ (AI) ಹೊಂದಿರುವ ಡ್ರೋನ್ ಬಳಸಲು ಅಹಮದಾಬಾದ್ ಪೊಲೀಸರು ಕ್ರಮವಹಿಸಿದ್ದಾರೆ. ಈ ವ್ಯವಸ್ಥೆಯು ಇನ್ನೂ ಅಭಿವೃದ್ಧಿ ಹಂತದಲ್ಲಿದೆ. ‘ಕಳೆದ ವರ್ಷ ಜಗನ್ನಾಥ ದೇವಸ್ಥಾನದಿಂದ ಆರಂಭವಾಗಿ ಸರಸ್ಪುರದ ವರೆಗೆ ಸಾಗಿ ಅದೇ ದೇವಸ್ಥಾನದಲ್ಲಿ ಕೊನೆಗೊಳ್ಳುವ ರಥಯಾತ್ರೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸಲು ನಾವು ಸಾಕಷ್ಟು ತಂತ್ರಜ್ಞಾನವನ್ನು ಬಳಸಿದ್ದೇವೆ. ಈ ಬಾರಿ ವಿಶೇಷವಾಗಿ ಯಾತ್ರೆಯ ಮಾರ್ಗದಲ್ಲಿ ಅತ್ಯಂತ ಜನದಟ್ಟಣೆಯ ಸ್ಥಳಗಳಲ್ಲಿ ಎಐ ಆಧಾರಿತ ಕಾಲ್ತುಳಿತ ತಪ್ಪಿಸುವ ವ್ಯವಸ್ಥೆಯನ್ನು ಬಳಸಲು ನಾವು ಯೋಜಿಸುತ್ತಿದ್ದೇವೆ ಎಂದು ಅಪರಾಧ ವಿಭಾಗದ ಎಸಿಪಿ ಭರತ್ ಪಟೇಲ್ ತಿಳಿಸಿದ್ದಾರೆ.

ಹೊಸ ತಂತ್ರಜ್ಞಾನ ಹೇಗೆ ಕಾರ್ಯನಿರ್ವಹಿಸುತ್ತೆ?
ನಿರ್ದಿಷ್ಟ ಚದರ ಮೀಟರ್‌ಗಳ ವ್ಯಾಪ್ತಿಯಲ್ಲಿ ಜನರ ಸಾಂದ್ರತೆಯನ್ನು ಈ ತಂತ್ರಜ್ಞಾನ ಲೆಕ್ಕಹಾಕುತ್ತದೆ. ಈ ಭಾಗದಲ್ಲಿ ಕಾಲ್ತುಳಿತದ ಅಪಾಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ. ಕಾಲ್ತುಳಿತ ತಪ್ಪಿಸಲು ಜನಸಂದಣಿಯನ್ನು ಚದುರಿಸಲು ಅಧಿಕಾರಿಗಳಿಗೆ ಸಿಗ್ನಲ್ ರವಾನಿಸುತ್ತದೆ. ಈ ಟೆಕ್ನಾಲಜಿ ಫಲಿತಾಂಶಗಳ ಆಧಾರದ ಮೇಲೆ ಪೊಲೀಸರು ಕ್ರಮಕೈಗೊಳ್ಳುತ್ತಾರೆ. ಅಪರಾಧ ಪತ್ತೆ ದಳ (ಡಿಸಿಬಿ) ಹಂಚಿಕೊಂಡ ಮಾಹಿತಿಯ ಪ್ರಕಾರ, ‘ಸಿಸಿಟಿವಿ ಕ್ಯಾಮೆರಾಗಳಲ್ಲಿನ ಕಾಲ್ತುಳಿತ ವಿರೋಧಿ ಅಲ್ಗಾರಿದಮ್‌ಗಳು ಜನಸಂದಣಿ ನಿರ್ವಹಣೆಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ. ಜನನಿಬಿಡ ಪ್ರದೇಶಗಳಲ್ಲಿ ಅಪಾಯಕಾರಿ ಸಂದರ್ಭಗಳನ್ನು ತಡೆಗಟ್ಟಲು ಎಐ ಮತ್ತು ಇಮೇಜ್ ಸಂಸ್ಕರಣೆಯನ್ನು ಬಳಸಿಕೊಳ್ಳುತ್ತವೆ’.

rcb bengaluru stampede

ರಥಯಾತ್ರೆಯ ಮಾರ್ಗದಲ್ಲಿ ಅತ್ಯಂತ ಜನದಟ್ಟಣೆಯ ಸ್ಥಳಗಳೆಂದರೆ ಜಗನ್ನಾಥ ದೇವಸ್ಥಾನ, ಧಲ್ ನಿ ಪೋಲ್ ಬಳಿಯ ಕಿರಿದಾದ ಮಾರ್ಗ, ಚಕಲೇಶ್ವರ ಮಹಾದೇವ ದೇವಸ್ಥಾನದ ಬಳಿಯ ಪ್ರದೇಶ, ಭಾಗವಹಿಸುವವರು ಊಟಕ್ಕೆ ನಿಲ್ಲುವ ಸರಸ್ಪುರ ನಿಲ್ದಾಣ ಮತ್ತು ಜಗನ್ನಾಥ ದೇವಸ್ಥಾನಕ್ಕೆ ಹಿಂತಿರುಗುವ ಮಾರ್ಗದಲ್ಲಿ ಶಹಪುರ ಪ್ರದೇಶದಲ್ಲಿ ಕಿರಿದಾದ ಮಾರ್ಗ. ತಂತ್ರಜ್ಞಾನದ ಕುರಿತು ಮಾತನಾಡಿರುವ ಎಸಿಪಿ ಪಟೇಲ್, ಈ ಸಿಸ್ಟಮ್ ಅತಿಹೆಚ್ಚು ಜನಸಂದಣಿ ಇರುವ ಪ್ರದೇಶಗಳನ್ನು ಎಣಿಸಲು ಥರ್ಮಲ್ ಇಮೇಜಿಂಗ್ ಮತ್ತು ಪಿಕ್ಸೆಲ್-ಕೌಂಟಿಗ್‌ನ್ನು ಬಳಸುತ್ತದೆ. ಪೊಲೀಸ್ ನಿಯಂತ್ರಣ ಕೊಠಡಿ ಹಾಗೂ ಕ್ಷೇತ್ರ ಘಟಕಗಳಲ್ಲಿ ಇರಿಸಲಾಗುವ ಪರದೆಗಳಿಗೆ ಈ ಮಾಹಿತಿಯನ್ನು ನಿರಂತರವಾಗಿ ರವಾನಿಸುತ್ತದೆ. ಇದರಿಂದಾಗಿ ನಿರ್ದಿಷ್ಟ ಜಾಗದಲ್ಲಿ ಜನರ ಸಂಖ್ಯೆಯು ಮಿತಿಯನ್ನು ಮೀರಿದರೆ ಕ್ರಮ ಕೈಗೊಳ್ಳಲು ಸ್ಥಳದಲ್ಲಿ ನಿಯೋಜನೆಗೊಳ್ಳುವ ಪಡೆಗಳಿಗೆ ತಕ್ಷಣ ಸೂಚನೆ ನೀಡಬಹುದು.

ರಥಯಾತ್ರೆಯು ಮೆರವಣಿಗೆಯಾಗಿರುವುದರಿಂದ ಜನಸಂದಣಿಯು ಸಾಗುತ್ತಾ ಅಂತಿಮವಾಗಿ ಒಂದು ಪ್ರದೇಶದಲ್ಲಿ ಜಮಾಯಿಸುವ ಸಾಧ್ಯತೆ ಇರುತ್ತದೆ. ಇದೆಲ್ಲವನ್ನೂ ಲೆಕ್ಕಾಚಾರ ಮಾಡಿ, ಒಂದೆಡೆ ಸೇರುವ ಜನಸಮೂಹಕ್ಕೆ ಸ್ಥಳಾವಕಾಶ ಕಲ್ಪಿಸಲು ಪೊಲೀಸ್ ಸಿಬ್ಬಂದಿಯನ್ನು ನಿರ್ದಿಷ್ಟ ಪ್ರದೇಶದಲ್ಲಿ ನಿಯೋಜನೆ ಮಾಡಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಅಹಮದಾಬಾದ್‌ನಲ್ಲಿ ನಡೆದ ಯಾತ್ರೆಯಲ್ಲಿ ಯಾವುದೇ ಕಾಲ್ತುಳಿತ ಸಂಭವಿಸಿಲ್ಲ. ಸುಧಾರಿತ ತಂತ್ರಜ್ಞಾನವನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಳಸಲಾಗುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಸೇರಿದಂತೆ ಇತರೆ ಅವಘಡಗಳನ್ನು ಮನನ ಮಾಡಿಕೊಂಡು ಇಲ್ಲಿನ ಪೊಲೀಸ್ ಇಲಾಖೆ ಎಚ್ಚರಿಕೆ ಹೆಜ್ಜೆಯನ್ನಿಟ್ಟಿದೆ.

Jagannath Rath Yatra 1

ಏನಿದು ಹೊಸ ತಂತ್ರಜ್ಞಾನ?
* ಮೇಲ್ವಿಚಾರಣೆ: ಎಐ-ಚಾಲಿತ ಸಿಸಿಟಿವಿ ಕ್ಯಾಮೆರಾಗಳು ನೈಜ ಸಮಯದಲ್ಲಿ ವೀಡಿಯೊ ಸ್ಟ್ರೀಮ್‌ಗಳನ್ನು ನಿರಂತರವಾಗಿ ವಿಶ್ಲೇಷಿಸುತ್ತವೆ.

* ಜನಸಂದಣಿ ಸಾಂದ್ರತೆಯ ಅಂದಾಜು: ಅಲ್ಗಾರಿದಮ್‌ಗಳು ನಿರ್ದಿಷ್ಟ ಪ್ರದೇಶದಲ್ಲಿನ ಜನರ ಸಂಖ್ಯೆಯನ್ನು ಲೆಕ್ಕಾಚಾರ ಮಾಡುತ್ತದೆ. ಇದು ಪಿಕ್ಸೆಲ್-ಆಧಾರಿತ ವಿಶ್ಲೇಷಣೆ ಮಾಡುತ್ತದೆ. ತಲೆಗಳ ಮೂಲಕ ವ್ಯಕ್ತಿಗಳನ್ನು ಗುರುತಿಸಲು ಮತ್ತು ಎಣಿಸಲು ಯಂತ್ರ ಕಲಿಕೆ ಮಾದರಿಗಳನ್ನು ಬಳಸುವುದು.

* ಮಿತಿ: ಜನಸಂದಣಿ ಸಾಂದ್ರತೆಗಾಗಿ ಮೌಲ್ಯಮಾಪನ ಮಾಡುತ್ತದೆ. ಪತ್ತೆಯಾದ ಸಾಂದ್ರತೆಯು ಮಿತಿಗಳನ್ನು ದಾಟಿದರೆ, ಎಚ್ಚರಿಕೆ ಸಂದೇಶ ರವಾನಿಸುತ್ತದೆ.

* ಅವಘಡಗಳ ಪತ್ತೆ: ಈ ಅಲ್ಗಾರಿದಮ್‌ಗಳು ಚಲನೆಯಲ್ಲಿ ಹಠಾತ್ ಉಲ್ಬಣಗಳು, ಅಸಾಮಾನ್ಯ ಕ್ಲಸ್ಟರಿಂಗ್ ಮಾದರಿಗಳು, ಬಿದ್ದ ವ್ಯಕ್ತಿಗಳು ಮತ್ತು ಆಕ್ರಮಣಕಾರಿ ಚಲನೆಯಂತಹ ಅಸಾಮಾನ್ಯ ಜನಸಂದಣಿಯ ನಡವಳಿಕೆಯನ್ನು ಗುರುತಿಸಬಹುದು.

* ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶ: ಸಂಭಾವ್ಯ ಕಾಲ್ತುಳಿತದ ಅಪಾಯವನ್ನು ಪತ್ತೆಹಚ್ಚಿದ ನಂತರ, ವ್ಯವಸ್ಥೆಯು LCD ಡಿಸ್ಪ್ಲೇಗಳು, GSM ಸಂದೇಶಗಳು ಅಥವಾ ಇತರ ಸಂವಹನ ಮಾರ್ಗಗಳ ಮೂಲಕ ಭದ್ರತಾ ಸಿಬ್ಬಂದಿ ಅಥವಾ ನಿಯಂತ್ರಣ ಕೊಠಡಿಗಳಿಗೆ ತಕ್ಷಣದ ಎಚ್ಚರಿಕೆಗಳನ್ನು ಕಳುಹಿಸುತ್ತದೆ.

Jagannath Rath Yatra 2

ಟೆಕ್ನಾಲಜಿ ಪ್ರಯೋಜನಗಳೇನು?
* ಪೂರ್ವಭಾವಿ ತಡೆಗಟ್ಟುವಿಕೆ: ಕಾಲ್ತುಳಿತಗಳು ಸಂಭವಿಸುವ ಮೊದಲೇ ಪತ್ತೆಹಚ್ಚುವ ಮತ್ತು ಎಚ್ಚರಿಕೆ ನೀಡುವ ಸಾಮರ್ಥ್ಯ. ಇದು ಅಧಿಕಾರಿಗಳಿಗೆ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ.

* ನಿಖರ ಡೇಟಾ: ಜನಸಂದಣಿ ಸಾಂದ್ರತೆ ಮತ್ತು ಚಲನೆಯ ಕುರಿತು ತಕ್ಷಣದ & ನಿಖರವಾದ ಡೇಟಾವನ್ನು ಒದಗಿಸುತ್ತದೆ.

* ಸುರಕ್ಷತೆ: ಮಾನವ ದೋಷಗಳನ್ನು ಕಡಿಮೆ ಮಾಡುವ ಮೂಲಕ ಮತ್ತು ಅಪಾಯಗಳಿಗೆ ತ್ವರಿತ ಪ್ರತಿಕ್ರಿಯೆಗಳನ್ನು ಸಕ್ರಿಯಗೊಳಿಸುವ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ.

* ಮುನ್ನೆಚ್ಚರಿಕೆ ಕ್ರಮಕ್ಕೆ ಸಹಕಾರಿ: ಹೆಚ್ಚಿನ ಜನಸಂದಣಿ ಸಾಂದ್ರತೆಯಿರುವ ಪ್ರದೇಶಗಳಿಗೆ ಭದ್ರತಾ ಸಿಬ್ಬಂದಿ ಮತ್ತು ಸಂಪನ್ಮೂಲಗಳ ಉತ್ತಮ ನಿಯೋಜನೆಗೆ ಸಹಾಯ ಮಾಡುತ್ತದೆ.

* ಭವಿಷ್ಯದ ಯೋಜನೆಗಾಗಿ ಡೇಟಾ: ಭವಿಷ್ಯದ ಕಾರ್ಯಕ್ರಮಗಳಿಗಾಗಿ ಜನಸಂದಣಿ ನಿರ್ವಹಣಾ ತಂತ್ರಗಳನ್ನು ಸುಧಾರಿಸಲು ಸಂಗ್ರಹಿಸಿದ ಡೇಟಾವನ್ನು ವಿಶ್ಲೇಷಿಸಬಹುದು.

ಸವಾಲುಗಳೇನು?
* ಸೀಮಿತ ನಿಖರತೆ: ಎಐ ಅಲ್ಗಾರಿದಮ್‌ಗಳು ಮುಚ್ಚುವಿಕೆ (ಜನರು ಪರಸ್ಪರ ನಿರ್ಬಂಧಿಸುವುದು), ವಿಭಿನ್ನ ಪರಿಸ್ಥಿತಿಗಳು (ಬೆಳಕು, ಹವಾಮಾನ ಮತ್ತು ಕ್ಯಾಮೆರಾ ಕೋನಗಳಲ್ಲಿನ ಬದಲಾವಣೆಗಳು) ಮತ್ತು ತರಬೇತಿ ಡೇಟಾದಲ್ಲಿನ ಪಕ್ಷಪಾತ (ತಪ್ಪು ಧನಾತ್ಮಕತೆಗೆ ಕಾರಣವಾಗುತ್ತದೆ) ಸಮಸ್ಯೆಗಳು ಎದುರಾಗಬಹುದು.

* ಕಂಪ್ಯೂಟೇಶನಲ್ ಸಂಕೀರ್ಣತೆ ಮತ್ತು ವೆಚ್ಚ: ಹೆಚ್ಚಿನ ರೆಸಲ್ಯೂಶನ್ ಕ್ಯಾಮೆರಾಗಳು, ಶಕ್ತಿಯುತ ಸಂಸ್ಕರಣಾ ಘಟಕಗಳು ಮತ್ತು ಅತ್ಯಾಧುನಿಕ ಅಲ್ಗಾರಿದಮ್‌ಗಳ ಅಗತ್ಯತೆಯಿಂದಾಗಿ ಅಂತಹ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ನಿಯೋಜಿಸುವುದು ದುಬಾರಿಯಾಗಬಹುದು.

* ಡೇಟಾ ಗೌಪ್ಯತೆ ಮತ್ತು ನೈತಿಕ ಕಾಳಜಿ: CCTV ಮತ್ತು AIನ ವ್ಯಾಪಕ ಬಳಕೆಯು ಗೌಪ್ಯತೆ ಮತ್ತು ಡೇಟಾದ ಸಂಭಾವ್ಯ ದುರುಪಯೋಗದ ಬಗ್ಗೆ ಕಳವಳ ಹುಟ್ಟುಹಾಕುತ್ತದೆ.

* ಅಸ್ತಿತ್ವದಲ್ಲಿರುವ ಮೂಲಸೌಕರ್ಯದೊಂದಿಗೆ ಏಕೀಕರಣ: ಹಳೆಯ ಸಿಸಿಟಿವಿ ನೆಟ್‌ವರ್ಕ್ಗಳೊಂದಿಗೆ ಹೊಸ AI-ಚಾಲಿತ ವ್ಯವಸ್ಥೆಗಳನ್ನು ಸಂಯೋಜಿಸುವುದು ಸಂಕೀರ್ಣವಾಗಬಹುದು.

* ಮಿತಿಗಳನ್ನು ವ್ಯಾಖ್ಯಾನಿಸುವುದು: ವಿಭಿನ್ನ ಪರಿಸರ ಮತ್ತು ಸಾಂಸ್ಕೃತಿಕ ಸಂದರ್ಭಗಳಿಗೆ ಸೂಕ್ತವಾದ ಜನಸಂದಣಿ ಸಾಂದ್ರತೆಯ ಮಿತಿಗಳನ್ನು ನಿರ್ಧರಿಸುವುದು ಸವಾಲಿನದ್ದಾಗಿರಬಹುದು.

TAGGED:AhmedabadAhmedabad PoliceBengaluru StampedeJagannath Rath Yatraಅಹಮದಾಬಾದ್ಜಗನ್ನಾಥ ರಥಯಾತ್ರೆಬೆಂಗಳೂರು ಕಾಲ್ತುಳಿತ
Share This Article
Facebook Whatsapp Whatsapp Telegram

Cinema News

Allu Arjun Sneha Reddy
ಶೂಟಿಂಗ್‌ಗಾಗಿ ಮುಂಬೈಗೆ ಹಾರಿದ ಐಕಾನ್ ಸ್ಟಾರ್
Cinema Latest Top Stories
chiranjeevi 6
ಟ್ರೋಲರ್ಸ್‌ ವಿರುದ್ಧ ರೊಚ್ಚಿಗೆದ್ದ ಚಿರಂಜೀವಿ
Cinema Latest South cinema
Santosh balaraj 2
ಕ್ರಿಶ್ಚಿಯನ್ ಸಂಪ್ರದಾಯದಂತೆ ನೆರವೇರಿದ ನಟ ಸಂತೋಷ್ ಬಾಲರಾಜ್ ಅಂತ್ಯಕ್ರಿಯೆ
Bengaluru Rural Cinema Latest Sandalwood
Actress Ramya case koppal man into custody
ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ – ಕೊಪ್ಪಳ ಮೂಲದ ಓರ್ವ ವಶಕ್ಕೆ
Cinema Districts Karnataka Koppal Latest Top Stories
DARSHAN 1 1
ಅಪಹರಣಕ್ಕೆ ಸೂಚನೆ ನೀಡಿಲ್ಲ, ಯಾವುದೇ ಪುರಾವೆ ಇಲ್ಲ – ಜಾಮೀನು ರದ್ದು ಮಾಡ್ಬೇಡಿ: ದರ್ಶನ್‌ ವಾದ ಏನು?
Cinema Court Latest Main Post

You Might Also Like

Talaguppa Mysuru Train Coach Derail In Shivamogga
Crime

Shivamogga | ಕಳಚಿದ ತಾಳಗುಪ್ಪ – ಮೈಸೂರು ರೈಲು ಬೋಗಿ; ತಪ್ಪಿದ ಭಾರೀ ಅನಾಹುತ

Public TV
By Public TV
11 minutes ago
Rahul Gandhi
Latest

ಅಮಿತ್ ಶಾ ವಿರುದ್ಧದ ಮಾನಹಾನಿ ಕೇಸ್ – ರಾಹುಲ್ ಗಾಂಧಿಗೆ ಜಾಮೀನು ಮಂಜೂರು

Public TV
By Public TV
12 minutes ago
kaiga nuclear power plant
Latest

ಕೈಗಾ ಅಣುಸ್ಥಾವರದ ವಿಕಿರಣದಿಂದ ಜನರಲ್ಲಿ ಕ್ಯಾನ್ಸರ್ ಪತ್ತೆಯಾಗಿಲ್ಲ: ಅಣು ವಿದ್ಯುತ್ ಸ್ಥಾವರದ ನಿರ್ದೇಶಕ ಸ್ಪಷ್ಟನೆ

Public TV
By Public TV
45 minutes ago
youtubers beaten up Chaos erupted in Dharmasthala devotees outraged 2
Dakshina Kannada

ಯೂಟ್ಯೂಬರ್‌ಗಳಿಗೆ ಥಳಿತ, ಅಪಪ್ರಚಾರಿಗಳನ್ನು ಬಂಧಿಸಿ – ಸಿಡಿದ ಧರ್ಮಸ್ಥಳದ ಭಕ್ತರು

Public TV
By Public TV
53 minutes ago
5 year old girl raped Man from Bagalkot arrested in Belagavi
Belgaum

5ರ ಬಾಲೆಯ ಮೇಲೆ ರೇಪ್‌ – ಬೆಳಗಾವಿಯಲ್ಲಿ ಬಾಗಲಕೋಟೆ ಮೂಲದ ವ್ಯಕ್ತಿ ಅರೆಸ್ಟ್‌

Public TV
By Public TV
2 hours ago
Narendra Modi Donald Trump
Latest

ಭಾರತಕ್ಕೆ ಮತ್ತೊಂದು ಶಾಕ್ – ಆಮದುಗಳ ಮೇಲೆ 50% ಸುಂಕ ವಿಧಿಸಿದ ಟ್ರಂಪ್

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?