ಮೈಸೂರು: ಮಾರುವೇಷದಲ್ಲಿದ್ದ ಸ್ಯಾಂಟ್ರೋ ರವಿಯ (Santro Ravi) ಪತ್ತೆಗೆ ಆತನ ಹಣೆಯ ಮೇಲಿರುವ ಮಾರ್ಕ್ ಖಾಕಿಗೆ ಸುಳಿವು ನೀಡಿತ್ತು ಎನ್ನುವ ವಿಷಯ ಇದೀಗ ಬೆಳಕಿಗೆ ಬಂದಿದೆ.
ವೇಶ್ಯಾವಾಟಿಕೆ ದಂಧೆ, ಜಾತಿ ನಿಂದನೆ, ಸರ್ಕಾರಿ ಅಧಿಕಾರಿಗಳ ವರ್ಗಾವಣೆ ದಂಧೆ ಸೇರಿದಂತೆ ಅನೇಕ ಕ್ರಿಮಿನಲ್ ಪ್ರಕರಣಗಳ ಆರೋಪ ಹೊತ್ತಿದ್ದ ಸ್ಯಾಂಟ್ರೋ ರವಿಯನ್ನು ಶುಕ್ರವಾರ ಗುಜರಾತ್ನ (Gujarat) ಅಹಮದಾಬಾದ್ನಲ್ಲಿ ಪೊಲೀಸರು ಬಂಧಿಸಿದ್ದರು. ಆದರೆ ಇದಕ್ಕೂ ಮುನ್ನ ಸುಮಾರು 10 ದಿನಗಳ ಕಾಲ ಮಾರುವೇಷದಲ್ಲಿ ತಿರುಗಾಡುತ್ತಿದ್ದ.
ಅಷ್ಟೇ ಅಲ್ಲದೇ 20 ವರ್ಷದ ಹಿಂದಿನ ವಿಗ್ ಇರುವ ಫೋಟೋಗಳಿಂದ ಮುಖಚಹರೆ ಗೊಂದಲ ಉಂಟು ಮಾಡಿತ್ತು. ಆದರೆ ಆತನ ಹಣೆಯ ಎಡಭಾಗದಲ್ಲಿರುವ ಗುರುತಿನಿಂದಾಗಿ ಆತನೇ ಸ್ಯಾಂಟ್ರೋ ರವಿ ಎನ್ನುವುದು ಬಂಧನದ (Arrest) ವೇಳೆ ಮೈಸೂರು ಪೊಲೀಸರಿಗೆ ಸಹಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿದ್ದು, ಸದ್ಯ ಆತ ಮೈಸೂರಿನ (Mysuru) ಕಾರಾಗೃಹದಲ್ಲಿದ್ದಾನೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 6 ದಿನ ಚಳಿ ಹೆಚ್ಚಳ ಸಾಧ್ಯತೆ
ಆದರೆ ಮೈಸೂರು ಕಾರಾಗೃಹದಲ್ಲಿ ಸ್ಯಾಂಟ್ರೋಗೆ ಸಿಗುತ್ತಾ ವಿಶೇಷ ಸವಲತ್ತು ಎಂಬ ಪ್ರಶ್ನೆ ಇದೀಗ ಮೂಡುತ್ತಿದೆ. ಜೈಲು ಅಧೀಕ್ಷಕರ ವರ್ಗಾವಣೆಗೆ ಸಹಾಯ ಮಾಡಿದ್ದ ಸ್ಯಾಂಟ್ರೋ ರವಿ ವರ್ಗಾವಣೆ ಮಾಡಿಸಿದನ್ನು ಸ್ಟೇಟಸ್ನಲ್ಲಿ ಹಾಕಿಕೊಂಡಿದ್ದ. ಕೇಂದ್ರ ಕಾರಾಗೃಹದ ಅಧೀಕ್ಷಕ ಮಹೇಶ್ ಕುಮಾರ್ ಜಿಗಣಿಗೆ ಶಿಫಾರಸು ಮಾಡಿದ್ದ. ಶಿವಮೊಗ್ಗದಿಂದ ಬೆಂಗಳೂರು ಕಾರಾಗೃಹಕ್ಕೆ ವರ್ಗಾವಣೆ ಆಗಿದ್ದ ಮಹೇಶ್ ಸದ್ಯ ಮೈಸೂರು ಕೇಂದ್ರ ಕಾರಾಗೃಹದ ಅಧೀಕ್ಷಕರಾಗಿದ್ದಾರೆ. ಗೃಹ ಸಚಿವರ ಸೂಚನೆಯಂತೆ 2021ರಲ್ಲಿ ವರ್ಗಾವಣೆ ಮಾಡಲಾಗಿತ್ತು. ಇದನ್ನೂ ಓದಿ: ಪ್ರೇಮ ವೈಫಲ್ಯ – ಕಳೆನಾಶಕ ಸೇವಿಸಿ ಅಪ್ರಾಪ್ತೆ ಆತ್ಮಹತ್ಯೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k