ರೇಪಿಸ್ಟ್ ಕಾಮಿ ಸ್ವಾಮೀಜಿಯ ಮರ್ಮಾಂಗವನ್ನೇ ಕಟ್ ಮಾಡಿದ್ಳು ಯುವತಿ!

Public TV
2 Min Read
kerala swamiji

ತಿರುವನಂತಪುರಂ: ತನ್ನ ಮೇಲೆ ಅತ್ಯಾಚಾರ ಎಸಗಲು ಮುಂದಾಗಿದ್ದ ಸ್ವಾಮೀಜಿಯ ಮರ್ಮಾಂಗವನ್ನೇ ಯುವತಿಯೊಬ್ಬಳು ಕತ್ತರಿಸಿದ ಘಟನೆ ತಿರುವನಂತಪುರಂ ಸಮೀಪದ ಕನ್ನಮೂಲ ಎಂಬಲ್ಲಿ ನಡೆದಿದೆ.

ಕೊಲ್ಲಂನ ಪನ್ಮನದಲ್ಲಿರುವ ಶ್ರೀಹರಿ ಅಲಿಯಾಸ್ ಗಣೇಶಾನಂದ ತೀರ್ಥಪಾದ ಸ್ವಾಮಿಯನ್ನು (53)ಈಗ ತಿರುವನಂತಪುರದಲ್ಲಿರುವ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.

ಘಟನೆಯ ವಿವರ:
ಶ್ರೀಹರಿ ಅಲಿಯಾಸ್ ಗಣೇಶಾನಂದ ಸ್ವಾಮೀಜಿ ಶುಕ್ರವಾರ ಯುವತಿಯ ಮನೆಗೆ ವಿಶೇಷ ಪೂಜೆಗೆಂದು ಆಗಮಿಸಿದ್ದಾನೆ. ರಾತ್ರಿ ಈತ ಅತ್ಯಾಚಾರಕ್ಕೆ ಯತ್ನಿಸಿದ್ದಾಗ ಯುವತಿ ಹರಿತವಾದ ಚೂರಿಯ ಸಹಾಯದಿಂದ ಮರ್ಮಾಂಗವನ್ನು ಕತ್ತರಿಸಿದ್ದಾಳೆ.

ಶುಕ್ರವಾರ ಮಧ್ಯರಾತ್ರಿ 11.30ಕ್ಕೆ ಈ ಘಟನೆ ನಡೆದಿದೆ. ಈ ಘಟನೆಯ ಬಳಿಕ ಯುವತಿ ತಿರುವನಂತಪುರಂ ಪೊಲೀಸ್ ಠಾಣೆಗೆ ಕರೆ ಮಾಡಿ ನಾನು ಸ್ವಾಮೀಜಿಯ ಮರ್ಮಾಂಗವನ್ನು ಕತ್ತರಿಸಿದ್ದೇನೆ ಎಂದು ತಿಳಿಸಿದ್ದಾಳೆ.

ಯುವತಿ ತನ್ನ ಹೇಳಿಕೆಯಲ್ಲಿ, ನಾನು ಹೈಸ್ಕೂಲ್ ಓದುತ್ತಿರುವಾಗಲೇ ಈತ ನನ್ನ ಮೇಲೆ ಅತ್ಯಾಚಾರ ಎಸಗುತ್ತಿದ್ದ. ಈತನ ಈ ಕೃತ್ಯ ನನ್ನ ತಾಯಿಗೆ ತಿಳಿದಿದೆ. ಶುಕ್ರವಾರ ಮನೆಗೆ ಬರುತ್ತಿರುವ ವಿಚಾರ ತಿಳಿದು ಆತನಿಗೆ ಪಾಠ ಕಲಿಸಬೇಕೆಂದು ನಿರ್ಧರಿಸಿದ್ದೆ. ಇದಕ್ಕಾಗಿ ನಾನು ಮೊದಲೇ ಹರಿತವಾದ ಚೂರಿಯನ್ನು ರೆಡಿ ಮಾಡಿ ಇಟ್ಟುಕೊಂಡಿದ್ದೆ ಎಂದು ಹೇಳಿದ್ದಾಳೆ.

ಯಾಕೆ ಈ ರೀತಿ ಕೃತ್ಯ ಎಸಗಿದ್ದು ಎಂದು ಕೇಳಿದ್ದಕ್ಕೆ ಯುವತಿ, ದೇವಮಾನವ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಹೇಳಿದರೆ ಯಾರೂ ನಂಬುತ್ತಿರಲಿಲ್ಲ. ಈ ಕಾರಣಕ್ಕಾಗಿ ನನಗೆ ಬೇರೆ ದಾರಿ ಇಲ್ಲದೇ ಮರ್ಮಾಂಗವನ್ನೇ ಕತ್ತರಿಸಲು ಮುಂದಾದೆ ಎಂದು ತಿಳಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ಕೊಲ್ಲಂ ಮೂಲದ 54 ವರ್ಷದ ಹಿರಿಯ ವ್ಯಕ್ತಿ ನಸುಕಿನ ಜಾವ 12.39ಕ್ಕೆ ದಾಖಲಾಗಿದ್ದು, ಆಸ್ಪತ್ರೆಗೆ ಬರುವಾಗ ಮರ್ಮಾಂಗದ ಶೇ.90 ಭಾಗ ನೇತಾಡಿಕೊಂಡಿತ್ತು. ಯುರಲಾಜಿ ಮತ್ತು ಪ್ಲಾಸ್ಟಿಕ್ ಸರ್ಜನ್ ಗಳು ಕೂಡಲೇ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಈಗ ಆರೋಗ್ಯ ಸ್ವಲ್ಪ ಸುಧಾರಿಸಿದೆ ಎಂದು ತಿರುವನಂತಪುರಂ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಪಿಟಾಯ್ ಪೊಲೀಸರು ಐಪಿಸಿ ಸೆಕ್ಷನ್ 376(ಅತ್ಯಾಚಾರ) ಮತ್ತು ಪೋಸ್ಕೋ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನಮಗೂ ಆತನಿಗೂ ಸಂಬಂಧ ಇಲ್ಲ: ಆತನ ಗುರುತು ಪತ್ರದಲ್ಲಿ ಆಶ್ರಮದ ವಿಳಾಸ ಸಿಕ್ಕಿದ ಹಿನ್ನೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪನ್ಮನ ಆಶ್ರಮದ ಮುಖ್ಯಸ್ಥ ಪ್ರಣವನಂದ ಅವರು, ಈ ಹಿಂದೆ ಆತ ಆಶ್ರಮದಲ್ಲಿ ನೆಲೆಸಿದ್ದ ನಂತರ ಆಶ್ರಮವನ್ನು ತೊರೆದು ತಿರುವನಂತಪುರಂನಲ್ಲಿ ಹೋಟೆಲ್ ನಡೆಸುತ್ತಿದ್ದ. ನಮ್ಮ ಆಶ್ರಮಕ್ಕೆ ಮತ್ತು ಆತನಿಗೆ ಯಾವುದೇ ಸಂಬಂಧ ಇಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ಲಸ್ ಟು ಪರೀಕ್ಷೆಯಲ್ಲಿ 1200ಕ್ಕೆ 1180 ಅಂಕಗಳಿಸಿದ್ದ ವಿದ್ಯಾರ್ಥಿನಿ ಮಾಧ್ಯಮಗಳ ವರದಿಯಿಂದ ಮನನೊಂದು ಆತ್ಮಹತ್ಯೆ!

ಇದನ್ನೂ ಓದಿ :ಶವದ ಮರ್ಮಾಂಗ ಹಿಡಿದು ಮಹಿಳೆ ರೋಧನೆ: ಕಲಬುರಗಿಯಲ್ಲೊಂದು ವಿಚಿತ್ರ ಘಟನೆ

kerala swamiji 2

Share This Article
Leave a Comment

Leave a Reply

Your email address will not be published. Required fields are marked *