Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಎಲ್‍ಡಿಎಫ್- ಯುಡಿಎಫ್‍ನಿಂದ ಹಿಂದೆಬಿದ್ದ ಕೇರಳ, ಅಭಿವೃದ್ಧಿಗೆ ಬಿಜೆಪಿಯೊಂದೇ ಪರಿಹಾರ: ಅಶ್ವತ್ಥ ನಾರಾಯಣ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | States | Karnataka | ಎಲ್‍ಡಿಎಫ್- ಯುಡಿಎಫ್‍ನಿಂದ ಹಿಂದೆಬಿದ್ದ ಕೇರಳ, ಅಭಿವೃದ್ಧಿಗೆ ಬಿಜೆಪಿಯೊಂದೇ ಪರಿಹಾರ: ಅಶ್ವತ್ಥ ನಾರಾಯಣ

Karnataka

ಎಲ್‍ಡಿಎಫ್- ಯುಡಿಎಫ್‍ನಿಂದ ಹಿಂದೆಬಿದ್ದ ಕೇರಳ, ಅಭಿವೃದ್ಧಿಗೆ ಬಿಜೆಪಿಯೊಂದೇ ಪರಿಹಾರ: ಅಶ್ವತ್ಥ ನಾರಾಯಣ

Public TV
Last updated: February 28, 2021 10:19 pm
Public TV
Share
3 Min Read
ashwathnarayan
SHARE

– ಕೇರಳಿಗರೊಂದಿಗೆ ಡಿಸಿಎಂ ಸಂವಾದ

ಬೆಂಗಳೂರು: ಉದ್ಯಮಶೀಲತೆ ಹಾಗೂ ಸೃಜನಶೀಲತೆಗೆ ಹೆಸರಾದ ಕೇರಳವು ಇತರೆ ರಾಜ್ಯಗಳಿಗೆ ಹೋಲಿಸಿದರೆ ಅನೇಕ ಕ್ಷೇತ್ರಗಳಲ್ಲಿ ಸಾಕಷ್ಟು ಹಿಂದೆಬಿದ್ದಿದೆ. ಇದಕ್ಕೆ ಕಾರಣ ಈವರೆಗೂ ಆಡಳಿತ ನಡೆಸಿದ ಎಲ್‍ಡಿಎಫ್-ಯುಡಿಎಫ್ ಒಕ್ಕೂಟಗಳ ದುರಾಡಳಿತವೇ ಕಾರಣ ಎಂದು ಕೇರಳದ ಬಿಜೆಪಿ ಸಹ ಪ್ರಭಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ ಟೀಕಿಸಿದರು.

ashwathnarayan 1

ಬೆಂಗಳೂರಿನಲ್ಲಿ ನೆಲೆಸಿರುವ ಕೇರಳದ ಸಮಾನ ಮನಸ್ಕರ ಜತೆ ಸಂವಾದ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಅವರು, ಸುಂದರ ಕರಾವಳಿ ಹಾಗೂ ಸಮೃದ್ಧ ಪ್ರಾಕೃತಿಕ ಸಂಪತ್ತು ಇದ್ದರೂ ರಾಜ್ಯವನ್ನು ಅಭಿವೃದ್ಧಿಯಲ್ಲಿ ಹಿಂದೆ ಬೀಳುವಂತೆ ಮಾಡಲಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಎಲ್‍ಡಿಎಫ್ ಮತ್ತು ಯುಡಿಎಫ್ ಕೂಟಗಳು ವಿಫಲವಾಗಿವೆ ಎಂದರು.

ರಾಜಕೀಯಕ್ಕೆ ಮಾತ್ರ ಸೀಮಿತ:
ರಾಜ್ಯದ ಜನತೆಯ ನಿರೀಕ್ಷೆಗಳೇನು? ಇತರೆ ರಾಜ್ಯಗಳು ಯಾವ ರೀತಿಯಲ್ಲಿ ಮುನ್ನಡೆ ಸಾಧಿಸುತ್ತಿವೆ, ಅಕ್ಕಪಕ್ಕದ ರಾಜ್ಯಗಳಲ್ಲಿ ಪ್ರಗತಿ ಯಾವ ವೇಗದಲ್ಲಿ ಸಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಎಲ್‍ಡಿಎಫ್ ಸರಕಾರಕ್ಕೆ ಸಾಧ್ಯವಾಗಿಲ್ಲ ಯಾಕೆಂದರೆ, ಎಡಪಕ್ಷಗಳಿಗೆ ಯಾವುದೇ ಅಭಿವೃದ್ಧಿಯ ದೂರದೃಷ್ಟಿ ಇಲ್ಲ. ಕೇವಲ ರಾಜಕೀಯಕ್ಕೆ ಮಾತ್ರ ಸೀಮಿತವಾಗಿ ರಾಜ್ಯವನ್ನು ಮತ್ತಷ್ಟು ಹಿಂದಕ್ಕೆ ತಳ್ಳುತ್ತಿದ್ದು, ಕಳೆದ 73 ವರ್ಷಗಳಿಂದ ಕೇರಳದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಮತ್ತು ಎಡಪಕ್ಷಗಳು ಅಭಿವೃದ್ಧಿಯನ್ನು ಕಡೆಗಣಿಸಿವೆ. ಒಂದಾದ ಮೇಲೆ ಒಂದರಂತೆ ರಾಜ್ಯವನ್ನು ಇಷ್ಟ ಬಂದಂತೆ ಆಳಿದ ಈ ಪಕ್ಷಗಳು ಜನರ ನಂಬಿಕೆ, ನಿರೀಕ್ಷೆಗಳಿಗೆ ವಿರುದ್ಧವಾಗಿ ಕೆಲಸ ಮಾಡಿದೆ ಎಂದು ದೂರಿದರು.
Kerala

ಉದ್ಯೋಗ ಸೃಷ್ಟಿಯಲ್ಲಿ ಹಿಂದೆ:
ರಾಜ್ಯದ ಜಿಡಿಪಿ ಎಷ್ಟು? ಕೈಗಾರಿಕೆಗಳು ಎಷ್ಟು ಬಂದಿವೆ? ಉತ್ಪಾದನೆ- ಉದ್ಯೋಗವೆಷ್ಟು? ಎಂಬ ವಿಷಯಗಳ ಬಗ್ಗೆ ಎಲ್‍ಡಿಎಫ್ ಸರಕಾರ ಮಾತನಾಡುತ್ತಿಲ್ಲ. ತ್ರಿಪುರಾ, ಪಶ್ಚಿಮ ಬಂಗಾಳ ಸೇರಿದಂತೆ ಎಲ್ಲ ರಾಜ್ಯಗಳಲ್ಲಿ ಎಡಪಕ್ಷಗಳನ್ನು ಜನರು ತಿರಸ್ಕರಿಸಿದ್ದಾರೆ. ಕೇರಳದಲ್ಲೂ ಈ ಚುನಾವಣೆಯಲ್ಲಿ ಜನರು ಅದೇ ಕೆಲಸ ಮಾಡಲಿದ್ದಾರೆ. ದೇವರನಾಡಿನಲ್ಲಿ ಈ ಸಲ ಹೊಸಗಾಳಿ ಬೀಸುತ್ತಿದ್ದು, ಬಿಜೆಪಿ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ ಎಂದು ಅಭಿಪ್ರಾಯಪಟ್ಟರು.

ಕೇರಳದಲ್ಲಿರುವ ಹೊಸ ತಲೆಮಾರಿನ ಯುವಜನರು ಈಗ ಬದಲಾವಣೆ ಬಯಸುತ್ತಿದ್ದಾರೆ. ಅವರಿಗೆ ಗೊತ್ತಿದೆ, ಕಳೆದ ಏಳು ದಶಕಗಳಲ್ಲಿ ಕೇರಳದಲ್ಲಿ ಪ್ರಗತಿ ಆಗಿಲ್ಲ ಎಂದು. ಉದ್ಯೋಗ ಸೃಷ್ಟಿಯಲ್ಲಿ ಇಡೀ ದೇಶದಲ್ಲಿಯೇ ಕೇರಳ ಹಿಂದೆ ಬಿದ್ದಿದೆ. ಇನ್ನು ರಾಜಕೀಯವಾಗಿಯೂ ಎಡಪಕ್ಷಗಳಿಗೆ ಹಾಗೂ ಕಾಂಗ್ರೆಸ್‍ಗೆ ಉತ್ತಮ ನಾಯಕತ್ವ ಇಲ್ಲ. ಬಿಜೆಪಿ ಬಲಿಷ್ಠ ನಾಯಕತ್ವ ಹೊಂದಿರುವ ಸಶಕ್ತ ಪಕ್ಷ. ದೇಶವನ್ನು ಸಮರ್ಥವಾಗಿ ಮುನ್ನಡೆಸಬಲ್ಲ ಶಕ್ತಿ ಬಿಜೆಪಿಗೆ ಮಾತ್ರ ಇದೆ. ಇಂಥ ಸಂದರ್ಭದಲ್ಲಿ ಹೊಸ ಆಲೋಚನೆಗಳುಳ್ಳ ಬಿಜೆಪಿಗೆ ಅವಕಾಶ ಕೊಟ್ಟು ಎಲ್‍ಡಿಎಫ್-ಯುಡಿಎಫ್ ಕೂಟಗಳನ್ನು ತಿರಸ್ಕರಿಸಬೇಕು ಎಂದು ಮನವಿ ಮಾಡಿದರು.

kerala cm

ಪ್ರಗತಿಗೆ ಬಿಜೆಪಿ ಮಾತ್ರ ಆಯ್ಕೆ:
ಕೇರಳದಲ್ಲಿ ರಾಜಕಾರಣ ನಿಂತ ನೀರಾಗಿದೆ. ಹೊಸತನದ ದೂರದೃಷ್ಟಿ ಇಲ್ಲದ ರಾಜಕೀಯ ವ್ಯವಸ್ಥೆ ಅಲ್ಲಿದೆ. ಅಲ್ಲೊಂದು ಹೊಸ ಪಕ್ಷ ಆಡಳಿತಕ್ಕೆ ಬರದೇ ಹೋದರೆ ಕೇರಳ ಮತ್ತೆ ಹಿಂದಕ್ಕೆ ಹೋಗುತ್ತದೆ. ಗೆದ್ದೆವು, ಸರಕಾರ ಮಾಡಿದೆವು ಎಂಬುದಷ್ಟೇ ಸಾಲದು. ಗುಣಾತ್ಮಕವಾದ ಬದಲಾವಣೆ ತರಬೇಕು. ಅಪಾಯದ ವಿರುದ್ಧ ಸುಲಭವಾದ ಸುಧಾರಣೆಗಳನ್ನು ಕೈಗೊಳ್ಳಬೇಕು. ಸವಾಲುಗಳನ್ನು ಗೆಲ್ಲಬೇಕು. ಕೇರಳದ ಅಭಿವೃದ್ಧಿಗೆ ವಿಫುಲ ಅವಕಾಶಗಳಿವೆ. ಅದೆಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಂಡು ಬಿಜೆಪಿಗೆ ಅವಕಾಶ ಕೊಡಬೇಕು. ಪ್ರಗತಿ ಎಂದರೆ ಬಿಜೆಪಿ ಮಾತ್ರ ಆಯ್ಕೆ, ಪರಿಹಾರವೂ ಹೌದು. ಕೌಟುಂಬಿಕ, ಅನುವಂಶೀಯ ಆಡಳಿತಕ್ಕೆ ನಮ್ಮ ಪಕ್ಷದಲ್ಲಿ ಅವಕಾಶವೇ ಇಲ್ಲದ ಏಕೈಕ ಪಕ್ಷ ಬಿಜೆಪಿ ಎಂದು ನುಡಿದರು.

ಬೆಂಗಳೂರು ನಗರವನ್ನು ಗಮನಿಸಿ:
ಬಿಜೆಪಿ ಸರಕಾರ ಬಂದ ಮೇಲೆ ಬೆಂಗಳೂರು ಯಾವ ದಿಕ್ಕಿನಲ್ಲಿ ಪ್ರಗತಿ ಹೊಂದುತ್ತಿದೆ ಎಂಬುದನ್ನು ತಾವು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ಸರಕಾರ ಬರುವ ತನಕ ಮಹಾರಾಜರ ರೀತಿಯ ಆಳ್ವಿಕೆ ಇತ್ತು. ಆದರೆ ನಮ್ಮ ಪಕ್ಷ ಬಂದ ಮೇಲೆ ಅದೆಲ್ಲವನ್ನೂ ತೊಡೆದು ಹಾಕಲಾಯಿತು. ಸಕಾರಾತ್ಮಕ ಚಿಂತನೆ, ಗುಣಾತ್ಮಕ ಬದಲಾವಣೆ ಮಾತ್ರ ನಮ್ಮ ಅಜೆಂಡಾ ಆಗಿತ್ತು. ಹೀಗಾಗಿ ಬೆಂಗಳೂರು ಮತ್ತಷ್ಟು ಹುರುಪಿನಿಂದ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

Kerala BJP Election 1

ಬೆಂಗಳೂರಿನಲ್ಲಿ ಇರುವ ಕೇರಳ ಮೂಲದ ಪ್ರಮುಖರಾದ ಗೋಪಿನಾಥನ್, ರಾಜಾಗೋಪಾಲ, ಸುದೀಶ್, ರೇಜಿಕುಮಾರ್, ಸ್ಯಾನ್ ಫಿಲಿಪ್ಸ್, ಅನೀಸ್ ಅಂಥೋಣಿ ಮತ್ತಿತರರು ಸಂವಾದದಲ್ಲಿ ಹಾಜರಿದ್ದರು.

TAGGED:Ashwath NarayanBangalorePublic TVಅಶ್ವತ್ಥ ನಾರಾಯಣಕೇರಳಪಬ್ಲಿಕ್ ಟಿವಿಬೆಂಗಳೂರು
Share This Article
Facebook Whatsapp Whatsapp Telegram

Cinema news

Vijay Deverakonda Rashmika Mandanna
ಮದ್ವೆ ಬಳಿಕ ಬಳಿಕ ಒಟ್ಟಿಗೆ ಶೂಟಿಂಗ್‌ಗೆ ತೆರಳಿದ ವಿರೋಶ್ ಜೋಡಿಗೆ ಅದ್ಧೂರಿ ಸ್ವಾಗತ
Cinema Latest Sandalwood South cinema Top Stories
Amita Singh Tomar
ಕೌನ್ ಬನೇಗಾ ಕರೋಡ್ ಪತಿಯಲ್ಲಿ 50 ಲಕ್ಷ ಗೆದ್ದಿದ್ದ ತಹಶೀಲ್ದಾರ್ ಅರೆಸ್ಟ್‌!
Cinema Crime Latest National Top Stories TV Shows
Dhurandhar 2 2
ಒಂದೇ ವಾರದಲ್ಲಿ 1000 ಕೋಟಿ ಕ್ಲಬ್ ಸೇರಿದ `ಧುರಂಧರ್ 2′
Bollywood Cinema Latest Top Stories
Rashmika Vijay 5
ಹನಿಮೂನ್ ಅಲ್ಲ ಬಡ್ಡೀಮೂನ್ – ರಶ್ಮಿಕಾ, ವಿಜಯ್ ಹೊಸ ಟ್ರೆಂಡ್
Cinema Latest South cinema Top Stories

You Might Also Like

Mangaluru Ullala Worker Death
Crime

ಬಾವಿ ಕೊರೆಯುವಾಗ ಮಣ್ಣು ತುಂಬಿದ ಕಬ್ಬಿಣದ ಬಕೆಟ್ ಬಿದ್ದು ಕಾರ್ಮಿಕ ಸಾವು

Public TV
By Public TV
3 minutes ago
Amit Shah 1
Latest

`ಭಯ’ ಬೇಕಾ, `ಭರವಸೆ’ ಬೇಕಾ ಅನ್ನೋದನ್ನ ಜನ ನಿರ್ಧರಿಸಬೇಕು – ದೀದಿ ಸರ್ಕಾರದ ವಿರುದ್ಧ ಅಮಿತ್‌ ಶಾ ಚಾರ್ಜ್‌ಶೀಟ್‌ ರಿಲೀಸ್‌

Public TV
By Public TV
27 minutes ago
sslc student dies after hit by car near kamasamudra in holenarasipur taluk
Crime

ರಸ್ತೆ ದಾಟುವಾಗ ಕಾರು ಡಿಕ್ಕಿ – ಆಗಷ್ಟೇ SSLC ಪರೀಕ್ಷೆ ಬರೆದು ಬಂದಿದ್ದ ವಿದ್ಯಾರ್ಥಿ ಸಾವು

Public TV
By Public TV
29 minutes ago
Narendra Modi
Latest

ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ: ಪ್ರಧಾನಿ ಮೋದಿ

Public TV
By Public TV
30 minutes ago
Maruthi 800 car on fire
Bidar

ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ – ಭಾಗಶಃ ಸುಟ್ಟು ಕರಕಲು

Public TV
By Public TV
31 minutes ago
mohammed bin salman and trump 1
Latest

Kissing My Ass – ಸೌದಿ ರಾಜ ಎಂಬಿಎಸ್‌ಗೆ ಟ್ರಂಪ್‌ ವ್ಯಂಗ್ಯ

Public TV
By Public TV
43 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?