ತುಂಬುವ ಹಂತದಲ್ಲಿದೆ ಯಗಚಿ ಜಲಾಶಯ- ಸ್ಥಳೀಯರಲ್ಲಿ ಮನವಿ

Public TV
0 Min Read
Yagachi dam

ಹಾಸನ: ಯಗಚಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಡ್ಯಾಂ ತುಂಬುವ ಹಂತದಲ್ಲಿದೆ.

ಮೂಡಿಗೆರೆ, ಬೇಲೂರು ಮತ್ತು ಚಿಕ್ಕಮಗಳೂರು ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಹಿನ್ನೆಲೆ ಹಾಸನ ಜಿಲ್ಲೆ ಬೇಲೂರು ತಾಲೂಕಿನಲ್ಲಿರುವ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಹೀಗಾಗಿ ಜಲಾಶಯದಿಂದ ಯಾವುದೇ ಕ್ಷಣದಲ್ಲಾದರೂ ಯಗಚಿ ನದಿಗೆ ನೀರು ಬಿಡುವ ಸಂಭವವಿದೆ.

Yagachi Dam 3

ಅಣೆಕಟ್ಟೆಯ ಕೆಳಭಾಗದ, ನದಿಪ್ರದೇಶದಲ್ಲಿ ಇರುವ ಜನರು ತಮ್ಮ ಜನಜಾನುವಾರು, ಆಸ್ತಿಪಾಸ್ತಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿಕೊಳ್ಳಲು ಯಗಚಿ ಯೋಜನಾ ವಿಭಾಗದ ಕಾರ್ಯಪಾಲಕ ಅಭಿಯಂತರ ಹೆಚ್‍ಟಿ.ದಿನೇಶ್ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರ ಗಡಿಯುದ್ದಕ್ಕೂ ಕಾಡ್ಗಿಚ್ಚು – ನೆಲಬಾಂಬ್‌ಗಳು ಸ್ಫೋಟ

 

Share This Article
Leave a Comment

Leave a Reply

Your email address will not be published. Required fields are marked *