ಒಟ್ಟಾವಾ: ಭಾರತದಿಂದ ಕೆನಡಾ ತೆರಳುವ ಅಂತರಾಷ್ಟ್ರೀಯ ವಿಮಾನ ಹಾರಾಟವನ್ನು 2021ರ ಆಗಸ್ಟ್ 21ರವರೆಗೆ ನಿಷೇಧಿಸಲಾಗಿದೆ ಎಂದು ಕೆನಡಾ ಸರ್ಕಾರ ಮಂಗಳವಾರ ಘೋಷಿಸಿದೆ. ಹೀಗಾಗಿ ಭಾರತದಿಂದ ಕೆನಡಾಕ್ಕೆ ತೆರಳಲು ಪ್ಲಾನ್ ಮಾಡಿಕೊಂಡಿರುವ ಪ್ರಯಾಣಿಕರು ಇನ್ನೂ ಒಂದು ತಿಂಗಳು ಕಾಯಬೇಕಾಗುತ್ತದೆ.
ಭಾರತ ಮತ್ತು ಕೆನಡಾ ನಡುವಿನ ಅಂತರಾಷ್ಟ್ರೀಯ ವಿಮಾನ ಸಂಚಾರವನ್ನು ಪುನಾರಂಭಿಸಲು ಇತ್ತೀಚೆಗಷ್ಟೇ ಕೆನಡಾ ಹಾಗೂ ಭಾರತದ ಹೈ ಕಮಿಷನರ್ ಅಜಯ್ ಬಿಸಾರಿಯಾ ಏರ್ ಇಂಡಿಯಾ ಟೊರೊಂಟೊ ಪ್ರತಿನಿಧಿಯನ್ನು ಭೇಟಿ ಮಾಡಿದ್ದರು. ಜೊತೆಗೆ ಉಭಯ ರಾಷ್ಟ್ರಗಳ ನಡುವೆ ವಿಮಾನಯಾನಗಳನ್ನು ಪುನಾರಂಭಿಸುವುದು ಮುಖ್ಯವಾಗಿದೆ. ಅದರಲ್ಲಿಯೂ ಕಾಲೇಜುಗಳನ್ನು ಪುನಃ ತೆರೆಯುವ ದೃಷ್ಟಿಯಿಂದ ವಿಮಾನ ಹಾರಾಟವನ್ನು ಪ್ರಾರಂಭಿಸಬೇಕು ಎಂದು ಹೇಳಿದ್ದರು.
ಭಾರತ ಹೊರತುಪಡಿಸಿ ಉಳಿದ ಅಂತರಾಷ್ಟ್ರಿಯ ಪ್ರಯಾಣಿಕರು ಲಸಿಕೆ ಪಡೆದು ಕೆನಾಗೆ ಆಗಮಿಸಬಹುದಾಗಿದೆ. ಈ ನಿಯಮ ಪರವಾನಗಿ ಹೊಂದಿರುವ ಕಾರ್ಮಿಕರು, ವಿದೇಶಿ ವಿದ್ಯಾರ್ಥಿಗಳು ಮತ್ತು ಮೂಲ ನಿವಾಸಿಗಳಿಗೂ ಅನ್ವಯಿಸಲಾಗಿದೆ. ಇದನ್ನೂ ಓದಿ:ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಆಸ್ಪತ್ರೆಗೆ ದಾಖಲು