ಚಂಡೀಗಢ ತಲುಪ್ತಿದ್ದಂತೆ ನಾನು ಬದುಕುಳಿದೆ ಎಂದ ಕಂಗನಾ

Public TV
3 Min Read
Kangana 8

-ಸೋನಿಯಾ ಸೇನೆಯಿಂದ ಮುಂಬೈ ಅಸುರಕ್ಷಿತ
-ಬಿಜೆಪಿ ಪರ ಪ್ರಚಾರ ಮಾಡ್ತಾರಾ ಕಂಗನಾ?

ಮುಂಬೈ: ಚಂಡಿಗಢ ತಲುಪುತ್ತಿದ್ದಂತೆ ಬಾಲಿವುಡ್ ನಟಿ ಕಂಗನಾ ರಣಾವತ್, ಈ ಬಾರಿ ನಾನು ಬದುಕುಳಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇಂದು ಬೆಳಗ್ಗೆ ಕಂಗನಾ ಮನಾಲಿಗಾಗಿ ಮುಂಬೈನಿಂದ ಹಿಂದಿರುಗಿದ್ದರು. ಚಂಢೀಗಢ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಟ್ವೀಟ್ ಮಾಡಿರುವ ಕಂಗನಾ ರಣಾವತ್, ಇಲ್ಲಿಗೆ ಬಂದ ಕೂಡಲೇ ಭದ್ರತೆ ಹೆಸರಿಗೆ ಮಾತ್ರವಿದೆ. ಇಲ್ಲಿ ನನಗೆ ಸುರಕ್ಷತೆ ಅನುಭವ ಆಗುತ್ತಿದ್ದು, ಜನರು ನನ್ನನ್ನು ಪ್ರೀತಿಯಿಂದ ಸ್ವಾಗತಿಸುತ್ತಿದ್ದಾರೆ. ಈ ಬಾರಿ ಬದುಕುಳಿದಿದ್ದೇನೆ. ಹಿಂದೊಮ್ಮೆ ಮುಂಬೈನಲ್ಲಿ ತಾಯಿಯ ನಿಷ್ಕಲ್ಮಶ ಪ್ರೀತಿಯನ್ನು ಕಂಡಿದ್ದೇನೆ. ಆದ್ರೆ ಸೋನಿಯಾ ಸೇನೆಯಿಂದಾಗಿ ಮುಂಬೈನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸಿದ್ದಾರೆ.

Kangana 1 1

ಇನ್ನೊಂದು ಟ್ವೀಟ್ ನಲ್ಲಿ ಈ ಬಾರಿ ದೆಹಲಿಯಲ್ಲಿ ರಕ್ತ ಹರಿಸಲಾಗಿದೆ. ಸೋನಿಯಾ ಸೇನೆ ಮುಂಬೈನಲ್ಲಿ ಪ್ರತ್ಯೇಕ ಕಾಶ್ಮೀರದ ಘೋಷಣೆಗಳನ್ನ ಕೂಗಿದೆ. ಇಂದು ಸ್ವತಂತ್ರದ ಬೆಲೆ ಧ್ವನಿ ಆಗಿದೆ. ನನಗೆ ನಿಮ್ಮ ಬೆಂಬಲ ನೀಡಿ. ನನ್ನ ಜೊತೆ ನಿಮ್ಮ ಧ್ವನಿಯನ್ನ ಸೇರಿಸಿದ್ರೆ ಮುಂದೊಂದು ದಿನ ಸ್ವತಂತ್ರ ಅಂದ್ರೆ ಕೇವಲ ಕ್ರಾಂತಿ ಎಂದ ದಿನಗಳನ್ನ ಎದುರಿಸಬೇಕಾಗುತ್ತದೆ ಎಂದು ಕಂಗನಾ ಬರೆದುಕೊಂಡಿದಾರೆ.

ಬಿಹಾರ ಚುನಾವಣೆ ಹೊಸ್ತಿಲಿನಲ್ಲಿದ್ದು, ಬಿಜೆಪಿ ಸುಶಾಂತ್ ಸಿಂಗ್ ರಜಪೂತ್ ಪ್ರಕರಣವನ್ನ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ವಿಪಕ್ಷಗಳು ವರದಿ ಮಾಡಿವೆ. ಬಿಜೆಪಿ ಪ್ರಚಾರದ ಭಿತ್ತಿ ಪತ್ರಗಳಲ್ಲಿ ಸುಶಾಂತ್ ಭಾವಚಿತ್ರ ಹಾಕಿರುವ ಕೆಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಸುಶಾಂತ್ ಪ್ರಕರಣದಲ್ಲಿ ಧ್ವನಿ ಎತ್ತಿದ್ದ ಕಂಗನಾರನನ್ನ ಬಿಜೆಪಿ ಪ್ರಚಾರಕ್ಕೆ ಬಳಸಿಕೊಳ್ಳಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಹಾರ ಬಿಜೆಪಿ ಚುನಾವಣೆ ಉಸ್ತುವಾರಿ ದೇವೆಂದ್ರ ಫಡ್ನವಿಸ್, ಪ್ರಧಾನಿ ನರೇಂದ್ರ ಮೋದಿ ಅವರು ಇರುವಾಗ ನಮಗೆ ಬೇರೆ ಯಾವ ಸ್ಟಾರ್ ಪ್ರಚಾರಕರು ಬೇಕಿಲ್ಲ ಎಂದು ಹೇಳಿದ್ದಾರೆ.

Kangana 3

ಶಿವಸೇನೆ ಮತ್ತು ಕಂಗನಾ ನಡುವಿನ ಸಂಘರ್ಷದ ವೇಳೆಯೇ ನಟಿ ಕುಟುಂಬಸ್ಥರು ಬಿಜೆಪಿ ಸೇರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಶಿವಸೇನೆ ನಾಯಕರ ಬೆದರಿಕೆ ಹಿನ್ನೆಲೆ ಕಂಗನಾ ಅವರಿಗೆ ವೈ ದರ್ಜೆಯ ಭದ್ರತೆಯನ್ನ ಕೇಂದ್ರ ಸರ್ಕಾರ ನೀಡಿದೆ.

Kangana 7

ಭಾನುವಾರ ಮಾಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶಯಾರಿ ಅವರನ್ನ ಕಂಗನಾ ಭೇಟಿಯಾಗಿದ್ದರು. ಭೇಟಿ ಬಳಿಕ ಸುದ್ದಿಸಂಸ್ಥೆ ಜೊತೆ ಮಾತನಾಡಿದ್ದ ಕಂಗನಾ, ಒಬ್ಬ ಸಾಮಾನ್ಯ ಪ್ರಜೆಯಂತೆ ರಾಜಭವನಕ್ಕೆ ಬಂದಿದ್ದೆ. ನನಗಾದ ಅನ್ಯಾಯದ ಬಗ್ಗೆ ರಾಜ್ಯಪಾಲರ ಮುಂದೆ ಹೇಳಿಕೊಂಡಿದ್ದೇನೆ. ನನಗೆ ನ್ಯಾಯ ಸಿಗುವ ನಂಬಿಕೆ ಇದೆ. ರಾಜ್ಯಪಾಲರ ಮಗಳ ಮನವಿಯಂತೆ ನನ್ನ ಸಮಸ್ಯೆಯನ್ನ ಆಲಿಸಿರೋದು ಖುಷಿ ತಂದಿದೆ. ರಾಜಕೀಯ ಮತ್ತು ಯಾವುದೇ ಪಕ್ಷಗಳಿಗೆ ಸಂಬಂಧವಿಲ್ಲ ಎಂದಿದ್ದರು. ರಾಜಭವನದಿಂದ ಹೊರ ಬಂದ ಕಂಗನಾ ಕಮಲದ ಹೂ ಹಿಡಿದುಕೊಂಡು ಬಂದಿರುವ ಫೋಟೋಗಳು ವೈರಲ್ ಆಗಿವೆ.

Kangana aa

ಕಳೆದ ಕೆಲ ದಿನಗಳಿಂದ ಶಿವಸೇನೆ ಮತ್ತು ಕಂಗನಾ ನಡುವೆ ಜಟಾಪಟಿ ನಡೆದಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ. ಬಿಎಂಸಿ ನಿಯಮಗಳ ವಿರುದ್ಧವಾಗಿ ಕಂಗನಾ ಕಚೇರಿಯ ಕಟ್ಟಡ ವಿನ್ಯಾಸ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ನೋಟಿಸ್ ನೀಡಿದ ಕೆಲವೇ ಗಂಟೆಗಳಲ್ಲಿ ಬಿಎಂಸಿ ಕಚೇರಿ ಕಟ್ಟಡ ಒಳಾಂಗಣವನ್ನ ನೆಲಸಮ ಮಾಡಿತ್ತು. ಈ ಸಂಬಂಧ ಕಂಗನಾ ನ್ಯಾಯಾಲಯದ ಮೊರೆ ಹೋಗಿದ್ದರು. ಕಂಗನಾ ಮನವಿಗೆ ಸ್ಪಂದಿಸಿದ ನ್ಯಾಯಾಲಯ ಬಿಎಂಸಿ ಕಾರ್ಯಚರಣೆಗೆ ತಡೆ ನೀಡಿದೆ. ಹಾಗೆ ದಿಢೀರ್ ನಿರ್ಧಾರಕ್ಕೆ ಕಾರಣ ತಿಳಿಸುವಂತೆ ಬಿಎಂಸಿಗೆ ನ್ಯಾಯಾಲಯ ಸೂಚನೆ ನೀಡಿದೆ.

Kangana 1 3

ಕಟ್ಟಡ ನೆಲಸಮ ಬೆನ್ನಲ್ಲೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಕಂಗನಾ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದರು. ಕಂಗನಾ ಆರೋಪಕ್ಕೆ ಸ್ಪಷ್ಟನೆ ನೀಡಿದ್ದ ಶಿವಸೇನೆ ಸಂಸದ ಸಂಜಯ್ ರಾವತ್, ಸರ್ಕಾರಕ್ಕೂ ಮತ್ತು ಕಟ್ಟಡ ನೆಲಸಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿತ್ತು. ಈ ನಡುವೆ ಕಂಗನಾ ವಿರುದ್ಧ ಡ್ರಗ್ಸ್ ಸೇವನೆ ಆರೋಪವನ್ನ ಮಹಾರಾಷ್ಟ್ರ ಸರ್ಕಾರ ಮಾಡಿದೆ. ಆರೋಪ ಸಾಬೀತಾದ್ರೆ ಮುಂಬೈ ತೊರೆಯುವದಾಗಿ ಕಂಗನಾ ಸವಾಲು ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *