ಬೆಂಗಳೂರು: ಉಪಚುನಾವಣೆ ಮುಗಿದ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ (Congress) ಪವರ್ ಗೇಮ್ ಶುರುವಾಗಿದೆ. ಕಾಂಗ್ರೆಸ್ನ 40 ಹಿರಿಯ ಶಾಸಕರು ದೆಹಲಿಗೆ ಪರೇಡ್ ನಡೆಸಲು ಸಜ್ಜಾಗಿದ್ದಾರೆ.
ಕಾಂಗ್ರೆಸ್ನಲ್ಲಿ ಸಂಪುಟ ಪುನಾರಚನೆ ಸದ್ದು ಜೋರಾಗಿದೆ. ಸಚಿವ ಸ್ಥಾನ ಪಡೆಯಲು ಇಂದು ಹಿರಿಯ ಶಾಸಕರು ದೆಹಲಿ ಫ್ಲೈಟ್ ಏರಲಿದ್ದಾರೆ. ವರಿಷ್ಠರ ಮುಂದೆ ಹಿರಿಯರಿಂದ ಮಂತ್ರಿ ಪದವಿಗಾಗಿ ಪರೇಡ್ ನಡೆಯುತ್ತಿದೆ. 2-3 ದಿನ ದೆಹಲಿಯಲ್ಲಿದ್ದು ಹೈಕಮಾಂಡ್ ನಾಯಕರ ಭೇಟಿಗೆ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಪುರುಷರಿಗೂ ಶಕ್ತಿ ಯೋಜನೆ ಟಿಕೆಟ್ – ಹಣ ಲಪಟಾಯಿಸುತ್ತಿದ್ದ ಐವರು ಕಂಡಕ್ಟರ್ ಸಸ್ಪೆಂಡ್?
ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲ ಭೇಟಿಯಾಗಲಿದ್ದಾರೆ. ಸಾಧ್ಯವಾದರೆ ರಾಹುಲ್ ಗಾಂಧಿ ಭೇಟಿ ಮಾಡಿ ಮಂತ್ರಿ ಪದವಿ ಗಿಟ್ಟಿಸಲು ತಂತ್ರ ಹೆಣೆದಿದ್ದಾರೆ. ಹಿರಿಯರ ದೆಹಲಿ ಪರೇಡ್ಗೆ ಸಿಎಂ ಸಿದ್ದರಾಮಯ್ಯ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆನ್ನಲಾಗಿದೆ.
ಹಿರಿಯರ ದೆಹಲಿ ಪರೇಡ್ ಪ್ಲ್ಯಾನ್ ಏನು?
* ಉಪ ಚುನಾವಣೆ ಮುಗೀತು, ಸರ್ಕಾರಕ್ಕೆ 3 ವರ್ಷ ತುಂಬಿತು. ಸಂಪುಟ ಪುನಾರಚನೆ ಮಾಡಿ ಎಂಬ ಒತ್ತಾಯ.
* ವರಿಷ್ಠರೇ 2.5 ವರ್ಷ ಆದ ಮೇಲೆ ಸಂಪುಟ ಪುನಾರಚನೆ ಅಂತ ಸುಳಿವು ಕೊಟ್ಡಿದ್ದರು. ಅದರಂತೆ ಆಗಲಿ ಎಂಬ ಒತ್ತಡ.
* ನಾಯಕತ್ವ ಗೊಂದಲದ ಮಧ್ಯೆ ಸಂಪುಟ ಪುನಾರಚನೆ ದಾಳ ಉರುಳಿಸಿ ಸಿಎಂ ಕುರ್ಚಿ ಸೇಫ್ ಮಾಡಿಕೊಳ್ಳುವ ತಂತ್ರಗಾರಿಗೆ ಸಿದ್ದರಾಮಯ್ಯರದ್ದು.
* ಸಂಪುಟ ಪುನಾಚನೆಗೆ ಹೈಕಮಾಂಡ್ ಒಪ್ಪಿಕೊಂಡರೆ ಮತ್ತಷ್ಟು ದಿನ ಕುರ್ಚಿ ಕದನಕ್ಕೆ ಬ್ರೇಕ್ ಎಂಬ ಲೆಕ್ಕಾಚಾರ.
* ಪುನಾರಚನೆ ಗೊಂದಲ ಅದ್ರೆ ಸದ್ಯಕ್ಕೆ ನಾಯಕತ್ವ ಗಲಾಟೆಗೂ ಸ್ವಲ್ಪ ದಿನ ಬ್ರೇಕ್ ಬೀಳುವ ಲೆಕ್ಕಾಚಾರ.
ಸಚಿವಾಕಾಂಕ್ಷಿಗಳ ಮೊದಲ ಬ್ಯಾಚ್ ಇಂದು ಮಧ್ಯಾಹ್ನ ದೆಹಲಿಗೆ ಪ್ರಯಾಣ
1.ಟಿಬಿ ಜಯಚಂದ್ರ – ಶಿರಾ ಕ್ಷೇತ್ರ
2.ಅಶೋಕ್ ಪಟ್ಟಣ್ – ರಾಮದುರ್ಗ ಕ್ಷೇತ್ರ
3.ಎಸ್.ಎನ್ ಸುಬ್ಬಾರೆಡ್ಡಿ – ಬಾಗೇಪಲ್ಲಿ ಕ್ಷೇತ್ರ
4.ಸಿ ಪುಟ್ಟರಂಗಶೆಟ್ಟಿ – ಚಾಮರಾಜನಗರ ಕ್ಷೇತ್ರ
5.ಹಂಪನಗೌಡ ಬಾದರ್ಲಿ – ಸಿಂಧನೂರು ಕ್ಷೇತ್ರ
6.ಡಿಜಿ ಶಾಂತನಗೌಡ – ಹೊನ್ನಾಳ್ಳಿ ಕ್ಷೇತ್ರ
7.ಬಸವರಾಜ್ ಶಿವಣ್ಣನವರ್ – ಬ್ಯಾಡಗಿ ಕ್ಷೇತ್ರ
8.ಎ.ಆರ್ ಕೃಷ್ಣಮೂರ್ತಿ – ಕೊಳ್ಳೇಗಾಲ ಕ್ಷೇತ್ರ
9.ಪ್ರಸಾದ್ ಅಬ್ಬಯ್ಯ – ಹು-ಧಾ ಪೂರ್ವ ಕ್ಷೇತ್ರ
10.ಯುಬಿ ಬಣಕರ್ – ಹಿರೇಕೆರೂರು ಕ್ಷೇತ್ರ
11.ಜಿ.ಎಸ್ ಪಾಟೀಲ್ – ರೋಣ ಕ್ಷೇತ್ರ
12.ಯಶವಂತರಾಯ ಗೌಡ ಪಾಟೀಲ್ – ಇಂಡಿ ಕ್ಷೇತ್ರ
13.ಷಡಕ್ಷರಿ – ತಿಪಟೂರು ಕ್ಷೇತ್ರ
14.ಎಸ್.ಎನ್ ನಾರಾಯಣಸ್ವಾಮಿ – ಬಂಗಾರಪೇಟೆ ಕ್ಷೇತ್ರ
15.ಲಕ್ಷ್ಮಣ ಸವದಿ – ಅಥಣಿ ಕ್ಷೇತ್ರ
16.ಅಪ್ಪಾಜಿ ನಾಡಗೌಡ – ಮುದ್ದೇಬಿಹಾಳ ಕ್ಷೇತ್ರ
17.ರಿಜ್ವಾನ್ ಅರ್ಷದ್ – ಶಿವಾಜಿನಗರ ಕ್ಷೇತ್ರ
18.ಪ್ರಿಯಕೃಷ್ಣ – ಗೋವಿಂದರಾಜನಗರ ಕ್ಷೇತ್ರ
19.ರಮೇಶ್ ಬಂಡಿ ಸಿದ್ದೇಗೌಡ – ಶ್ರೀರಂಗಪಟ್ಟಣ ಕ್ಷೇತ್ರ
20.ಬಿ. ಶಿವಣ್ಣ – ಆನೇಕಲ್ ಕ್ಷೇತ್ರ
21.ನರೇಂದ್ರಸ್ವಾಮಿ – ಮಳವಳ್ಳಿ ಕ್ಷೇತ್ರ
22.ವಿನಯ್ ಕುಲಕರ್ಣಿ – ಧಾರವಾಡ ಕ್ಷೇತ್ರ
23.ರಾಘವೇಂದ್ರ ಹಿಟ್ನಾಳ್ – ಕೊಪ್ಪಳ ಕ್ಷೇತ್ರ
24.ಬೇಳೂರು ಗೋಪಾಲಕೃಷ್ಣ- ಸಾಗರ ಕ್ಷೇತ್ರ
ದೆಹಲಿಗೆ ಹೋಗಲು ಇನ್ನೂ ಖಚಿತ ಪಡಿಸದ ಶಾಸಕರು
ಹೆಚ್ ಸಿ ಬಾಲಕೃಷ್ಣ – ಮಾಗಡಿ
ಎಂ ವೈ ಪಾಟೀಲ್ – ಅಫಜಲಪುರ
ಎನ್ ವೈ ಗೋಪಾಲಕೃಷ್ಣ – ಮೊಳಕಾಲ್ಮೂರು
ಬಿ ಜಿ ಗೋವಿಂದಪ್ಪ – ಹೊಸದುರ್ಗ
ಟಿ ರಘುಮೂರ್ತಿ – ಚಳ್ಳಕೆರೆ
ಶಿವಲಿಂಗೇಗೌಡ – ಅರಸೀಕೆರೆ
ಮಹಾಂತೇಶ್ ಕೌಜಲಗಿ – ಬೈಲಹೊಂಗಲ
ಶ್ರೀನಿವಾಸ್ ಮಾನೆ – ಹಾನಗಲ್
ಗಣೇಶ್ ಹುಕ್ಕೇರಿ – ಚಿಕ್ಕೋಡಿ
ಎನ್ ಎ ಹ್ಯಾರೀಸ್ – ಶಾಂತಿನಗರ
ಬಿ ಕೆ ಸಂಗಮೇಶ್ – ಭದ್ರಾವತಿ
ಎಂ ಕೃಷ್ಣಪ್ಪ – ವಿಜಯನಗರ
ತನ್ವೀರ್ ಸೇಠ್ – ನರಸಿಂಹರಾಜ
ಬಿ ಆರ್ ಪಾಟೀಲ್ – ಆಳಂದ
ಶ್ರೀನಿವಾಸ್ ವಾಸು – ಗುಬ್ಬಿ
ರಿಜ್ವಾನ್ ಅರ್ಷದ್ – ಶಿವಾಜಿನಗರ
ಅಜಯ್ ಸಿಂಗ್ – ಜೇವರ್ಗಿ
ಬಹುತೇಕ ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಬಲಿಗರು ಇಂದು ದೆಹಲಿಗೆ ಹೋಗ್ತಿಲ್ಲ. ದೆಹಲಿಗೆ ಹೋಗುವ ಒಟ್ಟು 39 ಶಾಸಕರ ಲಿಸ್ಟ್ ರೆಡಿಯಾಗಿತ್ತು. ಅಂತಿಮ ಹಂತದಲ್ಲಿ 15-18 ಶಾಸಕರ ದೆಹಲಿ ಪ್ರಯಾಣ ಇಂದು ಇಲ್ಲ.

