Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಏನಾಗಿದೆ ನನಗೇನಾಗಿದೆ: ಆಲ್ಬಂ ಹಾಡಿಗೆ ದನಿಯಾದ ಅನಿತಾ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಏನಾಗಿದೆ ನನಗೇನಾಗಿದೆ: ಆಲ್ಬಂ ಹಾಡಿಗೆ ದನಿಯಾದ ಅನಿತಾ

Cinema

ಏನಾಗಿದೆ ನನಗೇನಾಗಿದೆ: ಆಲ್ಬಂ ಹಾಡಿಗೆ ದನಿಯಾದ ಅನಿತಾ

Public TV
Last updated: November 21, 2025 12:04 pm
Public TV
Share
3 Min Read
Anitha Sara Mahesh Album Song
SHARE

ಗಾಯನ ಸರಸ್ವತಿ ಒಮ್ಮೆ ಒಲಿದರೆ, ಅದು ಯಾವತ್ತೂ ಬಿಟ್ಟು ಹೋಗಲ್ಲ ಎನ್ನುವುದಕ್ಕೆ ಅನಿತಾ ಸಾರಾ ಮಹೇಶ್ ಅವರ ಪ್ರತಿಭೆಯೇ ಉದಾಹರಣೆ. ಅವರು ಸಂಸಾರ, ಮಕ್ಕಳಾದವು ಅಂತ ಮನೆಯಲ್ಲಿ ಕೂರದೆ ತಮ್ಮೊಳಗಿನ ಗಾಯನ ಕಲೆಯನ್ನು ಸಿನಿಮಾ, ಆಲ್ಬಂ ಹಾಡುಗಳ ಮೂಲಕ ಹೊರ ಜಗತ್ತಿಗೆ ಪರಿಚಯಿಸಿದ್ದಾರೆ. ಇದಕ್ಕೆ ಪತಿ ಸಾರಾ. ಮಹೇಶ್ ಮತ್ತು ಮಕ್ಕಳ ಬೆಂಬಲವೂ ಸಿಕ್ಕಿದೆ. ಅದರ ಪ್ರತಿಫಲವಾಗಿ `ಏನಾಗಿದೆ ನನಗೇನಾಗಿದೆ’ ಎಂಬ ಆಲ್ಬಂ ಸಾಂಗ್ ಬಿಡುಗಡೆಯಾಗಿದ್ದು, ಇದನ್ನು ಅನಿತಾ ಸಾರಾ ಮಹೇಶ್ ಸುಶ್ರಾವ್ಯವಾಗಿ ಹಾಡಿದ್ದಾರೆ. ಅವರ ಮೊಲೋಡಿ ಧ್ವನಿಗೆ ಕನ್ನಡದ ಮೂವರು ಹಿರಿಯ ಸಂಗೀತ ನಿರ್ದೇಶಕರು ಮೂಕ ವಿಸ್ಮಿತರಾಗಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಶ್ರೇಯಾ ಘೋಷಾಲ್ ಕಂಠ ಸಿಕ್ಕಂತಾಗಿದೆ ಎಂದು ಕೊಂಡಾಡಿದ್ದಾರೆ.

ಸಂಗೀತ ನಿರ್ದೇಶಕ ವಿ.ಮನೋಹರ್, ಸಾಧುಕೋಕಿಲ ಹಾಗೂ ಅಭಿಮಾನ್ ರಾಯ್ ಅವರು ಗಾಯಕಿ ಅನಿತಾ ಸಾರಾ ಮಹೇಶ್ ಅವರ ಪ್ರತಿಭೆಗೆ ಮಾರುಹೋಗಿದ್ದು, ಆ ಕಲೆಯನ್ನು ಇನ್ನೂ ದೊಡ್ಡಮಟ್ಟದಲ್ಲಿ ಪ್ರದರ್ಶಿಸಿ ಜೊತೆಗೆ ನಿಮಗಿರುವ ಸಂಪರ್ಕದಲ್ಲಿ ಆಡಿಯೋ ಕಂಪನಿಯನ್ನು ಆರಂಭಿಸಿ, ಆ ಮೂಲಕ ಅನೇಕ ಹೊಸ ನಿರ್ಮಾಪಕರು, ನಿರ್ದೆಶಕರು ಮತ್ತು ಚಿತ್ರತಂಡಕ್ಕೆ ಬೆಂಬಲವಾಗಿ ನಿಲ್ಲಿ ಎಂದು ಮನವಿ ಮಾಡುವ ಮೂಲಕ “ಏನಾಗಿದೆ ನನಗೇನಾಗಿದೆ” ಆಲ್ಬಂ ಹಾಡನ್ನು ಮನಸಾರೆ ಮೆಚ್ಚಿಕೊಂಡಿದ್ಧಾರೆ. ಗೌಸ್ ಪೀರ್ ಅವರ ಸಾಹಿತ್ಯದಲ್ಲಿ ಮೂಡಿಬಂದಿರುವ ಈ ಹಾಡಿಗೆ ಅನಿತಾ ಸಾರಾ ಮಹೇಶ್ ದನಿಯಾಗಿದ್ದು, ಅಭಿಮಾನ್ ರಾಯ್ ಸಂಗೀತ ಸಂಯೋಜಿಸಿದ್ದಾರೆ. ಈ ಹಾಡು ಯಾವ ಸಿನಿಮಾ ಹಾಡಿಗೂ ಕಡಿಮೆ ಇಲ್ಲದಂತೆ ಮೂಡಿ ಬಂದಿದೆ, ಇದು ಅನಿತಾ ಅವರೊಳಗೆ ಇರುವ ಹಿನ್ನೆಲೆ ಗಾಯಕಿಯನ್ನು ಹೊರಹಾಕಿದೆ.

Anitha Sara Mahesh Album Song 1

ಹಾಡು ಬಿಡುಗಡೆಗೊಳಿಸಿ ಮಾತನಾಡಿದ ಸಾಧು ಕೋಕಿಲ, ಅನಿತಾ ಅವರ ಈ ಸಾಂಗ್, ಯಾವ ಸಿನಿಮಾ ಹಾಡಿಗೂ ಕಡಿಮೆ ಇಲ್ಲ, ಪತಿ ಸಾರಾ ಮಹೇಶ್ ಅವರ ಬೆಂಬಲದಿಂದ ಈ ಮಟ್ಟಕ್ಕೆ ಬಂದಿದ್ಧಾರೆ. ತಮಗೂ ಒಂದು ಆಲ್ಬಂ ಸಾಂಗ್ ಹಾಡಿ ಕೊಡುವಂತೆ ಕೇಳಿದ್ದಾರೆ. ಪ್ರಕೃತಿಯ ಮಧ್ಯೆ ಇಡೀ ನಾಡೇ ತಿರುಗಿ ನೋಡುವಂತೆ ಅವರಿಗಾಗಿ ಮ್ಯೂಸಿಕ್ ಮಾಡಿಕೊಡುವೆ ಎಂದು ಹೇಳಿದರು. ಈಗ ಇರುವ ಆಡಿಯೋ ಕಂಪನಿಗಳವರು ಆಕಾಶದಲ್ಲಿದ್ದಾರೆ, ಅವರಾರೂ ಸಣ್ಣ ಪುಟ್ಟ ಚಿತ್ರ ನಿರ್ಮಾಪಕರಿಗೆ, ನಿರ್ದೇಶಕರಿಗೆ ಸಿಗುತ್ತಿಲ್ಲ, ಹೀಗಾಗಿ ಆಡಿಯೋ ಕಂಪನಿ ಆರಂಭಿಸಿ ಕನ್ನಡ ಚಿತ್ರರಂಗಕ್ಕೆ ನೆರವಾಗಿ, ಮತ್ತಷ್ಟು ಎತ್ತರಕ್ಕೆ ಬೆಳೆಯಿರಿ ಎಂದು ಮನದುಂಬಿ ಹಾರೈಸಿದರು.

ವಿ.ಮನೋಹರ್ ಮಾತನಾಡಿ, ಅನಿತಾ ಅವರ ಹಾಡು ಕೇಳುತ್ತಿದ್ದರೆ ವೃತ್ತಿಪರ ಹಿನ್ನೆಲೆ ಗಾಯಕಿ ಹಾಡಿದ ರೀತಿ ಇದೆ. ಅವರು ಈಗಾಗಲೇ ಕನ್ನಡದಲ್ಲಿ ಕೆಲ ಚಿತ್ರಗಳಿಗೆ ಹಾಡಿದ್ದಾರೆ. ಮುಂದೆಯೂ ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಚಿತ್ರವನ್ನೂ ನಿರ್ಮಾಣ ಮಾಡಲಿ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು. ಸಂಗೀತ ನಿರ್ದೇಶಕ ಅಭಿಮಾನ್ ರಾಯ್ ಮಾತನಾಡಿ ಅನಿತಾ ಅವರು ಈ ಹಾಡು ಮಾಡಿಕೊಡುವಂತೆ ಕೇಳಿಕೊಂಡರು. ಅವರ ಧ್ವನಿಗೆ ಹೊಂದುವಂತೆ ಮೆಲೋಡಿ ಮ್ಯೂಸಿಕ್ ಕಂಪೋಸ್ ಮಾಡಿದ್ದೇವೆ. “ಏನಾಗಿದೆ ನನಗೇನಾಗಿದೆ” ಸಾಹಿತ್ಯವನ್ನು ಅದ್ಭುತವಾಗಿ ಹಾಡಿದ್ದಾರೆ. ಮುಂದೆಯೂ ಅವರಿಗಾಗಿ ಹಾಡು ಮಾಡುತ್ತೇನೆ. ಅವರೊಳಗಿನ ಪ್ರತಿಭೆಯನ್ನು ಹೊರತೆಗೆಯುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಗಾಯಕಿ ಅನಿತಾ ಸಾರಾ ಮಹೇಶ್ ಮಾತನಾಡಿ ನಮ್ಮದೇ ‘ಅನು ಸಾರ’ ಆಡಿಯೋ ಮೂಲಕ ಈ ಹಾಡನ್ನು ಹೊರತಂದಿದ್ದೇವೆ. ನನಗೆ ಚಿಕ್ಕ ವಯಸ್ಸಿನಿಂದಲೇ ಸಂಗೀತದ ಬಗ್ಗೆ ಅತೀವ ಆಸಕ್ತಿ ಇತ್ತು, ಈ ನಡುವೆ ಮದುವೆಯಾದ ನಂತರ ಮಕ್ಕಳ ಜವಾಬ್ದಾರಿ ನಿಭಾಯಿಸಬೇಕಾಗಿತ್ತು. ಪತಿ ಸಾರಾ ಮಹೇಶ್ ಅವರು ರಾಜಕಾರಣದಲ್ಲಿರುವ ಹಿನ್ನೆಲೆ ಅವರ ಕೆಲಸದಲ್ಲಿ ಜೊತೆಯಾಗಬೇಕಾಗಿತ್ತು, ಒಬ್ಬ ಮಗ ವೈದ್ಯ ಮತ್ತೊಬ್ಬ ಮಗ ಉದ್ಯಮಿಯಾಗದ್ದು, ನನಗೂ ಸಮಯ ಸಿಕ್ಕಿದೆ, ಹಾಗಾಗಿ ಗಾಯನದಲ್ಲಿ ಹೆಚ್ಚು ತೊಡಗಿಕೊಳ್ಳಲು ಸಾಧ್ಯವಾಯಿತು ಎಂದು ಹೇಳಿದರು.

TAGGED:Album SongAnithasandalwood
Share This Article
Facebook Whatsapp Whatsapp Telegram

Cinema news

Salman Khan
ಸಲ್ಮಾನ್ ಖಾನ್ ಅಭಿನಯದ `ಬ್ಯಾಟಲ್ ಆಫ್ ಗಲ್ವಾನ್’ ಈಗ `ಮಾತೃಭೂಮಿ’
Bollywood Cinema Latest Top Stories
Oscars 2026 Michael B Jordan Jessie Buckley
Oscars 2026: ಮೈಕೆಲ್ ಬಿ ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ
Cinema Latest Top Stories World
Dhurandhar 2 Trailer
ರಿಲೀಸ್‌ಗೂ ಮುನ್ನವೇ 100 ಕೋಟಿ ಬಾಚಿದ ಧುರಂಧರ್‌-2
Bollywood Cinema Latest Top Stories
chandanavana film critics academy awards
ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ – ಅತಿ ಹೆಚ್ಚು ನಾಮನಿರ್ದೇಶಿತರು ಯಾರು?
Cinema Latest Sandalwood Top Stories

You Might Also Like

Rashid Khan Kabul Hospital Attack
Cricket

ಪಾಕಿಸ್ತಾನ ಸೇನೆಯಿಂದ ಕೊಲೆ: ಕಾಬೂಲ್‌ ಆಸ್ಪತ್ರೆ ಮೇಲಿನ ದಾಳಿ ಖಂಡಿಸಿದ ಕ್ರಿಕೆಟರ್ ರಶೀದ್‌ ಖಾನ್‌

Public TV
By Public TV
18 minutes ago
Cyber Crime
Bengaluru City

ವೃದ್ಧೆಗೆ ಡಿಜಿಟಲ್ ಅರೆಸ್ಟ್ – ಬರೋಬ್ಬರಿ 38 ಲಕ್ಷ ರೂ. ವಂಚನೆ

Public TV
By Public TV
26 minutes ago
tiger death chamarajanagara
Chamarajanagar

ಚಾ.ನಗರ| ಕೇರಳಿಗ ಜಮೀನಿಗೆ ಅಳವಡಿಸಿದ್ದ ಅಕ್ರಮ ವಿದ್ಯುತ್ ತಂತಿ ಸ್ಪರ್ಶಿಸಿ ಹುಲಿ ಸಾವು

Public TV
By Public TV
59 minutes ago
Raichur KKRTC Accident Woman Death
Crime

ಬಸ್ ನಿಲ್ದಾಣದಲ್ಲಿ ಕೆಕೆಆರ್‌ಟಿಸಿ ಬಸ್ ಹರಿದು ಮಹಿಳೆ ಸಾವು

Public TV
By Public TV
1 hour ago
kabul hospital pakistan strike
Latest

ಅಫ್ಘಾನ್‌ ಇತಿಹಾಸದಲ್ಲೇ ಅತ್ಯಂತ ಭೀಕರ: ಕಾಬೂಲ್‌ ಆಸ್ಪತ್ರೆ ಮೇಲೆ ಪಾಕಿಸ್ತಾನ ದಾಳಿ – 400 ಜನರು ಸಾವು

Public TV
By Public TV
2 hours ago
Iran Israel War
Latest

18ನೇ ದಿನಕ್ಕೆ ಕಾಲಿಟ್ಟ ಯುದ್ಧ – ಇರಾನ್‌ನ 200ಕ್ಕೂ ಹೆಚ್ಚು ಸೇನಾ ನೆಲೆಗಳು ಉಡೀಸ್

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?