ರಾಜಿಯಾಗಲು ಬಂದವ ಸ್ನೇಹಿತರಿಂದಲೇ ಕೊಲೆಯಾದ!

Public TV
1 Min Read
ANE MUR4DER A

ಬೆಂಗಳೂರು: ಮಚ್ಚಿನಿಂದ ಕೊಚ್ಚಿ ಸ್ನೇಹಿತನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೆ.ಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ದೇವಸಂದ್ರದ ಜೆಸಿ ಲೇಔಟ್ ಬಳಿಯ ಈದ್ಗಾ ಮೈದಾನದಲ್ಲಿ ನಡೆದಿದೆ.

ಸೋನು ಅಲಿಯಾಸ್ ಅಪ್ರೋಜ್ ಪಾಷ (24) ಹತ್ಯೆಯಾದ ದುರ್ದೈವಿ. ಅಪ್ರೋಜ್ ಪಾಷ ಹಾಗೂ ಆರೋಪಿ ಇಮ್ರಾನ್ ಕೆಲ ದಿನಗಳ ಹಿಂದೆ ಸಣ್ಣ ವಿಚಾರವೊಂದಕ್ಕೆ ಜಗಳ ಮಾಡಿಕೊಂಡಿದ್ದರು. ನಂತರ ರಾಜಿಯಾಗಲು ಸೋನು ಸ್ನೇಹಿತ ಇಮ್ರಾನ್ ಮನೆಗೆ ತೆರಳಿದ್ದರು.

vlcsnap 2019 04 17 13h28m50s635

ರಾಜಿ ವೇಳೆ ಇಬ್ಬರ ಜಗಳ ವಿಕೋಪಕ್ಕೆ ತಿರುಗಿದ್ದು, ಅಪ್ರೋಜ್ ಪಾಷ ಆರೋಪಿ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ಸ್ನೇಹಿತರು ಮಚ್ಚಿನಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ.

ಎರಡು ತಿಂಗಳ ಹಿಂದೆ ಕುಡಿದು ಇಬ್ಬರು ಗಲಾಟೆ ಮಾಡಿಕೊಂಡಿದ್ದರು. ರಾಜಿಯಾಗಲು ಮನೆಗೆ ಕರೆಸಿಕೊಂಡು ಇಮ್ರಾನ್ ಮಚ್ಚು ಮತ್ತು ಲಾಂಗ್‍ಗಳಿಂದ ಹತ್ಯೆ ಮಾಡಿದ್ದಾನೆ. ಈ ವಿಚಾರ ನಮಗೆ ಹತ್ತು ನಿಮಿಷ ತಡವಾಗಿ ತಿಳಿಯಿತು ಎಂದು ಅಪ್ರೋಜ್ ಸಂಬಂಧಿ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಕೆ.ಆರ್.ಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *