ಮುಂಬೈ: ನಾಗ್ಪುರ ರೈಲು ನಿಲ್ದಾಣದಲ್ಲಿ (Nagpur station) ರೈಲು (Train) ಚಲಿಸುತ್ತಿದ್ದ ವೇಳೆ ಪ್ಲಾಟ್ಫಾರ್ಮ್ನಿಂದ (Platform) ಬಿದ್ದು ಮಹಿಳೆಯೊಬ್ಬಳು (Woman) ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದಲ್ಲಿ (Maharashtra) ನಡೆದಿದೆ.
ಗಾಯತ್ರಿ ಸ್ವಾಮಿವಿವೇಕಾನಂದ ಪಾಂಡೆ ಮೃತ ಮಹಿಳೆ. ಈಕೆ ದಾನಪುರ- ಬೆಂಗಳೂರು ಎಕ್ಸ್ಪ್ರೆಸ್ ರೈಲಿನಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದರು. ನಾಗ್ಪುರ ನಿಲ್ದಾಣದಲ್ಲಿ ತಿಂಡಿಯನ್ನು ತೆಗೆದುಕೊಳ್ಳಲು ರೈಲು ನಿಂತಿದ್ದಾಗ ಇಳಿದಿದ್ದಾಳೆ. ಆದರೆ ಆಕೆ ತಿಂಡಿಯನ್ನು ತೆಗೆದುಕೊಳ್ಳುತ್ತಿದ್ದಾಗಲೇ ರೈಲು ಚಲಿಸಲು ಪ್ರಾರಂಭವಾಗಿದೆ.

ಇದನ್ನು ಗಮನಿಸಿದ ಗಾಯತ್ರಿ ರೈಲನ್ನು ಹತ್ತಲು ಪ್ರಯತ್ನಿಸಿದ್ದಾಳೆ. ಆದರೆ ಆಕೆ ರೈಲು ಮತ್ತು ಪ್ಲಾಟ್ಫಾರ್ಮ್ ನಡುವಿನ ಅಂತರದಲ್ಲಿ ಜಾರಿ ಬಿದ್ದಿದ್ದಾಳೆ. ಈ ವೇಳೆ ಆಕೆಯ ತಲೆಗೆ ಗಂಭೀರ ಪೆಟ್ಟು ಬಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಸಿದ್ದರಾಮಯ್ಯ ಸ್ಪರ್ಧೆ ಕೋಲಾರದಿಂದ ಖಚಿತ, ವರುಣಾ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿː ಯತೀಂದ್ರ
ಘಟನೆಯ ನಂತರ ರೈಲನ್ನು ನಿಲ್ಲಿಸಲಾಯಿತು. ಘಟನೆಗೆ ಸಂಬಂಧಿಸಿ ಆಕೆಯ 19ರ ಹಾಗೂ 23 ವರ್ಷದ ಹೆಣ್ಣು ಮಕ್ಕಳಿಗೆ ವಿಷಯ ತಿಳಿಸಲಾಗಿದೆ ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದ್ದಾರೆ. ಇದನ್ನೂ ಓದಿ: ಕೆ.ಆರ್.ಪುರಂ- ವೈಟ್ಫಿಲ್ಡ್ ಮೆಟ್ರೋ ಸಂಚಾರ ಸದ್ಯದಲ್ಲೇ ಮುಕ್ತ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k