– ಇಬ್ಬರು ಯುವಕನಿಂದ ನೇಣಿಗೆ ಶರಣಾಗಿದ್ದೇನೆ
ಲಕ್ನೋ: ಯುವಕನೊಬ್ಬ ತನ್ನ ಕೈ ಮೇಲೆ ಡೆತ್ನೋಟ್ ಬರೆದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಔರೇಯಾ ಜಿಲ್ಲೆಯಲ್ಲಿ ನಡೆದಿದೆ.
ವಿಕಾಸ್ ಕುಮಾರ್(19) ಆತ್ಮಹತ್ಯೆ ಮಾಡಿಕೊಂಡ ಯುವಕ.ಮುರಾದ್ಗಂಜ್ನ ಅಯಾನಾ ರಸ್ತೆ ನಿವಾಸಿಯಾಗಿರುವ ವಿಕಾಸ್ ಅಂತಿಮ ವರ್ಷದ ಬಿಎಸ್ಸಿ ಓದುತ್ತಿದ್ದನು. ಇಬ್ಬರು ಯುವಕರ ಕಿರುಕುಳ ತಾಳಲಾರದೆ ವಿಕಾಸ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬುಧವಾರ ರಾತ್ರಿ ವಿಕಾಸ್ ಮದುವೆ ಮೆರವಣಿಗೆ ಹೋಗಿದ್ದನು. ರಾತ್ರಿ ಸುಮಾರು 2 ಗಂಟೆಗೆ ಮನೆಗೆ ಹಿಂತಿರುಗಿದ ವಿಕಾಸ್ ರೂಮಿಗೆ ಹೋಗಿ ಮಲಗಿದ್ದನು. ಗುರುವಾರ ಬೆಳಗ್ಗೆ ಪೋಷಕರು ಆತನ ರೂಮಿಗೆ ಹೋಗಿದ್ದಾಗ ಆತ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ವಿಕಾಸ್ ತನ್ನ ಕೈಯಲ್ಲಿ ಡೆತ್ನೋಟ್ ಬರೆದುಕೊಂಡಿದ್ದನು. ಅದರ ಜೊತೆಗೆ ಆತನ ರೂಮಿನಲ್ಲಿ ಮತ್ತೊಂದು ಡೆತ್ನೋಟ್ ಕೂಡ ಪತ್ತೆಯಾಗಿತ್ತು. ಸದ್ಯ ಡೆತ್ನೋಟ್ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಡೆತ್ನೋಟ್ನಲ್ಲಿ ಅಪ್ಪ, ಅಮ್ಮ ದಯವಿಟ್ಟು ನನ್ನನ್ನು ಕ್ಷಮಿಸಿ. ನಿಮ್ಮ ವೃದ್ಧಾಪ್ಯದಲ್ಲಿ ಸಹಾಯ ಮಾಡಲು ನನಗೆ ಸಾಧ್ಯವಿಲ್ಲ. ಆದರೆ ಇಬ್ಬರು ಯುವಕರಾದ ಶಿವ ಹಾಗೂ ಸತ್ಯಂ ಅವರನ್ನು ಸುಮ್ಮನೆ ಬಿಡಬೇಡಿ. ಅವರಿಬ್ಬರು ನನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಹಾಗಾಗಿ ನಾನು ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಬರೆದಿದ್ದನು.