ತುಮಕೂರು: ಮಹಿಳೆಯೊಬ್ಬರು ಪೊಲೀಸ್ ಠಾಣೆ ಎದುರು ವಿಷದ ಬಾಟಲಿ ಹಿಡಿದು ಪ್ರತಿಭಟನೆ ನಡೆಸಿರುವ ಘಟನೆ ತುಮಕೂರಿನ ತಿಪಟೂರು ತಾಲೂಕಿನ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಬೆಳಗರಹಳ್ಳಿ ನಿವಾಸಿ ಉಮಾ ಅವರ ತೋಟಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದ ಶಿವಶಂಕರಯ್ಯ ರನ್ನು ಪೊಲೀಸರು ಬಂಧಿಸದ ಕಾರಣ ಪ್ರತಿಭಟನೆ ನಡೆಸಿದ್ದಾರೆ. ಪಕ್ಕದ ತೋಟದ ಶಿವಶಂಕರಯ್ಯ ಹಾಗೂ ಊಮಾ ಅವರ ಜಮೀನು ವಿವಾದ ಕೋರ್ಟ್ ನಲ್ಲಿದ್ದು ತಡೆಯಾಜ್ಞೆ ನೀಡಿದೆ.
ಆದರೂ ಶಿವಶಂಕರಯ್ಯ ತೋಟಕ್ಕೆ ಅತಿಕ್ರಮವಾಗಿ ಪ್ರವೇಶಿಸಿ ಲೋಡ್ ಗಟ್ಟಲೆ ತೆಂಗಿನ ಕಾಯಿ ಕಿತ್ತುಕೊಂಡು ಹೋಗಿದ್ದು, ಶಿವಶಂಕರಯ್ಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಎಫ್ಐಆರ್ ಆಗಿ ಒಂದು ವಾರ ಕಳೆದರೂ ಕನಿಷ್ಟ ವಿಚಾರಣೆಯನ್ನೂ ಮಾಡಿಲ್ಲ ಎಂದು ಉಮಾ ಧರಣಿ ನಡೆಸುತ್ತಿದ್ದಾರೆ.