ಅಕ್ಕಪಕ್ಕ ಕೂರಿಸಿಕೊಂಡು ಡಿಕೆಶಿ-ಅಶ್ವಥ್‍ಗೆ ನಿರ್ಮಲಾನಂದ ಶ್ರೀಗಳು ಕಿವಿಮಾತು

Public TV
1 Min Read
NIRMALANANDA SHREE 1

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಚಿವ ಅಶ್ವಥ್ ನಾರಾಯಣ್ ಅವರ ವಾಕ್ಸಮರ ಮುಂದುವರಿದ ಹಿನ್ನೆಲೆಯಲ್ಲಿ ನಿರ್ಮಲಾನಂದ ಶ್ರೀಗಳು ಇಬ್ಬರಿಗೂ ಕಿವಿ ಮಾತು ಹೇಳಿದ್ದಾರೆ.

ಇಬ್ಬರು ನಾಯಕರನ್ನು ಕೂಡ ತಮ್ಮ ಅಕ್ಕಪಕ್ಕ ಕೂರಿಸಿಕೊಂಡು ಶ್ರೀಗಳು ಕೆಲವೊಂದಿಷ್ಟು ಸಲಹೆಗಳನ್ನು ನೀಡಿದ್ದಾರೆ. ದ್ವೇಷ-ವೈಮನಸ್ಸು ಬೆಳೆಸಿಕೊಳ್ಳಬೇಡಿ. ಪ್ರೀತಿ ವಿಶ್ವಾಸದಿಂದ ಕೆಲಸ ಮಾಡಿ ಅಂತ ತಿಳಿಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: 5 ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

NIRMALANANDA SHREE

ಇತ್ತ ಏನೂ ಮಾತನಾಡಬೇಡಿ ಎಂದು ಶ್ರೀಗಳ ಸಂದೇಶ ನೀಡಿದ್ರಾ ಎಂಬ ಪ್ರಶ್ನೆಗೆ ಅಶ್ವಥ್ ನಾರಾಣ್ ಪ್ರತಿಕ್ರಿಯಿಸಿ, ರಾಜಕೀಯದಲ್ಲಿ ಎಲ್ಲಾ ಗುರುಹಿರಿಯರು ಸಲಹೆ ನೀಡುತ್ತಾರೆ. ದ್ವೇಷ ವೈಮನಸ್ಸು ಬೆಳೆಸಿಕೊಳ್ಳಬೇಡಿ. ಪ್ರೀತಿ ವಿಶ್ವಾಸದಿಂದ ಕೆಲಸ ಮಾಡಿ ಅನ್ನೋದು ಗುರುಹಿರಿಯರ ಆಶೀರ್ವಾದವಾಗಿದೆ. ಡಿ.ಕೆ ಶಿವಕುಮಾರ್‍ಗೆ ಹಾರೈಸುತ್ತೇವೆ ಎಂದರು.

ದ್ವೇಷ ಬೆಳೆಸಿಕೊಳ್ಳಬೇಡಿ ಎಂದು ಗುರುಹಿರಿಯರು ಯಾವಾಗಲೂ ಹೇಳುತ್ತಾರೆ. ನಾನು ಡಿ.ಕೆ ಶಿವಕುಮಾರ್ ಅವ್ರಿಗೆ ಶುಭಕೋರುತ್ತೇನೆ. ನೀವು ಸಾಧನೆ ಮಾಡಿ. ಕೆಂಪೇ ಗೌಡರ ಪ್ರೇರಣೆ ತೆಗೆದುಕೊಳ್ಳಲಿ. ಅಭಿವೃದ್ಧಿ ಮಾಡಿ, ಒಳ್ಳೇದಾಗುತ್ತದೆ ಎಂದು ಅಶ್ವಥ್ ನಾರಾಯಣ್ ಹೇಳಿದರು.

Share This Article