ಹಾಸನ: ಸಹೋದರನೇ ಮಾಜಿ ಸೈನಿಕನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪ ಹಾಸನದಲ್ಲಿ ಕೇಳಿ ಬಂದಿದೆ.
ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, 58 ವರ್ಷದ ಪುಟ್ಟಸ್ವಾಮಯ್ಯ ಮೃತ ದುರ್ದೈವಿಯಾಗಿದ್ದಾರೆ. ಪುಟ್ಟಸ್ವಾಮಯ್ಯ ಮಾಜಿ ಸೈನಿಕನಾಗಿದ್ದು, ಪುಟ್ಟಸ್ವಾಮಯ್ಯ ಅವರ ಸಹೋದರ ನರಸಿಂಹಯ್ಯ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಜಮೀನಿನ ವಿಷ್ಯವಾಗಿ ಪಂಚಾಯಿತಿ ನಡೆಸುವಾಗ ನರಸಿಂಹಯ್ಯ ಮತ್ತು ಅವರ ಕಡೆಯವರು ಎದೆಗೆ, ಮರ್ಮಾಂಗಕ್ಕೆ ಗುದ್ದಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಘಟನೆ ಸಂಬಂಧ ಮೃತ ಪುಟ್ಟಸ್ವಾಮಯ್ಯ ಅವರ ಮಕ್ಕಳು, ಹೊಳೆನರಸೀಪುರ ಸಿಟಿ ಪೊಲೀಸ್ ಠಾಣೆಯಲ್ಲಿ ನಮ್ಮ ತಂದೆಯನ್ನು ಕೊಲೆ ಮಾಡಿದ್ದಾರೆ ಎಂದು ದೂರು ದಾಖಲು ಮಾಡಿದ್ದಾರೆ.