ಚಿಕ್ಕಬಳ್ಳಾಪುರ: ಕಲ್ಲಂತರಾಯನಗುಟ್ಟದ ಹೊಂಡಕ್ಕೆ ಧುಮುಕಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕಲ್ಲಂತರಾಯನಗುಟ್ಟದಲ್ಲಿ ನಡೆದಿದೆ.
ಗಂಗರಾಜು(21) ಆತ್ಮಹತ್ಯೆ ಮಾಡಿಕೊಂಡ ಯುವಕ. ಚನ್ನಭೈರೇನಹಳ್ಳಿ ಗ್ರಾಮದವನಾಗಿರುವ ಗಂಗರಾಜು ಅನಾರೋಗ್ಯದಿಂದ ಬಳಲುತ್ತಿದ್ದು, ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಓಳಗಾಗಿದ್ದನು ಎನ್ನಲಾಗಿದೆ. ಕಳೆದ ರಾತ್ರಿ ತನ್ನ ಸ್ನೇಹಿತರಿಗೆ ಕರೆ ಮಾಡಿದ ಗಂಗರಾಜು ತಾನು ಕಲ್ಲಂತರಾಯನಗುಟ್ಟದಲ್ಲಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ ಎಂದು ಹೇಳಲಾಗುತ್ತಿದೆ.
ಸ್ನೇಹಿತರು ಕಲ್ಲಂತರಾಯನಗುಟ್ಟದ ಬಳಿ ಹೋಗಿ ನೋಡಿದಾಗ ಗಂಗರಾಜುವಿನ ಮೊಬೈಲ್ ಹಾಗೂ ಚಪ್ಪಲಿ ಪತ್ತೆಯಾಗಿದೆ. ಗೌರಿಬಿದನೂರು ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ತೆಪ್ಪಗಳ ಮೂಲಕ ತೀವ್ರ ಹುಡುಕಾಟ ನಡೆಸಿ ಗಂಗರಾಜು ಮೃತದೇಹ ಹೊರತೆಗೆದಿದ್ದಾರೆ.
ಈ ಬಗ್ಗೆ ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.