ಇಂದಿನಿಂದ ಮೈಸೂರು-ಊಟಿ ಸಂಚಾರ ಮುಕ್ತ

Public TV
1 Min Read
mys

ಮೈಸೂರು: ಕಪಿಲಾ ನದಿಯಲ್ಲಿ ನೀರಿನ ಪ್ರಮಾಣ ತಗ್ಗಿದ ಹಿನ್ನೆಲೆಯಲ್ಲಿ ಇಂದಿನಿಂದ ಮೈಸೂರು-ಊಟಿ ಸಂಚಾರ ಮುಕ್ತವಾಗಿದೆ.

ನಂಜನಗೂಡಿನಲ್ಲಿ ಕಪಿಲಾ ಅಬ್ಬರ ಕಡಿಮೆಯಾಗಿದ್ದು, ಬ್ಯಾರಿಕೇಡ್‍ಗಳನ್ನ ತೆಗೆದು ಹಾಕುವ ಮೂಲಕ ಪೊಲೀಸರು ಮೈಸೂರು-ಊಟಿ ಸಂಚಾರ ಮುಕ್ತ ಮಾಡಿದ್ದಾರೆ. ಕಪಿಲಾ ನದಿಯ ನೀರು ರಾಷ್ಟ್ರೀಯ ಹೆದ್ದಾರಿಯ ಮಲ್ಲನಮೂಲೆ ಮಠದ ಬಳಿ ರಸ್ತೆವರೆಗೂ ಹರಿದು ಬಂದಿತ್ತು. ಹೀಗಾಗಿ ಕಳೆದ ಮೂರು ದಿನಗಳಿಂದ ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು.

vlcsnap 2020 08 10 09h12m56s54

ಶನಿವಾರ ಮೈಸೂರು-ಊಟಿ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿತ್ತು. ಇದರಿಂದ ಮೈಸೂರು ಊಟಿ ರಸ್ತೆಯಲ್ಲಿ ಸಂಚಾರಕ್ಕೆ ಬ್ರೇಕ್ ಬಿದ್ದಿತು. ಮೈಸೂರು-ಊಟಿ ರಸ್ತೆಯಲ್ಲಿದ್ದ ನೀರು ಖಾಲಿಯಾಗಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಭಾನುವಾರ ಕೂಡ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿತ್ತು.

vlcsnap 2020 08 10 09h11m52s180

ಇದೀಗ ಕಬಿನಿ ಡ್ಯಾಂನಿಂದ ಕಡಿಮೆ ನೀರು ಬಿಟ್ಟ ಹಿನ್ನೆಲೆಯಲ್ಲಿ ಕಪಿಲಾ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಹೀಗಾಗಿ ಇಂದಿನಿಂದ ಮೈಸೂರು-ಊಟಿ ಸಂಚಾರ ಮುಕ್ತವಾಗಿದೆ. ಕಪಿಲೆಯ ಅಬ್ಬರ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ನಂಜನಗೂಡಿನ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಅಲ್ಲದೇ ನಂಜನಗೂಡಿನಲ್ಲಿ ಪ್ರವಾಹದ ಆತಂಕ ದೂರವಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *