ರೈಲ್ವೇ ಹಳಿಯಲ್ಲಿ ಶವ- ತೆಗೆಯಲು ಬಂದಾಗ ಎದ್ದು ಕುಳಿತ

Public TV
1 Min Read
BHOPAL

ಭೋಪಾಲ್: ವ್ಯಕ್ತಿಯೊಬ್ಬರ ಮೃತ ದೇಹ ಮಧ್ಯಪ್ರದೇಶದ ಅಶೋಕ್ ನಗರ್ ರೈಲು ಹಳಿ ಮೇಲೆ ಬಿದ್ದಿದೆ ಎಂಬ ಮಾಹಿತಿ ಅನ್ವಯ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಕ್ಷಣ ಕಾಲ ದಂಗಾದ ಘಟನೆ ನಡೆದಿದೆ.

ಹಳಿ ನಡುವೆ ಸತ್ತು ಬಿದ್ದಿದ್ದಾನೆ ಎಂದು ತಿಳಿದಿದ್ದ ಪೊಲೀಸರು ಮೃತದೇಹವನ್ನು ತೆರವು ಮಾಡಲು ಆಗಮಿಸಿದರು. ಈ ವೇಳೆ ಒಮ್ಮೆಲೆ ರೈಲ್ವೇ ಹಳಿ ನಡುವೆ ಬಿದ್ದಿದ್ದ ವ್ಯಕ್ತಿ ಎದ್ದು ನಿಂತಿದ್ದ. ಇದರಿಂದ ಕ್ಷಣ ಕಾಲ ಪೊಲೀಸರು ಅಚ್ಚರಿಗೊಂಡಿದ್ದರು. ಸದ್ಯ ಆತನನ್ನು ಪೊಲೀಸರು ಸ್ಥಳೀಯ ನಿವಾಸಿ ಧರ್ಮೇಂದ್ರ ಎಂದು ಗುರುತಿಸಿದ್ದಾರೆ.

Police Jeep

ನಡೆದಿದ್ದೇನು?
ಧರ್ಮೇಂದ್ರ ಕಂಠಪೂರ್ತಿ ಕುಡಿದು ರೈಲ್ವೇ ಹಳಿ ನಡುವೆ ಬಂದು ಮಲಗಿ ಕೊಂಡಿದ್ದ. ಇದನ್ನು ಕಂಡ ರೈಲ್ವೇ ಲೋಕೋ ಪೈಲಟ್ ವ್ಯಕ್ತಿಯೊಬ್ಬರು ರೈಲ್ವೇ ಹಳಿ ಮೇಲೆ ಬಿದಿದ್ದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸುವ ವೇಳೆಗೆ ಈ ಮಾರ್ಗವಾಗಿ 3 ರೈಲುಗಳು ಸಂಚಾರಿಸಿದ್ದವು.

ರೈಲು ಸಂಚಾರಿಸಿದ ಪರಿಣಾಮ ರೈಲ್ವೇ ಹಳಿ ಮೇಲಿರುವ ವ್ಯಕ್ತಿ ಮೃತ ಪಟ್ಟಿರುತ್ತಾನೆ ಎಂದು ಪೊಲೀಸರು ತಿಳಿದಿದ್ದರು. ಆದರೆ ಸ್ಥಳಕ್ಕೆ ಬಂದು ನೋಡಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಮೂರು ರೈಲು ಸಂಚರಿಸಿದರು ಆತನಿಗೆ ಯಾವುದೇ ಸಮಸ್ಯೆಯಾಗಿರಲಿಲ್ಲ. ಕಂಠ ಪೂರ್ತಿ ಕುಡಿದಿದ್ದ ಕಾರಣ ಆತ ತಾನು ಎಲ್ಲಿ ಮಲಗಿದ್ದೆ, ರೈಲ್ವೇ ಹಳಿ ಮೇಲೆ ಯಾವಾಗ ಬಂದೆ ಎಂಬ ಬಗ್ಗೆಯೂ ಆತನಿಗೆ ನೆನಪಿರಲಿಲ್ಲ. ಅಲ್ಲದೇ ಆತ ರೈಲ್ವೇ ಹಳಿ ನಡುವೆ ಮಲಗಿದ್ದ ಸಮಯದಲ್ಲಿ 3 ರೈಲು ಸಂಚಾರಿಸಿದ್ದು ಕೂಡ ತಿಳಿದಿರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

TRAIN

Share This Article
Leave a Comment

Leave a Reply

Your email address will not be published. Required fields are marked *