Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮಂಡ್ಯದಲ್ಲಿ ಗೋಲ್ಡ್ ದೋಖಾ- ಬಡ್ಡಿ ಆಸೆ ತೋರಿಸಿ ಮಹಿಳೆಯರಿಗೆ 20 ಕೋಟಿ ರೂ. ಚಿನ್ನ ವಂಚನೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Crime | ಮಂಡ್ಯದಲ್ಲಿ ಗೋಲ್ಡ್ ದೋಖಾ- ಬಡ್ಡಿ ಆಸೆ ತೋರಿಸಿ ಮಹಿಳೆಯರಿಗೆ 20 ಕೋಟಿ ರೂ. ಚಿನ್ನ ವಂಚನೆ

Crime

ಮಂಡ್ಯದಲ್ಲಿ ಗೋಲ್ಡ್ ದೋಖಾ- ಬಡ್ಡಿ ಆಸೆ ತೋರಿಸಿ ಮಹಿಳೆಯರಿಗೆ 20 ಕೋಟಿ ರೂ. ಚಿನ್ನ ವಂಚನೆ

Public TV
Last updated: October 15, 2020 4:12 pm
Public TV
Share
2 Min Read
mnd gold copy
SHARE

– 40ಕ್ಕೂ ಹೆಚ್ಚು ಮಹಿಳೆಯರಿಗೆ ವಂಚನೆ

ಮಂಡ್ಯ: ಜಿಲ್ಲೆಯ ಮಹಿಳೆಯರು ಗೋಲ್ಡ್ ದೋಖಾಗೆ ಸಿಲುಕಿದ್ದು, ಬಡ್ಡಿ ಆಮೀಷಕ್ಕೆ ಒಳಗಾಗಿ 40ಕ್ಕೂ ಹೆಚ್ಚು ಮಹಿಳೆಯರು ಚಿನ್ನಾಭರಣ ಕಳೆದುಕೊಂಡಿದ್ದಾರೆ. ಬರೋಬ್ಬರಿ 20 ಕೋಟಿ ರೂ.ಗೂ ಹೆಚ್ಚು ಬೆಲೆ ಬಾಳುವ ಚಿನ್ನವನ್ನು ವಂಚಿಸಲಾಗಿದೆ.

WhatsApp Image 2020 10 15 at 3.04.17 PM e1602757178250

ಮಂಡ್ಯ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸೋಮಶೇಖರ್ ಹಾಗೂ ಪೂಜಾ ಬರೋಬ್ಬರಿ 40 ಮಹಿಳೆಯರಿಗೆ 20 ಕೋಟಿ ರೂ.ಗೂ ಅಧಿಕ ಬೆಲೆ ಬಾಳುವ ಚಿನ್ನವನ್ನು ವಂಚಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮಂಡ್ಯ ಪೂರ್ವ ಠಾಣಾ ಪೊಲೀಸರು, ಪೂಜಾ ಹಾಗೂ ಸೋಮಶೇಖರ್ ಮೇಲೆ ಎಫ್‍ಐಆರ್ ದಾಖಲಿಸಿದ್ದಾರೆ. ತಲೆ ಮರೆಸಿಕೊಂಡಿದ್ದ ಆರೋಪಿ ಸೋಮಶೇಖರ್ ನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಈತ ಬ್ಯಾಂಕ್ ನೌಕರನೆಂದು ಹೇಳಿ ವಂಚಿಸಿದ್ದಾನೆ. ಆದರೆ ಆರೋಪಿಗೂ ನಮಗೂ ಸಂಬಂಧ ಇಲ್ಲ. ಕಳೆದ 2 ತಿಂಗಳ ಹಿಂದೆಯೇ ಆತನನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಫೆಡ್ ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ.

WhatsApp Image 2020 10 15 at 3.04.22 PM 1 e1602757044485

ಬಂಧಿತ ಸೋಮಶೇಖರ್ ಶೋಕಿಗಾಗಿ ಈ ಕೃತ್ಯ ಎಸಗಿರೋದಾಗಿ ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದು, ಮಹಿಳೆಯರಿಂದ ಪಡೆದ ಚಿನ್ನವನ್ನು ಬೇರೆ ಬೇರೆ ಫೈನಾನ್ಸ್ ನಲ್ಲಿ ಅಡವಿಟ್ಟಿರೋದಾಗಿ ಒಪ್ಪಿಕೊಂಡಿದ್ದಾನೆ. ಬಂಧಿತರು ಮತ್ತು ದೂರುದಾರರ ಮಾಹಿತಿ ಪಡೆದು ಪೊಲೀಸರು ಚಿನ್ನವನ್ನು ವಶಕ್ಕೆ ಪಡೆಯುವ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ. ಪ್ರಕರಣ ಸಂಬಂಧ ನಾಲ್ಕು ತಂಡ ರಚನೆ ಮಾಡಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

vlcsnap 2020 10 15 15h50m26s323 e1602757266396

ಮಹಿಳೆಯರನ್ನು ಹೇಗೆ ಸೆಳೀತಿದ್ರು?
ಪೂಜಾಗೆ ಪತಿ ಇಲ್ಲ, ಸೋಮಶೇಖರ್ ಗೆ ಪತ್ನಿ ಇಲ್ಲ. ಇಬ್ಬರು ಸ್ನೇಹಿತರು ಎಂದು ಹೇಳಿಕೊಂಡು ಅಧಿಕ ಬಡ್ಡಿ ಆಸೆ ತೋರಿಸಿ ಮಹಿಳೆಯರಿಂದ ಚಿನ್ನ ಪಡೆದು ವಂಚಿಸಿದ್ದಾರೆ. ಸೋಮಶೇಖರ್ ಮಂಡ್ಯದ ಗುತ್ತಲು ಬಡಾವಣೆಯ ನಿವಾಸಿ, ಪೂಜಾ ಮಂಡ್ಯದ ದೊಡ್ಡ ವರ್ತಕರ ಸೊಸೆ. ಫೆಡ್ ಬ್ಯಾಂಕ್ ನಲ್ಲಿ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದ ಸೋಮಶೇಖರ್, ಪೂಜಾ ಜೊತೆಗೂಡಿ 20 ಕೋಟಿ ರೂ.ಗೂ ಹೆಚ್ಚಿನ ಚಿನ್ನಾಭರಣ ವಂಚಿಸಿದ್ದಾನೆ. ಸೋಮಶೇಖರ್‍ನ ನಯವಾದ ಮಾತು ನಂಬಿ 40ಕ್ಕೂ ಹೆಚ್ಚು ಮಹಿಳೆಯರು ತಮ್ಮ ಒಡವೆ ಕೊಟ್ಟು ಯಮಾರಿದ್ದಾರೆ.

WhatsApp Image 2020 10 15 at 3.04

ಚಿನ್ನ ಮನೆಯಲ್ಲಿ ಇದ್ದರೆ ಪ್ರಯೋಜನವಿಲ್ಲ. ನಮ್ಮ ಬ್ಯಾಂಕ್ ನಲ್ಲಿ ಚಿನ್ನ ಇಡಿ ಹೆಚ್ಚು ಬಡ್ಡಿ ಕೊಡಿಸುತ್ತೇನೆ. ತಿಂಗಳಿಗೆ ಪ್ರತಿ ನೂರು ಗ್ರಾಂ.ಗೆ ಶೇ.10ರಂತೆ 10 ಸಾವಿರ ರೂ. ಬಡ್ಡಿ ಬರುತ್ತೆ ಎಂದಿದ್ದ. ಚಿನ್ನವನ್ನು ಮನೆಯಲ್ಲಿ ಇಟ್ಟು ಏನು ಮಾಡುವುದು, ಬ್ಯಾಂಕ್‍ನಲ್ಲಿ ಇದ್ದರೆ ಬಡ್ಡಿ ಸಿಗುತ್ತೆ ಎಂದು ಯೋಚಿಸಿದ್ದ ಮಹಿಳೆಯರು ನೂರಾರು ಗ್ರಾಂ. ಚಿನ್ನವನ್ನು ಸೋಮಶೇಖರ್ ಬ್ಯಾಂಕ್‍ನಲ್ಲಿ ಇಟ್ಟಿದ್ದರು. ತಾವು ಮಾತ್ರವಲ್ಲದೆ ಪರಿಚಯಸ್ಥ ಮಹಿಳೆಯರಿಗೂ ಹೇಳಿ ಅವರ ಒಡವೆಯನ್ನೂ ಕೊಡಿಸಿದ್ದರು.

vlcsnap 2020 10 15 15h51m58s257 e1602757355490

ಹೀಗೆ ಮಹಿಳೆಯರಿಂದ ಪಡೆದ ಚಿನ್ನವನ್ನು ಬ್ಯಾಂಕ್‍ನಲ್ಲಿ ಇಟ್ಟಿದ್ದಾಗಿ ಹೇಳಿದ್ದ. ಕೆಲ ತಿಂಗಳು ತಾನು ಹೇಳಿದಂತೆ ಬಡ್ಡಿ ಹಣವನ್ನು ಸಹ ಸೋಮಶೇಖರ್ ನೀಡಿದ್ದ. ಹೀಗಾಗಿ ಮಹಿಳೆಯರು ನಂಬಿ ಇತರ ಮಹಿಳೆಯರು ಕೆ.ಜಿ.ಗಟ್ಟಲೆ ಚಿನ್ನ ನೀಡಿದ್ದರು. ಹೀಗೆ 40ಕ್ಕೂ ಹೆಚ್ಚು ಮಹಿಳೆಯರಿಯಿಂದ ಬರೋಬ್ಬರಿ 20 ಕೋಟಿ ರೂ. ಮೌಲ್ಯದ ಕೆಜಿ ಗಟ್ಟಲೆ ಚಿನ್ನವನ್ನು ಸೋಮಶೇಖರ್ ಸಂಗ್ರಹಣೆ ಮಾಡಿದ್ದ.

WhatsApp Image 2020 10 15 at 3.04.21 PM e1602757093713

ಮಹಿಳೆಯರಿಂದ ಚಿನ್ನ ಪಡೆದು ಕೆಲ ದಿನಗಳ ಬಳಿಕ ನಾಪತ್ತೆಯಾಗಿದ್ದ. ಎಲ್ಲ ಕಡೆ ವಿಚಾರಿಸಿದರೂ ಪತ್ತೆಯಾಗಿಲ್ಲ. ಒಡವೆಯನ್ನು ಕಳೆದುಕೊಂಡು ಹೆಂಗಸರು ಕಂಗಾಲಾಗಿದ್ದರು. ಕಡೆಗೆ ಮಂಗಳಮುಖಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರಿಂದ ಈ ವಂಚನೆ ಪ್ರಕರಣ ಬಯಲಿಗೆ ಬಂದಿದೆ. ತಾವೂ ಅದೇ ಜೋಡಿಯಿಂದ ವಂಚನೆಗೊಳಗಾದ ವಿಷಯ ತಿಳಿಯುತ್ತಿದ್ದಂತೆ ಇದೀಗ ಚಿನ್ನ ಕಳೆದುಕೊಂಡ ಮಹಿಳೆಯರು ಪೂರ್ವ ಪೊಲೀಸ್ ಠಾಣೆ ಸೇರಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡ್ತಿದ್ದಾರೆ. ಚಿನ್ನ ಕೊಡಿಸಿ ಎಂದು ಕಣ್ಣೀರು ಹಾಕುತ್ತಿದ್ದಾರೆ.

TAGGED:goldmandyamoneypolicePublic TVಚಿನ್ನಪಬ್ಲಿಕ್ ಟಿವಿಪೊಲೀಸರುಮಂಡ್ಯಹಣ
Share This Article
Facebook Whatsapp Whatsapp Telegram

Cinema news

Asha Bhosle Funeral
ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest National Top Stories
Jogi Prem
ಕನ್ನಡ ಸಿನಿಮಾ ಅಂತಲೇ ರಾಜಕಾರಣ – ಸೆನ್ಸಾರ್ ಬೋರ್ಡ್ ವಿರುದ್ಧ ಪ್ರೇಮ್ ಕಿಡಿ
Cinema Latest Sandalwood Top Stories
Dhruva Sarja
LPG ಗ್ಯಾಸ್‌ ಬಿಕ್ಕಟ್ಟಿನಿಂದ ಕಂಗಾಲಾದ ಆಟೋ ಚಾಲಕರಿಗೆ ಆಸರೆ – 25 ಲಕ್ಷ ನೆರವು ನೀಡಿದ ಧ್ರುವ ಸರ್ಜಾ!
Bengaluru City Cinema Latest Sandalwood Top Stories
Asha Bhosle 3
`ಅಭೀ ನಾ ಜಾವೋ ಛೋಡ್ ಕರ್’ ಗಾಯಕಿ ಸಂಗೀತದಲ್ಲಿ ಲೀನ – ಇಂದು ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest Main Post Top Stories

You Might Also Like

Vijayanagara Rain Papaya Crop Destroyed
Bellary

ವಿಜಯನಗರ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆ – ಪಪ್ಪಾಯ ಬೆಳೆ ಸಂಪೂರ್ಣ ನಾಶ

Public TV
By Public TV
2 minutes ago
Sanju Samson 1
Cricket

ಒಡೆದ ಡಿಸ್‌ಪ್ಲೇನಲ್ಲೇ ಸೆಲ್ಫಿ ಕ್ಲಿಕ್ಕಿಸಿದ ಅಭಿಮಾನಿ – 40,000 ಮೌಲ್ಯದ ಫೋನನ್ನೇ ಗಿಫ್ಟ್‌ ಕೊಟ್ಟ ಸಂಜು

Public TV
By Public TV
9 minutes ago
G Parameshwar
Districts

ಸಂಪುಟ ಪುನಾರಚನೆ ಸುಳಿವು ಇದೆ: ಪರಮೇಶ್ವರ್

Public TV
By Public TV
19 minutes ago
DK Shivakumar 5
Bengaluru City

ಪಕ್ಷಕ್ಕೆ ಶಿಸ್ತು ಬಹಳ ಮುಖ್ಯ, ಆದರೆ ಜಮೀರ್ ಅದನ್ನು ಪಾಲಿಸಿಲ್ಲ: ಡಿಕೆಶಿ

Public TV
By Public TV
26 minutes ago
congress rss workers
Latest

ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್‌ ಪದಾಧಿಕಾರಿ ಹುದ್ದೆಗೆ ಆರ್‌ಎಸ್‌ಎಸ್‌ ಕಾರ್ಯಕರ್ತರ ಆಯ್ಕೆ

Public TV
By Public TV
29 minutes ago
R Ashok 5
Districts

2028ಕ್ಕೆ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ, ಸಿಎಂ ಅಭ್ಯರ್ಥಿಗಳ ಪಟ್ಟಿಯಲ್ಲಿ ನನ್ನ ಹೆಸರೂ ಇದೆ: ಆರ್. ಅಶೋಕ್ ‌

Public TV
By Public TV
38 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?