ಕೈಗೆ ಗಾಜು ಚುಚ್ಚಿ ನರ ಕಟ್- ಸರ್ಜರಿ ಬಳಿಕ ಯುವಕ ಸಾವು, ಆರೋಪ

Public TV
1 Min Read
SATHISH

ಬೆಂಗಳೂರು: ಕೈಗೆ ಗಾಜು ಚುಚ್ಚಿ ನರ ಕಟ್ ಆಗಿದ್ದ ಯುವಕ (Young Man) ಸರ್ಜರಿ ಬಳಿಕ ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೇ ಮೃತಪಟ್ಟಿರುವುದಾಗಿ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.

ಮೃತ ಯುವಕನನ್ನು ಸತೀಶ್ (24) ಎಂದು ಗುರುತಿಸಲಾಗಿದೆ. ದಾಸರಹಳ್ಳಿಯ ಮಧು ಆಸ್ಪತ್ರೆ (Madhu Hospital Dasarahalli) ವೈದ್ಯರ ಮೇಲೆ ಸತೀಶ್ ಕುಟುಂಬಸ್ಥರು ಗಂಭೀರ ಆರೋಪ ಮಾಡುತ್ತಿದ್ದಾರೆ.

Alcoholic Drink copy

ಘಟನೆಯೇನು..?: ಕಳೆದ ಭಾನುವಾರ ಸತೀಶ್ ಕುಡಿದು (Drinks) ಬಿದ್ದಿದ್ದ. ಈ ವೇಳೆ ಸತೀಶ್ ಕೈಗೆ ಗಾಜು ಚುಚ್ಚಿ ನರ ಕಟ್ ಆಗಿತ್ತು. ರಕ್ತಸ್ರಾವ ಕೂಡ ಆಗಿ ಹೆಚ್ಚಿನ ರಕ್ತ ಹೋಗಿತ್ತು. ಹೀಗಾಗಿ ಸತೀಶ್‍ನನ್ನು ಭಾನುವಾರ ರಾತ್ರಿಯೇ ಮಾಗಡಿ ರಸ್ತೆ ದಾಸರಹಳ್ಳಿಯ ಮಧು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇದನ್ನೂ ಓದಿ: ವೈದ್ಯಕೀಯ ಕಾಲೇಜಿನ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ನೇಣಿಗೆ ಶರಣು

SATHISH 1

ಈ ವೇಳೆ ಸರ್ಜರಿ (Surgery) ಮಾಡಬೇಕು ಎಂದು ವೈದ್ಯರು ಹೇಳಿದ್ದರು. ಸೋಮವಾರ ಸರ್ಜರಿ ಸಹ ಮಾಡಿದ್ದು, ಸತೀಶ್ ಕುಟುಂಬಸ್ಥರೊಂದಿಗೆ ಮಾತನಾಡಿದ್ದ. ಆದರೆ ಮಂಗಳವಾರ ಮಧ್ಯಾಹ್ನ ಇದ್ದಕ್ಕಿದ್ದಂತೆ ಸತೀಶ್ ಕೊನೆಯುಸಿರೆಳೆದಿದ್ದಾನೆ. ಇದೀಗ ಕುಟುಂಬಸ್ಥರು, ಕೈಗೆ ಪೆಟ್ಟಾಗಿದೆ ಅಂತ ಆಸ್ಪತ್ರೆ ಕರೆದೊಯ್ದರೆ ಪ್ರಾಣವನ್ನೇ ತೆಗೆದಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

ಘಟನೆ ಸಂಬಂಧ ಕುಟುಂಬಸ್ಥರಿಂದ ಕೆಪಿ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *