ಚಾಮರಾಜನಗರ: ಕೊರೊನಾದಿಂದ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥವಾಗಿದ್ದ ಮಗುವಿಗೆ ರೈತ ಮುಖಂಡ ಮಲ್ಲೇಶ್ ಅವರು ನೆರವನ್ನು ನೀಡಿದ್ದಾರೆ.
- Advertisement 2
ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ಗುರು ಪ್ರಸಾದ್, ರಶ್ಮಿ ಕೋವಿಡ್ ನಿಂದ ಸಾವನ್ನಪ್ಪಿದರು. ಅನಾಥ ಮಗು ಇದೀಗ ಚಿಕ್ಕಮ್ಮನ ಆಶ್ರಯದಲ್ಲಿ ಬೆಳೆಯುತ್ತಿದೆ.
- Advertisement 3
- Advertisement 4
ಮಗುವಿನ ಪೋಷಣೆ, ಭವಿಷ್ಯದ ದೃಷ್ಟಿಯಿಂದ ಚಾಮರಾಜನಗರದ ರೈತ ಮುಖಂಡ ಮಲ್ಲೇಶ್ 50 ಸಾವಿರ ರೂ. ನೀಡಿ ಮಾನವೀಯತೆ ಮೆರೆದಿದ್ದಾರೆ. ಮಲ್ಲೇಶ್ ಅವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.