ವಿಜಯಪುರ: ಮಹಿಳೆಯೋರ್ವಳನ್ನು ಬೆತ್ತಲೆಗೊಳಿಸಿ ಥಳಿಸಿದ ಅಮಾನವೀಯ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಸಾವಿತ್ರಿ ದುಂಡಯ್ಯ ಗೋಡ್ಯಾಳ ಹಲ್ಲೆಗೊಳಗಾಗಿರುವ ಮಹಿಳೆ. ಸಾವಿತ್ರಿ ತಮ್ಮದೇ ಗ್ರಾಮದ ಮೌಲಾಲಿ ಎಂಬ ವ್ಯಕ್ತಿಯ ಜೊತೆ ನಿಂತುಕೊಂಡಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ ಮೌಲಾಲಿ ಪತ್ನಿ ಸುಗರಾ ಮತ್ತು ಆಕೆಯ ಸಹೋದರ ಸಿಕಂದರ್ ಇಬ್ಬರೂ ಸಾವಿತ್ರಿಯವರನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದಾರೆ. ಸಾವಿತ್ರಿ ನನ್ನ ಪತ್ನಿ ಮೌಲಾಲಿ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಸುಗರಾ ಆರೋಪ ಮಾಡಿದ್ದಾರೆ.
ಆರೋಪವನ್ನು ತಳ್ಳಿ ಹಾಕಿರುವ ಸಾವಿತ್ರಿ, ನನಗೂ ಮೌಲಾಲಿ ನಡುವೆ ಸಂಬಂಧವಿಲ್ಲ. ನಮ್ಮಿಬ್ಬರ ಮಧ್ಯೆ ಕೇವಲ ಹಣಕಾಸಿನ ವ್ಯವಹಾರವಿತ್ತು. ಸುಗರಾ ಹಾಗೂ ಸಿಕಂದರ್ ಚಾಕೂವಿನಿಂದ ನನ್ನ ಬಟ್ಟೆ ಹಾಗೂ ಮೌಲಾಲಿ ಬಟ್ಟೆ ಹರಿದುಹಾಕಿ ಬೆತ್ತಲೆ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಹಲ್ಲೆಗೊಳಗಾದ ಸಾವಿತ್ರಿಯನ್ನು ಇಂಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಇದೂವರೆಗೂ ಯಾವುದೇ ದೂರುಗಳು ದಾಖಲಾಗಿಲ್ಲ. ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
https://www.youtube.com/watch?v=OmSaJj_UbpU